ಆ್ಯಪ್ನಗರ

ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ಸಂಧಾನ ಇಲ್ಲ ಎಂದ ಪಾಕಿಸ್ತಾನ

ಕುಲಭೂಷಣ್‌ ಜಾಧವ್‌ ಪ್ರಕರಣ ಸಂಬಂಧ ಸದ್ಯ ಐಸಿಜೆನೀಡಿರುವ ನಿರ್ದೇ­ಶನಗಳನ್ನು ನಮ್ಮ ಸ್ಥಳೀಯ ಕಾನೂನುಗಳ ಅನುಸಾರವೇ ಪಾಲಿಸುವು­ದಾಗಿ ಪಾಕಿಸ್ತಾನ ಹೇಳಿದ್ದು ಭಾರತ­ದೊಂದಿಗೆ ಸಂಧಾನ ಮಾಡಿಕೊಳ್ಳು­ವುದಿಲ್ಲ ಎಂದಿದೆ.

Vijaya Karnataka Web 15 Nov 2019, 8:18 am
ಇಸ್ಲಾಮಾಬಾದ್‌: ಕುಲಭೂಷಣ್‌ ಜಾಧವ್‌ ಪ್ರಕರಣ ಸಂಬಂಧ ಸದ್ಯ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿರುವ ನಿರ್ದೇಶನಗಳನ್ನು ನಮ್ಮ ಸ್ಥಳೀಯ ಕಾನೂನುಗಳ ಅನುಸಾರವೇ ಪಾಲಿಸುವುದಾಗಿ ಪಾಕಿಸ್ತಾನ ಹೇಳಿದೆ. ಜತೆಗೆ, ಈ ವಿಚಾರವಾಗಿ ಭಾರತದೊಂದಿಗೆ ಸಂಧಾನ ಮಾಡಿಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
Vijaya Karnataka Web kulbhushan jadhav case


ಕುಲಭೂಷಣ್‌ ಕೋರ್ಟ್‌ ಮೊರೆಗೆ ಅವಕಾಶ ಕಲ್ಪಿಸಲು ಸೇನಾ ಕಾಯಿದೆ ತಿದ್ದುಪಡಿಗೆ ಮುಂದಾದ ಪಾಕ್

ಪಾಕ್‌ ಸರಕಾರ ಜಾಧವ್‌ ಪ್ರಕರಣದ ಕಾನೂನಾತ್ಮಕ ಮರು­ಪರಿಶೀಲನೆಗೆ ಮುಂದಾಗು­ತ್ತಿದೆ ಎಂದು ಪಾಕಿಸ್ತಾನ ಸೇನೆಯೇ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಅಲ್ಲಿನ ವಿದೇಶಾಂಗ ಸಚಿವಾ­ಲಯ ವಕ್ತಾರ ಮೊಹಮ್ಮದ್‌ ಫೈಸಲ್‌ ಈ ಸಮಜಾ­ಯಿಷಿ ನೀಡಿದ್ದಾರೆ. ಗೂಢಚರ್ಯೆ ಆರೋ­ಪದ ಮೇರೆಗೆ ಪಾಕಿಸ್ತಾನದ ಸೇನಾ ನ್ಯಾಯಾ­ಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾ­ಗಿರುವ ಭಾರತೀಯ ನೌಕಾ­ಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ಶಿಕ್ಷೆಯನ್ನು ಪಾಕಿಸ್ತಾನ ಪುನಃ ಪರಿಶೀಲಿಸ­ಬೇಕು ಎಂದು ಜುಲೈ 17ರಂದು ಅಂತಾರಾಷ್ಟ್ರೀಯ ನ್ಯಾಯಾ­ಲಯ ಆದೇಶಿಸಿತ್ತು. ಸೇನಾ ನ್ಯಾಯಾ­ಲಯ ನೀಡಿರುವ ಶಿಕ್ಷೆಯನ್ನು ಜಾಧವ್‌ ಅವರು ನಾಗರಿಕ ನ್ಯಾಯಾಲಯ­ದಲ್ಲಿ ಪ್ರಶ್ನಿಸಲು ಅನುವು ಮಾಡಿಕೊಡಲು ಸೇನಾ ಕಾಯಿದೆಗೆ ಪಾಕಿಸ್ತಾನ ತಿದ್ದುಪಡಿ ತರಲಿದೆ ಎಂದು ಹೇಳಲಾಗಿತ್ತು.

ಕುಲಭೂಷಣ್‌ ಜಾಧವ್‌ ವಿಷಯದಲ್ಲಿ ವಿಯೆನ್ನಾ ಒಪ್ಪಂದ ಉಲ್ಲಂಘಸಿದೆ: ವಿಶ್ವಸಂಸ್ಥೆಗೆ ಐಸಿಜೆ ವರದಿ

2016ರಲ್ಲಿ ಜಾಧವ್‌ ಬಂಧನ ಬಳಿಕ 1963ರ ವಿಯೆನ್ನಾ ಒಪ್ಪಂದದಂತೆ ರಾಯಭಾರ ಕಚೇರಿ ಸಂಪರ್ಕವನ್ನು ಅವರಿಗೆ ಪಾಕ್‌ ನೀಡಿರಲಿಲ್ಲ. ಮಿಲಿಟರಿ ಕೋರ್ಟ್‌ನಲ್ಲಿ ಗೌಪ್ಯವಾಗಿ ವಿಚಾರಣೆ ನಡೆಸಿ 2017ರ ಏಪ್ರಿಲ್‌ನಲ್ಲಿ ಜಾಧವ್‌ ಅವರಿಗೆ ಗಲ್ಲುಶಿಕ್ಷೆಗೆ ಗುರಿಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಭಾರತ ಅಂತಾ­ರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ಮೆಟ್ಟಿಲೇ­ರಿತ್ತು.

ಕುಲಭೂಷಣ್ ಜಾಧವ್‌ಗೆ 2ನೇ ಬಾರಿ ರಾಜತಾಂತ್ರಿಕ ಸಂಪರ್ಕ ಒದಗಿಸಲು ನಿರಾಕರಿಸಿದ ಪಾಕ್

ಹಲವು ಸುತ್ತಿನ ವಿಚಾರಣೆ ಬಳಿಕ 2019ರ ಜುಲೈ 17ರಂದು ತೀರ್ಪು ನೀಡಿದ ಐಸಿಜೆ ಜಾಧವ್‌ ಬಿಡುಗಡೆ ಸಾಧ್ಯ­ವಿಲ್ಲ. ಆದರೆ ಅವರನ್ನು ಯಾವುದೇ ಕಾರಣಕ್ಕೂ ಗಲ್ಲುಶಿಕ್ಷೆ ಜಾರಿಗೊಳಿಸು­ವಂತಿಲ್ಲ, ಕೂಡಲೇ ಅವರಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕ ನೀಡಬೇಕು ಎಂದು ಪಾಕ್‌ಗೆ ತಪರಾಕಿ ಹಾಕಿತ್ತು. ಜಾಗತಿಕ ಮುಖಭಂಗಕ್ಕೆ ಈಡಾದ ನಂತರ ಸೆಪ್ಟೆಂಬರ್‌ 2ರಂದು ಪಾಕ್‌ ಅಧಿಕಾರಿಗಳು ಜಾಧವ್‌ ಅವರನ್ನು ಭೇಟಿ­ಯಾಗಲು ರಾಯಭಾರ ಕಚೇರಿ ಅಧಿಕಾರಿಗಳಿಗೆ ಅನುವು ಮಾಡಿಕೊಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ