ಆ್ಯಪ್ನಗರ

ಕುಲಭೂಷಣ್‌ ಕೋರ್ಟ್‌ ಮೊರೆಗೆ ಅವಕಾಶ ಕಲ್ಪಿಸಲು ಸೇನಾ ಕಾಯಿದೆ ತಿದ್ದುಪಡಿಗೆ ಮುಂದಾದ ಪಾಕ್

ಪಾಕಿಸ್ತಾನ ಸೇನಾ ಕೋರ್ಟ್‌ ವಿಧಿಸಿರುವ ಗಲ್ಲುಶಿಕ್ಷೆ ವಿರುದ್ಧ ಭಾರ­ತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರು ನಾಗರಿಕ ನ್ಯಾಯಾಲ­ಯದ ಮೊರೆ ಹೋಗಲು ಅನುಕೂಲ ಕಲ್ಪಿಸುವ ಸಲುವಾಗಿ ಸೇನಾ ಕಾಯಿದೆಗೆ ತಿದ್ದುಪಡಿ ತರಲು ಪಾಕಿಸ್ತಾನ ಮುಂದಾಗಿದೆ.

Vijaya Karnataka Web 14 Nov 2019, 11:25 am
ಇಸ್ಲಾಮಾಬಾದ್‌: ಗೂಢಚರ್ಯೆ ಆರೋಪದ ಮೇರೆಗೆ ಸೇನಾ ಕೋರ್ಟ್‌ ವಿಧಿಸಿರುವ ಗಲ್ಲುಶಿಕ್ಷೆ ವಿರುದ್ಧ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರು ನಾಗರಿಕ ನ್ಯಾಯಾಲಯದ ಮೊರೆ ಹೋಗಲು ಅನುಕೂಲ ಕಲ್ಪಿಸುವ ಸಲುವಾಗಿ ಸೇನಾ ಕಾಯಿದೆಗೆ ತಿದ್ದುಪಡಿ ತರಲು ಪಾಕಿಸ್ತಾನ ಮುಂದಾಗಿದೆ.
Vijaya Karnataka Web former Indian Navy officer Kulbhushan Jadhav


ಕುಲಭೂಷಣ್‌ ಜಾಧವ್‌ ವಿಷಯದಲ್ಲಿ ವಿಯೆನ್ನಾ ಒಪ್ಪಂದ ಉಲ್ಲಂಘಸಿದೆ: ವಿಶ್ವಸಂಸ್ಥೆಗೆ ಐಸಿಜೆ ವರದಿ

ಈ ಕುರಿತು ಸುಳಿವು ನೀಡಿರುವ ಸೇನಾಧಿಕಾರಿಯೊಬ್ಬರು, ಕಳೆದ ಜುಲೈ 17ರಂದು ಅಂತಾರಾಷ್ಟ್ರೀಯ ನ್ಯಾಯಾ­ಲಯ ನೀಡಿದ್ದ ತೀರ್ಪನ್ನು ಆಧರಿಸಿ ಜಾಧವ್‌ ಅವರು ಪಾಕ್‌ನ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿ­ಸಬಹುದು. ಪಾಕ್‌ನ ಮಿಲಿಟರಿ ಕೋರ್ಟ್‌ ವಿಧಿಸಿರುವ ಗಲ್ಲುಶಿಕ್ಷೆಯನ್ನು ಕೂಡ ಪ್ರಶ್ನಿಸಬಹುದು. ಈ ಕುರಿತು ಜಾಧವ್‌ ಅವರಿಗೆ ಎಲ್ಲರೀತಿಯ ಹಕ್ಕುಗಳನ್ನು ನೀಡುವ ಕರಡು ಪ್ರತಿ­ಯನ್ನು ಸಿದ್ಧ­ಪಡಿಸ­ಲಾಗಿದ್ದು, ಕೋರ್ಟ್‌ಗೆ ಮೊರೆ­ಹೋಗಲು ಪಾಲಿಸಬೇಕಾದ ನಿಯಮ­ಗಳನ್ನು ಕೂಡ ಇದರಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಳ್ವೆಗೆ 1 ರೂ ಗೌರವಧನ ಪಾವತಿಸಿ ಅಮ್ಮನ ಕೊನೆಯಾಸೆ ನೆರವೇರಿಸಿದ ಸುಷ್ಮಾ ಸ್ವರಾಜ್ ಪುತ್ರಿ

2016ರಲ್ಲಿ ಜಾಧವ್‌ ಬಂಧನ ಬಳಿಕ 1963ರ ವಿಯೆನ್ನಾ ಒಪ್ಪಂದದಂತೆ ರಾಯಭಾರ ಕಚೇರಿ ಸಂಪರ್ಕವನ್ನು ಅವರಿಗೆ ಪಾಕ್‌ ನೀಡಿರಲಿಲ್ಲ. ಮಿಲಿಟರಿ ಕೋರ್ಟ್‌ನಲ್ಲಿ ಗೌಪ್ಯವಾಗಿ ವಿಚಾರಣೆ ನಡೆಸಿ 2017ರ ಏಪ್ರಿಲ್‌ನಲ್ಲಿ ಜಾಧವ್‌ ಅವರಿಗೆ ಗಲ್ಲುಶಿಕ್ಷೆಗೆ ಗುರಿಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಭಾರತ ಅಂತಾ­ರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ಮೆಟ್ಟಿಲೇ­ರಿತ್ತು.

ಪಾಕ್‌ ಹೆಣೆದ ಸುಳ್ಳು ಕತೆಗಳ ಹೇಳಲು ಜಾಧವ್‌ ಮೇಲೆ ತೀವ್ರ ಒತ್ತಡ ಹೇರಿತ್ತು: ಭಾರತ

ಹಲವು ಸುತ್ತಿನ ವಿಚಾರಣೆ ಬಳಿಕ 2019ರ ಜುಲೈ 17ರಂದು ತೀರ್ಪು ನೀಡಿದ ಐಸಿಜೆ ಜಾಧವ್‌ ಬಿಡುಗಡೆ ಸಾಧ್ಯ­ವಿಲ್ಲ. ಆದರೆ ಅವರನ್ನು ಯಾವುದೇ ಕಾರಣಕ್ಕೂ ಗಲ್ಲುಶಿಕ್ಷೆ ಜಾರಿಗೊಳಿಸು­ವಂತಿಲ್ಲ, ಕೂಡಲೇ ಅವರಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕ ನೀಡಬೇಕು ಎಂದು ಪಾಕ್‌ಗೆ ತಪರಾಕಿ ಹಾಕಿತ್ತು. ಜಾಗತಿಕ ಮುಖಭಂಗಕ್ಕೆ ಈಡಾದ ನಂತರ ಸೆಪ್ಟೆಂಬರ್‌ 2ರಂದು ಪಾಕ್‌ ಅಧಿಕಾರಿಗಳು ಜಾಧವ್‌ ಅವರನ್ನು ಭೇಟಿ­ಯಾಗಲು ರಾಯಭಾರ ಕಚೇರಿ ಅಧಿಕಾರಿಗಳಿಗೆ ಅನುವು ಮಾಡಿಕೊಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ