ಆ್ಯಪ್ನಗರ

ಪಾತಕಿ ಅಜರ್‌ ನಮ್ಮಲ್ಲೇ ಇದ್ದಾನೆ, ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ

ಮಸೂದ್‌ನ ಜೈಷೆ ಮೊಹಮದ್‌ ಉಗ್ರ ಸಂಘಟನೆ ನಡೆಸಿರುವ ಪಾತಕ ಕೃತ್ಯಗಳ ಬಗ್ಗೆ ಭಾರತ ಸಾಕಷ್ಟು ಸಾಕ್ಷ್ಯಗಳನ್ನು ಹಸ್ತಾಂತರಿಸಿದೆ. ಅಮೆರಿಕ ಕೂಡ ಶುಕ್ರವಾರವಷ್ಟೇ ಮಸೂದ್‌ ಅಜರ್‌ ವಿರುದ್ಧ ಕಣ್ಣಿಗೆ ಕಾಣುವಂತಹ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ.

Vijaya Karnataka 2 Mar 2019, 5:00 am
ಇಸ್ಲಾಮಾಬಾದ್‌: ಪುಲ್ವಾಮಾ ದಾಳಿ ನಡೆಸಿದ ಉಗ್ರ ಸಂಘಟನೆ ಜೈಷೆ ಮೊಹಮದ್‌ ಸಂಸ್ಥಾಪಕ ಮಸೂದ್‌ ಅಜರ್‌ ತನ್ನ ದೇಶದಲ್ಲೇ ಇದ್ದಾನೆ ಎಂದು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ.
Vijaya Karnataka Web masood azhar


ಮಾಧ್ಯಮ ಸಂದರ್ಶನವೊಂದರಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ಅವರು, ''ಮಸೂದ್‌ ಅಜರ್‌ ಪಾಕಿಸ್ತಾನದಲ್ಲಿಯೇ ಇದ್ದಾನೆ. ನನ್ನ ಮಾಹಿತಿ ಪ್ರಕಾರ, ಆತ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಮನೆಯಿಂದ ಹೊರಗೆ ಕಾಲಿಡಲೂ ಆಗದಷ್ಟು ಅಶಕ್ತನಾಗಿದ್ದಾನೆ,'' ಎಂದು ತಿಳಿಸಿದ್ದಾರೆ. ಮಸೂದ್‌ ಬಂಧನಕ್ಕೆ ಜಾಗತಿಕ ಒತ್ತಡ ಇದ್ದರೂ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದಾಗ, ''ಆತನ ವಿರುದ್ಧ ಪ್ರಬಲ ಸಾಕ್ಷ್ಯಧಾರಗಳಿಲ್ಲ. ಸಾಕ್ಷ್ಯ ಇಲ್ಲದೇ ಆತನನ್ನು ಬಂಧಿಸಿದರೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸರಕಾರಕ್ಕೆ ಹಿನ್ನಡೆಯಾಗುತ್ತದೆ. ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕ ತಕ್ಷಣ ಆತನನ್ನು ಬಂಧಿಸುತ್ತೇವೆ,'' ಎಂದು ಹೇಳಿದ್ದಾರೆ.

ಮಸೂದ್‌ನ ಜೈಷೆ ಮೊಹಮದ್‌ ಉಗ್ರ ಸಂಘಟನೆ ನಡೆಸಿರುವ ಪಾತಕ ಕೃತ್ಯಗಳ ಬಗ್ಗೆ ಭಾರತ ಸಾಕಷ್ಟು ಸಾಕ್ಷ್ಯಗಳನ್ನು ಹಸ್ತಾಂತರಿಸಿದೆ. ಅಮೆರಿಕ ಕೂಡ ಶುಕ್ರವಾರವಷ್ಟೇ ಮಸೂದ್‌ ಅಜರ್‌ ವಿರುದ್ಧ ಕಣ್ಣಿಗೆ ಕಾಣುವಂತಹ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ. ಅಮೆರಿಕ, ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ಗಳು ಗುರುವಾರ ಮಸೂದ್‌ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಆಗ್ರಹಿಸಿವೆ. ಆದರೂ ಪಾಕಿಸ್ತಾನ ಸಾಕ್ಷ್ಯಾಧಾರದ ಕೊರತೆಯ ಕುಂಟುನೆಪ ಹೇಳುತ್ತಿದೆ.

''ಪಾಕಿಸ್ತಾನದಲ್ಲಿ ಈಗ ಭಿನ್ನ ಮನೋಭಾವದ ಸರಕಾರವಿದೆ. ನಾವು ಶಾಂತಿ ಮತ್ತು ದೇಶದ ಆರ್ಥಿಕ ಪ್ರಗತಿ ಬಯಸುತ್ತೇವೆ. 17 ವರ್ಷಗಳಿಂದ ನಡೆಯುತ್ತಿರುವ ಅಪಘಾನಿಸ್ತಾನ ಯುದ್ಧಕ್ಕೂ ಕೊನೆ ಹಾಡಲು ಬಯಸಿದ್ದೇವೆ,'' ಎಂದೂ ಖುರೇಶಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ