ಆ್ಯಪ್ನಗರ

ಧಾರ್ಮಿಕ ಸಭೆ ನಿಷೇಧಿಸಿದರೆ ಹುಷಾರ್: ಮೌಲ್ವಿಗಳ ಎಚ್ಚರಿಕೆಗೆ ಬೆದರಿದ ಇಮ್ರಾನ್ ಖಾನ್!

ಕೊರೊನಾ ವೈರಸ್ ಕಾರಣಕ್ಕೆ ಮಸೀದಿಗಳಲ್ಲಿ ನಡೆಯುವ ಧಾರ್ಮಿಕ ಸಭೆಗಳ ಮೇಲೆ ನಿಷೇಧ ಹೇರಿದರೆ ಹುಷಾರ್ ಎಂದು ಮೌಲ್ವಿಗಳ ಗುಂಪೊಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಎಚ್ಚರಿಸಿದೆ. ಯಾವುದೇ ಕಾರಣಕ್ಕೂ ಧಾರ್ಮಿಕ ಸಭೆಗಳ ವಿಷಯದಲ್ಲಿ ಮಧ್ಯಪ್ರವೇಶಿಸದಂತೆ ಮೌಲ್ವಿಗಳು ಸರ್ಕಾರವನ್ನು ಎಚ್ಚರಿಸಿದ್ದಾರೆ.

Indiatimes 14 Apr 2020, 3:33 pm
ಇಸ್ಲಾಮಾಬಾದ್: ಮಾರಕ ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಎಲ್ಲಾ ಸಾರ್ವಜನಿಕ ಆಚರಣೆಗಳನ್ನು, ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ವಿಶ್ವದ ಎಲ್ಲಾ ಸರ್ಕಾರಗಳೂ ಆದೇಶ ಹೊರಡಿಸಿವೆ. ಅಲ್ಲದೇ ಜನ ಕೂಡ ಮನೆಯಲ್ಲೇ ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಸಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ.
Vijaya Karnataka Web PM Imran Khan
ಸಂಗ್ರಹ ಚಿತ್ರ


ಆದರೆ ಇದಕ್ಕೆ ಪಾಕಿಸ್ತಾನ ಮಾತ್ರ ವ್ಯತಿರಿಕ್ತವಾಗಿದ್ದು, ಮೂಲಭೂತಚವಾದಿಗಳ ಕೆಂಗೆಣ್ಣಿಗೆ ಗುರಿಯಾಗುವ ಭಯದಿಂದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ಇದುವರೆಗೂ ಯಾವುದೇ ಕಠಿಣ ಆದೇಶಗಳನ್ನು ಹೊರಡಿಸಿಲ್ಲ. ಕೇವಲ ನೆಪ ಮಾತ್ರಕ್ಕೆ ಧಾರ್ಮಿಕ ಸಭೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಇದಕ್ಕೆ ಪುಷ್ಠಿ ಎಂಬಂತೆ ಧಾರ್ಮಿಕ ಸಭೆಗಳ ಮೇಲೆ ಯಾವುದೇ ಕಾರಣಕ್ಕೂ ನಿಷೇಧ ಹೇರದಂತೆ ಪಾಕಿಸ್ತಾನದ ಮೌಲ್ವಿಗಳ ಗುಂಪೊಂದು ಪ್ರಧಾನಿ ಇಮ್ರಾನ್ ಖಾನ ಅವರಿಗೆ ಖಡಕ್ ಸೂಚನೆ ನೀಡಿದೆ.

ಕೊರೊನಾಗೆ ತತ್ತರಿಸಿದ ಪಾಕಿಸ್ತಾನ..! ಪರಿಹಾರಕ್ಕಾಗಿ ಜಗತ್ತನ್ನು ಅಂಗಲಾಚಿದ ಇಮ್ರಾನ್‌ ಖಾನ್‌..!

ಕೊರೊನಾ ವೈರಸ್ ಕಾರಣಕ್ಕೆ ಮಸೀದಿಗಳಲ್ಲಿ ನಡೆಯುವ ಧಾರ್ಮಿಕ ಸಭೆಗಳ ಮೇಲೆ ನಿಷೇಧ ಹೇರಿದರೆ ಹುಷಾರ್ ಎಂದು ಮೌಲ್ವಿಗಳ ಗುಂಪೊಂದು, ಪಾಕಿಸ್ತಾನದ ಪ್ರಧಾನಿ ಅವರನ್ನೇ ಬೆದರಿಸಿದೆ ಎಂದರೆ ಅಚ್ಚರಿಯಾದಿರಲಾರದು.

ಮಸೀದಿಗಳಲ್ಲಿ ಎಂದಿನ ಧಾರ್ಮಿಕ ಸಭೆಗಳು, ಪ್ರಾರ್ಥನೆಗಳನ್ನು ಮುಂದುವರೆಸಲು ಅವಕಾಶ ನೀಡಬೇಕು ಎಂದು ಹೇಳಿರುವ ಮೌಲ್ವಿಗಳು, ಪ್ರಾರ್ಥನೆ ಮೂಲಕ ಅಲ್ಲಾಹುವಿನ ಕ್ಷಮೆ ಕೇಳಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದೆ.

ಜಾಮಿಯಾ ದಾರುಲ್ ಉಲೂಮ್ ಜಾಕ್ರಿಯಾದಲ್ಲಿ ಸಭೆ ಸೇರಿದ್ದ ಸುಮಾರು 53ಕ್ಕೂ ಹೆಚ್ಚು ಹಿರಿಯ ಧರ್ಮಗುರುಗಳ ಗುಂಪು, ಧಾರ್ಮಿಕ ಸಭೆಗಳ ಮೇಲೆ ನಿಷೇಧ ಹೇರಿದರೆ ಹುಷಾರ್ ಎಂದು ಇಮ್ರಾನ್ ಖಾನ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದೆ.

ಹಿಂದೂಗಳಿಗೆ ರೇಷನ್ ಕೊಡದ ಪಾಕ್ ಸರ್ಕಾರ: ಅಲ್ಪಸಂಖ್ಯಾತರ ಗೋಳಿನ ಕತೆಗಳು!

ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗಳಿಗೆ ನಿರ್ಬಂಧ ಹಾಕಿರುವುದನ್ನು ಪಾಕಿಸ್ತಾನಿಯರು ಒಪ್ಪಿಕೊಂಡಿಲ್ಲ ಎಂದು ಜಾಮಿಯಾ ದಾರುಲ್ ಉಲೂಮ್ ಜಾಕ್ರಿಯಾದ ಅಧ್ಯಕ್ಷ ಪಿರ್ ಅಜಿಜೂರ್ ರೆಹಮಾನ್ ಹಜಾರ್ವಿ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿ ಇದುವರೆಗೂ 5,374 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಈ ಮಾರಕ ವೈರಾಣುವಿಗೆ 93 ಜನ ಬಲಿಯಾಗಿದ್ದಾರೆ ಎಂಬುದು ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ