ಆ್ಯಪ್ನಗರ

ಕರ್ತಾರ್‌ಪುರ ಕಾಮಗಾರಿ ಮುಗಿಸಿದ ಪಾಕ್‌

ಗಡಿ ಬಳಿ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ನವೆಂಬರ್‌ನಲ್ಲಿ ನಡೆಯುವ ಗುರು ನಾನಕ್‌ ಅವರ 550ನೇ ಜನ್ಮದಿನಾಚರಣೆ ವೇಳೆಗೆ ಕಾರಿಡಾರ್‌ ಯೋಜನೆ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ

PTI 4 Aug 2019, 5:00 am
ಇಸ್ಲಾಮಾಬಾದ್‌: ಭಾರತದ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್‌ ಕ್ಷೇತ್ರದಿಂದ ಕರ್ತಾರ್‌ಪುರ ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣ ಯೋಜನೆಯ ತನ್ನ ಪಾಲಿನ ಶೇ.90ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿರುವುದಾಗಿ ಪಾಕಿಸ್ತಾನ ಸರಕಾರ ಹೇಳಿಕೊಂಡಿದೆ.
Vijaya Karnataka Web gurdwara_kartarpur


ಗಡಿ ಬಳಿ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ನವೆಂಬರ್‌ನಲ್ಲಿ ನಡೆಯುವ ಗುರು ನಾನಕ್‌ ಅವರ 550ನೇ ಜನ್ಮದಿನಾಚರಣೆ ವೇಳೆಗೆ ಕಾರಿಡಾರ್‌ ಯೋಜನೆ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಿಂದ ಮೊದಲ ತಂಡದ ಯಾತ್ರಿಕರು ನವೆಂಬರ್‌ 9ಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಸಿಖ್‌ ಯಾತ್ರಿಕರಿಗೆ ವೀಸಾ ರಹಿತವಾಗಿ ಗುರು ನಾನಕರ ಎರಡು ಪುಣ್ಯಕ್ಷೇತ್ರಗಳ ದರ್ಶನ ಕಲ್ಪಿಸುವ ಉದ್ದೇಶದಿಂದ ಭಾರತ-ಪಾಕ್‌ ಜಂಟಿಯಾಗಿ ಕಾರಿಡಾರ್‌ ಯೋಜನೆಯಲ್ಲಿ ತೊಡಗಿಕೊಂಡಿವೆ. ಅಟ್ಟಾರಿ ಗಡಿಯಿಂದ ಕರ್ತಾರ್‌ಪುರದಲ್ಲಿರುವ ಗುರುದ್ವಾರದವರೆಗೆ ಮೂಲಭೂತ ಸೌಕರ್ಯವನ್ನು ಪಾಕ್‌ ಸರಕಾರ ನಿರ್ಮಿಸುತ್ತಿದೆ. ಭಾರತ ಸರಕಾರ ತನ್ನ ಗಡಿಯಿಂದ ಗುರುದಾಸ್‌ಪುರವರೆಗೆ ಸೌಕರ್ಯ ಕಲ್ಪಿಸುತ್ತಿದೆ. ಪಾಕ್‌-ಭಾರತ ಗಡಿಯಿಂದ ನಾಲ್ಕು ಕಿ.ಮೀ. ದೂರದಲ್ಲಿ ಸಿಖ್‌ ಧರ್ಮಗುರು ಗುರು ನಾನಕರ ಐಕ್ಯಸ್ಥಳ ಎನ್ನಲಾದ ದರ್ಬಾರ್‌ ಸಾಹಿಬ್‌ ಗುರುದ್ವಾರ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ