ಆ್ಯಪ್ನಗರ

ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಯಲ್ಲಿಇಮ್ರಾನ್‌ ಸರಕಾರ ವಿಫಲವೆಂದ ಪಾಕ್‌ ಸಂಸದೀಯ ಸಮಿತಿ!

ಯುವತಿಯರಿಗೆ ತಮ್ಮ ವರನನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಆದರೆ ಬಲವಂತದ ಮದುವೆಯಿಂದ ಅವರ ಕುಟುಂಬಸ್ಥರು ಎದುರಿಸಿರುವ ನೋವನ್ನು ಆಡಳಿತ ಯಂತ್ರ ಕಡೆಗಣಿಸಿದೆ. ಅದರೊಂದಿಗೆ ಬಲವಂತದ ಮದುವೆ, ಹಣದ ಆಮಿಷಕ್ಕಾಗಿ ಮದುವೆ, ಯುವತಿಗೆ ಇಷ್ಟವಾದರೂ ಕುಟುಂಬದವರ ಇಚ್ಛೆಗೆ ವಿರುದ್ಧ ಮದುವೆ ಎಂದು ಹಲವು ಪ್ರಕರಣಗಳನ್ನು ಸೃಷ್ಟಿಸಿ ದೌರ್ಜನ್ಯ ಪ್ರಕರಣಗಳಲ್ಲಿ ಗೊಂದಲ ಮೂಡಿಸಲಾಗುತ್ತಿದೆ, ಎಂದೂ ಸಮಿತಿ ತಿಳಿಸಿದೆ.

Vijaya Karnataka 21 Oct 2020, 7:51 am
ಇಸ್ಲಾಮಾಬಾದ್‌: ಆಡಳಿತಾರೂಢ ಇಮ್ರಾನ್‌ ಖಾನ್‌ ನೇತೃತ್ವದ ಸರಕಾರ ಪಾಕಿಸ್ತಾನದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬಲವಂತದ ಮತಾಂತರಗಳನ್ನು ತಡೆಯಲಾಗದೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಪಾಕ್‌ನ ಸಂಸದೀಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
Vijaya Karnataka Web Imran Khan
Under the plan a number of rallies public meetings and demonstrations will be held across the country, before a "decisive long march" to Islamabad in January next year.


ಹಿಂದೂ ಬಾಲಕಿಯರ ಮೇಲೆ ದೌರ್ಜನ್ಯ ಮತ್ತು ಬಲವಂತದ ಮತಾಂತರದ ಹಲವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸಂಸದ ಅನ್ವರುಲ್ಲಾಹಕ್‌ ಕಾಕರ್‌ ನೇತೃತ್ವದ ಸಂಸದೀಯ ಸಮಿತಿ ಸಿಂಧ್‌ ಪ್ರಾಂತ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

''ಯುವತಿಯರಿಗೆ ತಮ್ಮ ವರನನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಆದರೆ ಬಲವಂತದ ಮದುವೆಯಿಂದ ಅವರ ಕುಟುಂಬಸ್ಥರು ಎದುರಿಸಿರುವ ನೋವನ್ನು ಆಡಳಿತ ಯಂತ್ರ ಕಡೆಗಣಿಸಿದೆ. ಅದರೊಂದಿಗೆ ಬಲವಂತದ ಮದುವೆ, ಹಣದ ಆಮಿಷಕ್ಕಾಗಿ ಮದುವೆ, ಯುವತಿಗೆ ಇಷ್ಟವಾದರೂ ಕುಟುಂಬದವರ ಇಚ್ಛೆಗೆ ವಿರುದ್ಧ ಮದುವೆ ಎಂದು ಹಲವು ಪ್ರಕರಣಗಳನ್ನು ಸೃಷ್ಟಿಸಿ ದೌರ್ಜನ್ಯ ಪ್ರಕರಣಗಳಲ್ಲಿ ಗೊಂದಲ ಮೂಡಿಸಲಾಗುತ್ತಿದೆ,'' ಎಂದೂ ಸಮಿತಿ ತಿಳಿಸಿದೆ.

ಅಮೆರಿಕದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಸಂಬಂಧಿ ಕ್ಷಮೆಗೆ ಅಮೆರಿಕ ಹಿಂದೂ ಸಂಘಟನೆಗಳ ಆಗ್ರಹ, ಕಾರಣವೇನು?

ಪಾಕಿಸ್ತಾನದಲ್ಲಿ ಮತಾಂತರ ಮಾಡಿ ಮದುವೆ ಮಾಡುವ ಹಲವು ಪಿತೂರಿಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಇಷ್ಟವಿಲ್ಲದಿದ್ದರು ಅನ್ಯಕೋಮಿನ ಯುವಕ ಯುವತಿಯನ್ನು ಅಪಹರಿಸಿ ಮದುವೆಯಾಗಿದ್ದ ಯುವತಿಯ ಕುಟುಂಬಸ್ಥರು ಕೋರ್ಟ್‌ ಮೆಟ್ಟಿಲೇರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ