ಆ್ಯಪ್ನಗರ

ಎಲ್ಲದಕ್ಕೂ ಪಾಕ್ ಅನ್ನು ಹೊಣೆಯಾಗಿಸುವುದು ಸರಿಯಲ್ಲ: ಇಮ್ರಾನ್ ಖಾನ್

​ಪಾಕಿಸ್ತಾನದ ಮನಸ್ಥಿತಿ ಬದಲಾಗಿದ್ದು, ಮಾತುಕತೆಗೆ ನಾವು ಸಿದ್ಧರಿದ್ದೇವೆ, ಭಾರತ ಕೂಡ ತಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಸಕಾರಾತ್ಮಕ ಸ್ಪಂದನೆ ನೀಡಬೇಕು.

Vijaya Karnataka Web 30 Nov 2018, 11:17 am
ಇಸ್ಲಾಮಾಬಾದ್: 26/11ರ ಮುಂಬಯಿ ಉಗ್ರದಾಳಿ, ಕಾಶ್ಮೀರದಲ್ಲಿನ ಸಮಸ್ಯೆ ಬಗ್ಗೆ ಭಾರತ ಪಾಕಿಸ್ತಾನವನ್ನು ದೂರುವುದು ಸರಿಯಲ್ಲ. ಪಾಕಿಸ್ತಾನದ ನೆಲದಲ್ಲಿ ಉಗ್ರಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
Vijaya Karnataka Web pak pm imran khan says he is ready to have bilateral dialogue with india
ಎಲ್ಲದಕ್ಕೂ ಪಾಕ್ ಅನ್ನು ಹೊಣೆಯಾಗಿಸುವುದು ಸರಿಯಲ್ಲ: ಇಮ್ರಾನ್ ಖಾನ್


ಕಾಶ್ಮೀರದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಇಮ್ರಾನ್ ಖಾನ್, ಭಾರತವು ಕಾಶ್ಮೀರದ ಜನತೆಗಾಗಿ ಏನಾದರೂ ಮಾಡಬೇಕಿದೆ. ಅಲ್ಲಿನ ಜನರ ಸಮಸ್ಯೆ ಹೋಗಲಾಡಿಸಲು ಸರಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಭಯ ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧ, ಮಾತುಕತೆ ಸ್ಥಗಿತಗೊಂಡಿದೆ. ಭಾರತದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಅದಾದ ಬಳಿಕ ಭಾರತ ಮತ್ತೆ ಮಾತುಕತೆ ಮುಂದುವರಿಸುವ ನಿರೀಕ್ಷೆಯಿದೆ ಎಂದಿರುವ ಇಮ್ರಾನ್, ಮಾತುಕತೆಗೆ ಪಾಕ್ ಉತ್ಸುಕವಾಗಿದೆ.

ಪಾಕಿಸ್ತಾನದ ಮನಸ್ಥಿತಿ ಬದಲಾಗಿದ್ದು, ಮಾತುಕತೆಗೆ ನಾವು ಸಿದ್ಧರಿದ್ದೇವೆ, ಭಾರತ ಕೂಡ ತಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಸಕಾರಾತ್ಮಕ ಸ್ಪಂದನೆ ನೀಡಬೇಕು ಎಂದಿದ್ದಾರೆ.

ಉಗ್ರವಾದ ಮಟ್ಟಹಾಕಲು ಪಾಕಿಸ್ತಾನ ಕೂಡ ಶ್ರಮಿಸುತ್ತಿದೆ. ಆದರೆ ಭಾರತ ಅದನ್ನು ಅರ್ಥಮಾಡಿಕೊಳ್ಳಬೇಕು, ಅದರ ಹೊರತು ಈ ಹಿಂದಿನ ಉಗ್ರದಾಳಿಗೆ ಪಾಕಿಸ್ತಾನವನ್ನು ದೂರುವುದು ಸರಿಯಲ್ಲ ಎಂದು ಇಮ್ರಾನ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ