ಆ್ಯಪ್ನಗರ

ಯುದ್ಧವಾಗಲಿ, ಅಣ್ವಸ್ತ್ರ ಪ್ರಯೋಗವಾಗಲಿ, ನಮ್ಮ ಕಡೆಯಿಂದ ಆರಂಭವಾಗಲ್ಲ: ಇಮ್ರಾನ್ ಖಾನ್

ಕಾಶ್ಮೀರದ ಮೇಲೆ ಭಾರತ ನಡೆಸುತ್ತಿರುವ ದೌರ್ಜನ್ಯವನ್ನು ತಡೆಯದಿದ್ದಲ್ಲಿ, ಎರಡು ಅಣ್ವಸ್ತ್ರ ರಾಷ್ಟ್ರಗಳು ಯುದ್ದಕ್ಕೆ ಇಳಿಯುವುದು ನಿಶ್ಚಿತ, ಎಂದು ಇಮ್ರಾನ್ ಕಳೆದೆರಡು ದಿನಗಳ ಹಿಂದೆ ಹೇಳಿದ್ದರು.

TIMESOFINDIA.COM 3 Sep 2019, 8:30 am
ಇಸ್ಲಾಮಾಬಾದ್: ಪಾಕಿಸ್ತಾನದ ಯುದ್ಧೋನ್ಮಾದ ಏಕಾಏಕಿ ತಣ್ಣಗಾದಂತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಬಾಲ್ತೋರೊ ಸೆಕ್ಟರ್‌ಗೆ ಒಳಪಡುವ ಸಕಾರ್ದು ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಬಂಕರ್ ನಿರ್ಮಾಣ ಮಾಡುತ್ತಿದೆ ಎಂಬ ಮಾಹಿತಿ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಾವಾಗಿಯೇ ಮೊದಲು ಯುದ್ಧ ಆರಂಭಿಸುವುದಿಲ್ಲ, ಜತೆಗೆ ಅಣ್ವಸ್ತ್ರ ಪ್ರಯೋಗಿಸುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Vijaya Karnataka Web imran


ಸೋಮವಾರ ಲಾಹೋರ್‌ನಲ್ಲಿರುವ ಗವರ್ನರ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಮೊದಲ ಅಂತರಾಷ್ಟ್ರೀಯ ಸಿಖ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಭಾರತ ಮತ್ತು ಪಾಕಿಸ್ತಾನ, ಎರಡೂ ಸಹ ಅಣ್ವಸ್ತ್ರ ರಾಷ್ಟ್ರಗಳಾಗಿವೆ. ನಮ್ಮ ನಡುವೆ ಈಗಿರುವ ಉದ್ವಿಗ್ನತೆ ತೀವ್ರಗೊಂಡಲ್ಲಿ ಜಗತ್ತು ಅಪಾಯಕ್ಕೆ ಸಿಲುಕಬಹುದು. ಆದರೆ ಯುದ್ಧ ಮತ್ತು ಅಣ್ವಸ್ತ್ರ ಪ್ರಯೋಗ ಮೊದಲು ನಮ್ಮ ಕಡೆಯಿಂದ ಆರಂಭವಾಗಲು ಸಾಧ್ಯವೇ ಇಲ್ಲ ಎಂದರು.

ಯುದ್ಧಕ್ಕೆ ಸಜ್ಜಾಗುತ್ತಿರುವ ವರದಿಯನ್ನು ತಳ್ಳಿ ಹಾಕಿದ ಖಾನ್, "ಯುದ್ಧವು ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದೆಂದು ನಾನು ನಂಬುವುದಿಲ್ಲ. ಯುದ್ಧ ಮಾಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ ಪ್ರತಿಯೊಬ್ಬರೂ ಗೆಲುವಿನಲ್ಲೂ ಸೋತಿದ್ದಾರೆ. ಯುದ್ಧದ ಮೂಲಕ ಒಂದು ಸಮಸ್ಯೆಗೆ ಪರಿಹಾರ ಕಂಡುಕೊಂಡರೂ ಅದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಯುದ್ಧದಿಂದ ಉಂಟಾದ ನಷ್ಟದಿಂದ ಚೇತರಿಸಿಕೊಳ್ಳಲು ದೇಶಕ್ಕೆ ವರ್ಷಗಳೇ ಬೇಕಾಗುತ್ತವೆ ಎಂದವರು ಹೇಳಿದ್ದಾರೆ.

ಯುದ್ಧೋನ್ಮಾದಿ ಪಾಕ್‌ನಿಂದ ಗಡಿಯಲ್ಲಿ ಸೇನಾ ಬಂಕರ್ ನಿರ್ಮಾಣ

ಆದರೆ ಜಮ್ಮು ಮತ್ತು ಕಾಶ್ಮೀರದ ಜನರಿಗಾಗಿ ಧ್ವನಿ ಎತ್ತುವುದನ್ನು ನಾವು ಮುಂದುವರಿಸಲಿದ್ದೇವೆ. ಮಾನವೀಯತೆಯನ್ನು ಹೊಂದಿರುವ ಯಾರು ಕೂಡ ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯನ್ನು ಸಹಿಸಲಾರರು. ನೀವು ಎಂಟು ದಶಲಕ್ಷ ಜನರನ್ನು 27 ದಿನಗಳವರೆಗೆ ಬಂಧನದಲ್ಲಿರಿಸಿದ್ದಿರಿ ಮತ್ತು ಎಲ್ಲಾ ಸಂವಹನಗಳನ್ನು ಕಡಿತಗೊಳಿಸಿದ್ದೀರಿ, ಇದನ್ನು ನಾವು ಸಹಿಸಲು ಸಾಧ್ಯವೇ ಇಲ್ಲ. ಕಾಶ್ಮೀರಿಗಳು ಮುಸ್ಲಿಮೇತರರಾಗಿದ್ದರೂ ಕೂಡ ನಾನು ಈ ಬಗ್ಗೆ ಧ್ವನಿ ಎತ್ತುತ್ತಿದ್ದೆ, ಎಂದಿದ್ದಾರೆ ಖಾನ್.

ಕಾಶ್ಮೀರದ ಬದಲು ದೇಶದ ಆರ್ಥಿಕತೆಯತ್ತ ಗಮನ ಕೊಡಿ: ಇಮ್ರಾನ್‌ಗೆ 15 ವರ್ಷದ ಪಾಕ್ ಬಾಲಕನ ಸಲಹೆ

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ , ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯಗೊಳಿಸಲು ಹೋಗಿ ಎಲ್ಲೆಡೆಯಿಂದ ತೀವ್ರ ಮುಖಭಂಗ ಎದುರಿಸಿದ್ದ ಪಾಕ್ ಯುದ್ಧೋನ್ಮಾದಿ ಹೇಳಿಕೆ ನೀಡಿತ್ತು. ಆದರೆ ಈಗ ಏಕಾಏಕಿ ಶಾಂತಿ ಮಂತ್ರ ಜಪಿಸುತ್ತಿದೆ.

ಖಡ್ಗ ಹಿಡಿದು ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ ಮಾಜಿ ನಾಯಕ ಜಾವೇದ್ ಮಿಯಾಂದಾದ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ