ವಿಶ್ವಸಂಸ್ಥೆ: ಪಾಕಿಸ್ತಾನವನ್ನು ಭಾರತ 'ಉಗ್ರ ರಾಷ್ಟ್ರ' ಎಂದು ಪುನರುಚ್ಛರಿಸಿದ್ದು, 'ಯುದ್ಧ ಅಫರಾಧ'ಗಳನ್ನು ನಡೆಸುತ್ತಿದೆ. ಭಾರತದ ವಿರುದ್ಧ ಭಯೋತ್ಪಾದನೆ ನಡೆಸುವುದನ್ನು 'ಸುದೀರ್ಘ ಕಾಲದ ನೀತಿ'ಯನ್ನಾಗಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.
ಭಾರತ ವಿರುದ್ಧ ವಿಶ್ವಸಂಸ್ಥೆಯ 71ನೇ ಸಾಮಾನ್ಯ ಅಧಿವೇಶನ ಉದ್ದೇಶಿಸಿ ಬುಧವಾರ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಆರೋಪಗಳ ಸುರಿಮಳೆಗೈದ ಬೆನ್ನಲ್ಲೇ, ಭಯೋತ್ಪದಾನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನವನ್ನು ಭಾರತ ಕಟುವಾಗಿ ಟೀಕಿಸಿದೆ.
ಷರೀಫ್ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಪ್ರತ್ಯುತ್ತರ ನೀಡಿರುವ ಭಾರತ, 'ವಿಶ್ವಸಂಸ್ಥೆಯೇ ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟಿರುವ ಉಗ್ರರನ್ನು ಬೀದಿ ಬೀದಿಗಳಲ್ಲಿ ಆರಾಮಾಗಿ ಓಡಾಡಿಕೊಂಡಿರಲು ಪಾಕಿಸ್ತಾನ ಅನುವು ಮಾಡಿಕೊಟ್ಟಿದೆ,' ಎಂದು ಹೇಳಿದೆ.
ವಿಶ್ವಸಂಸ್ಥೆಗೆ ಮೊದಲ ಖಾಯಂ ಕಾರ್ಯದರ್ಶಿಯಾಗಿರುವ ಏನಮ್ ಗಂಭೀರ್ ಮಾತನಾಡಿ, 'ಭಯೋತ್ಪಾದನೆ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಯುದ್ಧ ಅಪರಾಧವನ್ನು ಪಾಕಿಸ್ತಾನವೇ ರಾಷ್ಟ್ರ ನೀತಿಯನ್ನಾಗಿಸಿಕೊಂಡಿದೆ. ಪಾಕಿಸ್ತಾನದ ಈ ನೀತಿಯಿಂದಾಗಿಯೇ ಭಾರತ ಹಾಗೂ ನಮ್ಮ ಇತರೆ ರಾಷ್ಟ್ರಗಳು ನೋವು ಅನುಭವಿಸುತ್ತಿದೆ. ಇದೀಗ ಪರಿಸ್ಥಿತಿ ಕೈ ಮೀರಿದ್ದು, ಭಯೋತ್ಪಾದನೆ ಎಲ್ಲೆಡೆ ಹಬ್ಬಿದಂತಾಗಿದೆ,' ಎಂದು ಹೇಳಿದರು.
'ಉಗ್ರರಿಗೆ ತರಬೇತಿ ಹಾಗೂ ಆರ್ಥಿಕ ನೆರವು ನೀಡುವುಲ್ಲದೇ, ನೆರೆ ರಾಷ್ಟ್ರಗಳ ವಿರುದ್ಧ ಉಗ್ರ ಕೃತ್ಯ ನಡೆಸಲು ಪಾಕಿಸ್ತಾನ ಅಂತಾರಾಷ್ಟ್ರೀಯ ನಿಧಿಯನ್ನು ಬಳಸಿಕೊಳ್ಳುತ್ತಿದೆ. ಆ ಕಾರಣದಿಂದ ಪಾಕಿಸ್ತಾವನ್ನು ಭಾರತ ಉಗ್ರ ರಾಷ್ಟ್ರವನ್ನಾಗಿಯೇ ನೋಡುತ್ತಿದೆ,' ಎಂದ ಗಂಭೀರ್, 'ಜೈಷೆ ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಮುಂಬಯಿ ಉಗ್ರ ದಾಳಿ ಮುಖ್ಯಸ್ಥ ಝಕೀರ್ ರೆಹ್ಮಾನ್ ಲಖ್ವಿ, ಅಲ್ಲದೇ ವಿಶ್ವಸಂಸ್ಥೆ ಘೋಷಿಸಿದ ಇತರೆ ಉಗ್ರ ಸಂಘಟನೆಗಳು ಹಾಗೂ ಉಗ್ರರನ್ನು ಪಾಕಿಸ್ತಾನ ಪೋಷಿಸುತ್ತಿದ್ದು, ಅವರು ಸ್ವಾತಂತ್ರ್ಯವಾಗಿರಲು ನೆರವು ನೀಡುತ್ತಿದೆ,' ಎಂದು ಅವರು ಆರೋಪಿಸಿದ್ದಾರೆ.
'ಅಲ್ಲದೇ ಸರಕಾರದ ಬೆಂಬಲದಿಂದಲೇ ಅನೇಕ ಉಗ್ರ ಸಂಘಟನೆಗಳು ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿ, ಅಗತ್ಯವಿದ್ದ ನಿಧಿ ಸಂಗ್ರಹಿಸುತ್ತಿದೆ. ಮತ್ತೊಂದೆಡೆ ಶಾಂತಿ ಕದಡುವಂಥ ಪರಮಾಣು ಪ್ರಸರಣಕ್ಕೆ ಮುಂದಾಗಿದೆ. ಅಲ್ಲದೇ ಭಾರತ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪದೆ ಪದೇ ಭಯೋತ್ಪಾದನೆಯನ್ನು ಹತ್ತಿಕ್ಕುವುದಾಗಿ ಹೇಳಿ ಸುಳ್ಳು ಭರವಸೆಗಳನ್ನು ನೀಡುತ್ತಿದೆ,' ಎಂದು ಗಂಭೀರ್ ಆರೋಪಿಸಿದ್ದಾರೆ.
'ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಸಾಕ್ಷ್ಯ ನೀಡಲು ಪಾಕಿಸ್ತಾನ ಸಿದ್ಧವಿದೆ. ಮಾತುಕತೆ ನಡೆಸಲು ನಾವು ಸಿದ್ಧ. ಆದರೆ, ಭಾರತ ಮಾತ್ರ ಸಮ್ಮತಾರ್ಹವಲ್ಲದ ಅನೇಕ ಷರತ್ತುಗಳನ್ನು ಮುಂದಿಡುತ್ತಿದೆ. ಮಾತುಕತೆ ಕೇವಲ ಒಂದು ರಾಷ್ಟ್ರಕ್ಕೆ ಅನುಕೂಲವಾಗುವುದಲ್ಲ. ಅದು ಉಭಯ ರಾಷ್ಟ್ರಗಳಿಗೂ ಸಮ್ಮತವೆವಿಸಬೇಕು,' ಎಂದು ಹೇಳಿದ್ದ ಷರೀಫ್ ಉಗ್ರ ಬುರ್ಹಾನ್ ವಾನಿ ಹತ್ಯೆಯನ್ನೂ ಖಂಡಿಸಿದ್ದರು.
India accuses Pakistan of war crimes
India on Thursday called Pakistan a " terrorist state " and accused it of carrying out "war crimes" against Indians through its "long-standing policy" of sponsoring terrorism, hours after Pakistan Prime Minister Nawaz Sharif racked up Kashmir issue at the UN General Assembly session.
ಭಾರತ ವಿರುದ್ಧ ವಿಶ್ವಸಂಸ್ಥೆಯ 71ನೇ ಸಾಮಾನ್ಯ ಅಧಿವೇಶನ ಉದ್ದೇಶಿಸಿ ಬುಧವಾರ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಆರೋಪಗಳ ಸುರಿಮಳೆಗೈದ ಬೆನ್ನಲ್ಲೇ, ಭಯೋತ್ಪದಾನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನವನ್ನು ಭಾರತ ಕಟುವಾಗಿ ಟೀಕಿಸಿದೆ.
ಷರೀಫ್ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಪ್ರತ್ಯುತ್ತರ ನೀಡಿರುವ ಭಾರತ, 'ವಿಶ್ವಸಂಸ್ಥೆಯೇ ಭಯೋತ್ಪಾದಕರೆಂದು ಹಣೆಪಟ್ಟಿ ಕಟ್ಟಿರುವ ಉಗ್ರರನ್ನು ಬೀದಿ ಬೀದಿಗಳಲ್ಲಿ ಆರಾಮಾಗಿ ಓಡಾಡಿಕೊಂಡಿರಲು ಪಾಕಿಸ್ತಾನ ಅನುವು ಮಾಡಿಕೊಟ್ಟಿದೆ,' ಎಂದು ಹೇಳಿದೆ.
ವಿಶ್ವಸಂಸ್ಥೆಗೆ ಮೊದಲ ಖಾಯಂ ಕಾರ್ಯದರ್ಶಿಯಾಗಿರುವ ಏನಮ್ ಗಂಭೀರ್ ಮಾತನಾಡಿ, 'ಭಯೋತ್ಪಾದನೆ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ,' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಯುದ್ಧ ಅಪರಾಧವನ್ನು ಪಾಕಿಸ್ತಾನವೇ ರಾಷ್ಟ್ರ ನೀತಿಯನ್ನಾಗಿಸಿಕೊಂಡಿದೆ. ಪಾಕಿಸ್ತಾನದ ಈ ನೀತಿಯಿಂದಾಗಿಯೇ ಭಾರತ ಹಾಗೂ ನಮ್ಮ ಇತರೆ ರಾಷ್ಟ್ರಗಳು ನೋವು ಅನುಭವಿಸುತ್ತಿದೆ. ಇದೀಗ ಪರಿಸ್ಥಿತಿ ಕೈ ಮೀರಿದ್ದು, ಭಯೋತ್ಪಾದನೆ ಎಲ್ಲೆಡೆ ಹಬ್ಬಿದಂತಾಗಿದೆ,' ಎಂದು ಹೇಳಿದರು.
'ಉಗ್ರರಿಗೆ ತರಬೇತಿ ಹಾಗೂ ಆರ್ಥಿಕ ನೆರವು ನೀಡುವುಲ್ಲದೇ, ನೆರೆ ರಾಷ್ಟ್ರಗಳ ವಿರುದ್ಧ ಉಗ್ರ ಕೃತ್ಯ ನಡೆಸಲು ಪಾಕಿಸ್ತಾನ ಅಂತಾರಾಷ್ಟ್ರೀಯ ನಿಧಿಯನ್ನು ಬಳಸಿಕೊಳ್ಳುತ್ತಿದೆ. ಆ ಕಾರಣದಿಂದ ಪಾಕಿಸ್ತಾವನ್ನು ಭಾರತ ಉಗ್ರ ರಾಷ್ಟ್ರವನ್ನಾಗಿಯೇ ನೋಡುತ್ತಿದೆ,' ಎಂದ ಗಂಭೀರ್, 'ಜೈಷೆ ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಮುಂಬಯಿ ಉಗ್ರ ದಾಳಿ ಮುಖ್ಯಸ್ಥ ಝಕೀರ್ ರೆಹ್ಮಾನ್ ಲಖ್ವಿ, ಅಲ್ಲದೇ ವಿಶ್ವಸಂಸ್ಥೆ ಘೋಷಿಸಿದ ಇತರೆ ಉಗ್ರ ಸಂಘಟನೆಗಳು ಹಾಗೂ ಉಗ್ರರನ್ನು ಪಾಕಿಸ್ತಾನ ಪೋಷಿಸುತ್ತಿದ್ದು, ಅವರು ಸ್ವಾತಂತ್ರ್ಯವಾಗಿರಲು ನೆರವು ನೀಡುತ್ತಿದೆ,' ಎಂದು ಅವರು ಆರೋಪಿಸಿದ್ದಾರೆ.
'ಅಲ್ಲದೇ ಸರಕಾರದ ಬೆಂಬಲದಿಂದಲೇ ಅನೇಕ ಉಗ್ರ ಸಂಘಟನೆಗಳು ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿ, ಅಗತ್ಯವಿದ್ದ ನಿಧಿ ಸಂಗ್ರಹಿಸುತ್ತಿದೆ. ಮತ್ತೊಂದೆಡೆ ಶಾಂತಿ ಕದಡುವಂಥ ಪರಮಾಣು ಪ್ರಸರಣಕ್ಕೆ ಮುಂದಾಗಿದೆ. ಅಲ್ಲದೇ ಭಾರತ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪದೆ ಪದೇ ಭಯೋತ್ಪಾದನೆಯನ್ನು ಹತ್ತಿಕ್ಕುವುದಾಗಿ ಹೇಳಿ ಸುಳ್ಳು ಭರವಸೆಗಳನ್ನು ನೀಡುತ್ತಿದೆ,' ಎಂದು ಗಂಭೀರ್ ಆರೋಪಿಸಿದ್ದಾರೆ.
'ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಸಾಕ್ಷ್ಯ ನೀಡಲು ಪಾಕಿಸ್ತಾನ ಸಿದ್ಧವಿದೆ. ಮಾತುಕತೆ ನಡೆಸಲು ನಾವು ಸಿದ್ಧ. ಆದರೆ, ಭಾರತ ಮಾತ್ರ ಸಮ್ಮತಾರ್ಹವಲ್ಲದ ಅನೇಕ ಷರತ್ತುಗಳನ್ನು ಮುಂದಿಡುತ್ತಿದೆ. ಮಾತುಕತೆ ಕೇವಲ ಒಂದು ರಾಷ್ಟ್ರಕ್ಕೆ ಅನುಕೂಲವಾಗುವುದಲ್ಲ. ಅದು ಉಭಯ ರಾಷ್ಟ್ರಗಳಿಗೂ ಸಮ್ಮತವೆವಿಸಬೇಕು,' ಎಂದು ಹೇಳಿದ್ದ ಷರೀಫ್ ಉಗ್ರ ಬುರ್ಹಾನ್ ವಾನಿ ಹತ್ಯೆಯನ್ನೂ ಖಂಡಿಸಿದ್ದರು.
India accuses Pakistan of war crimes
India on Thursday called Pakistan a " terrorist state " and accused it of carrying out "war crimes" against Indians through its "long-standing policy" of sponsoring terrorism, hours after Pakistan Prime Minister Nawaz Sharif racked up Kashmir issue at the UN General Assembly session.