ಆ್ಯಪ್ನಗರ

ಕಾಶ್ಮೀರದ ಕುರಿತು ನಿರ್ಣಯ ಮಂಡಿಸಿದ್ದ ಭಾರತ ಮೂಲದ ಅಮೆರಿಕ ಸಂಸದೆ ಭೇಟಿಗೆ ಜೈಶಂಕರ್‌ ನಕಾರ

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧಗಳ ತೆರವಿಗೆ ಆಗ್ರಹಿಸಿ ಅಮೆರಿಕ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದ ಭಾರತ ಮೂಲದ ಸಂಸದೆ ಪ್ರಮೀಳಾ ಜಯಪಾಲ್‌ ಭೇಟಿಗೆ ಸಚಿವ ಎಸ್‌. ಜೈಶಂಕರ್‌ ನಿರಾಕರಿಸಿದ್ದಾರೆ.

Vijaya Karnataka Web 21 Dec 2019, 3:50 pm
ವಾಷಿಂಗ್ಟನ್‌: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧಗಳ ಸಂಪೂರ್ಣ ತೆರವಿಗೆ ಆಗ್ರಹಿಸಿ ಅಮೆರಿಕ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದ ಭಾರತ ಮೂಲದ ಸಂಸದೆ ಪ್ರಮೀಳಾ ಜಯಪಾಲ್‌ ಅವರ ಭೇಟಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ನಿರಾಕರಿಸಿದ್ದಾರೆ.
Vijaya Karnataka Web jaishankar Pramila Jayapal


''ನನಗೆ ನಿರ್ಣಯದ ಬಗ್ಗೆ ಮಾಹಿತಿಯಿದೆ. ಅದನ್ನು ಮಂಡಿಸುವಾಗ ಕಾಶ್ಮೀರದ ವಸ್ತುಸ್ಥಿತಿಯನ್ನು ಅರ್ಥೈಸಿಕೊಳ್ಳಲು ವಿಫಲರಾಗಿದ್ದಾರೆ. ಅಲ್ಲಿ ಕೇಂದ್ರ ಸರಕಾರ ಯಾಕೆ ನಿರ್ಬಂಧ ಹೇರಿದೆ ಎಂಬ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಜತೆಗೆ ನನಗೆ ಅವರನ್ನು (ಜೈಪಾಲ್‌) ಭೇಟಿ ಮಾಡುವ ಆಸಕ್ತಿ ಇಲ್ಲವೇ ಇಲ್ಲ,'' ಎಂದು ಸುದ್ದಿಗಾರರಿಗೆ ಜೈಶಂಕರ್‌ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದ ರಕ್ಷಣಾ ಸಚಿವ ಮತ್ತು ವಿದೇಶಾಂಗ ಸಚಿವರೊಂದಿಗೆ 2+2 ಮಾತುಕತೆಗಾಗಿ ಸಚಿವ ಜೈಶಂಕರ್‌ ಅವರು ವಾಷಿಂಗ್ಟನ್‌ಗೆ ತೆರಳಿದ್ದರು. ಶುಕ್ರವಾರ ಭಾರತಕ್ಕೆ ಮರಳುವ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಜೈಪಾಲ್‌ ಭೇಟಿ ನಿರಾಕರಣೆಗೆ ಕಾರಣ ನೀಡಿದ್ದಾರೆ. ಪ್ರಮೀಳಾ ಸದಸ್ಯೆಯಾಗಿರುವ ಸಂಸದೀಯ ಸಮಿತಿ ಜತೆ ಜೈಶಂಕರ್‌ ಮಾತುಕತೆ ನಡೆಸಬೇಕಿತ್ತು. ಈ ಕಾರ್ಯಕ್ರಮವನ್ನು ಸಚಿವರು ಹಠಾತ್‌ ರದ್ದುಪಡಿಸಿದರು.

ಅಮೆರಿಕ ಗಡಿ ನೀತಿ ವಿರೋಧಿಸಿ ಪ್ರತಿಭಟನೆ: ಪ್ರಮಿಳಾ ಬಂಧನ

''ಭವಿಷದ್ಯಲ್ಲಿ ಕೂಡ ನಾನು ಹಲವು ವ್ಯಕ್ತಿಗಳನ್ನು ಭೇಟಿಯಾಗಿ ಅವರ ಪ್ರಶ್ನೆಗಳಿಗೆ, ಸಂಶಯಗಳಿಗೆ ಪ್ರತಿಕ್ರಿಯಿಸಲು ಇಚ್ಛಿಸುತ್ತೇನೆ. ಆದರೆ ಅವರು ಮುಕ್ತ ಮನಸ್ಸು ಹೊಂದಿರಬೇಕು. ಕೆಲವರು ಈಗಾಗಲೇ ಪೂರ್ವನಿರ್ಧರಿತರಾಗಿದ್ದಾರೆ. ಅಂತಹವರನ್ನು ಭೇಟಿ ಮಾಡಲು ಬಯಸುವುದಿಲ್ಲ,'' ಎಂದು ಪರೋಕ್ಷವಾಗಿ ಸಂಸದೆ ಪ್ರಮೀಳಾಗೆ ಟಾಂಗ್‌ ಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ