ಆ್ಯಪ್ನಗರ

ತಪ್ಪು ನೀತಿಯಿಂದಲೇ ಪಾಕ್ ಒಂಟಿಯಾಗಿದೆ: ಮುಶ್ರಫ್

ಅತ್ತ ಪಾಕಿಸ್ತಾನ ಅಂತಾರಾಷ್ಟ್ರೀಯ ಪತ್ರಕರ್ತರನ್ನು ಗಡಿ ಭಾಗಕ್ಕೆ ಕರೆದೊಯ್ದು, ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿಯೇ ಇಲ್ಲ ಎಂಬುದನ್ನು ಸಾಬೀತುಪಡಿಸಲು ಯತ್ನಿಸುತ್ತಿದ್ದರೆ, ಇತ್ತ ದೇಶದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೀಜ್ ಮುಶ್ರಫ್, ಪಾಕಿಸ್ತಾನದ ಈ ದುಸ್ಥಿತಿಗೆ ಪ್ರಧಾನಿ ನವಾಜ್ ಶರೀಫ್ ಅವರ ನೀತಿಗಳೇ ಕಾರಣವೆಂದು ಒತ್ತಿ ಹೇಳಿದ್ದಾರೆ.

ಏಜೆನ್ಸೀಸ್ 2 Oct 2016, 4:23 pm
ಹೊಸದಿಲ್ಲಿ: ಅತ್ತ ಪಾಕಿಸ್ತಾನ ಅಂತಾರಾಷ್ಟ್ರೀಯ ಪತ್ರಕರ್ತರನ್ನು ಗಡಿ ಭಾಗಕ್ಕೆ ಕರೆದೊಯ್ದು, ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿಯೇ ಇಲ್ಲ ಎಂಬುದನ್ನು ಸಾಬೀತುಪಡಿಸಲು ಯತ್ನಿಸುತ್ತಿದ್ದರೆ, ಇತ್ತ ದೇಶದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೀಜ್ ಮುಶ್ರಫ್, ಪಾಕಿಸ್ತಾನದ ಈ ದುಸ್ಥಿತಿಗೆ ಪ್ರಧಾನಿ ನವಾಜ್ ಶರೀಫ್ ಅವರ ನೀತಿಗಳೇ ಕಾರಣವೆಂದು ಒತ್ತಿ ಹೇಳಿದ್ದಾರೆ.
Vijaya Karnataka Web paks wrong policies reason for global isolation musharraf says
ತಪ್ಪು ನೀತಿಯಿಂದಲೇ ಪಾಕ್ ಒಂಟಿಯಾಗಿದೆ: ಮುಶ್ರಫ್


'ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಒಂಟಿಯಾಗಿರುವುದಲ್ಲದೇ, ಪ್ರಧಾನಿ ಶರೀಫ್ ದೇಶದಲ್ಲಿಯೂ ಜನರ ಪ್ರೀತಿ, ವಿಶ್ವಾಸ ಕಳೆದುಕೊಂಡಿದ್ದಾರೆ,' ಪರ್ವೀಜ್ ಹೇಳಿದ್ದಾರೆ.

ನಿನ್ನೆಯಷ್ಟೇ ಮುಶ್ರಫ್, 'ಶರೀಫ್‌ಗೆ ಹಣದ ವ್ಯಾಮೋಹ ಹೆಚ್ಚಾಗಿದ್ದು, ದೇಶ ಅಭಿವೃದ್ಧಿಯಾಗುತ್ತಿಲ್ಲ. ಇನ್ನೂ ಪ್ರಗತಿ ಕಾಣದ ದೇಶವಾಗಿಯೇ ಗುರುತಿಸಿಕೊಳ್ಳುತ್ತಿದೆ,' ಎಂದಿದ್ದರು.

'ಪಾಕಿಸ್ತಾನ ಸುಮಾರು 2.32 ಲಕ್ಷ ಕೋಟಿ ರೂ.ನಷ್ಟು ಸಾಲ ಪಡೆದಿದ್ದು, ಒಂದೇ ಒಂದು ದೊಡ್ಡ ಯೋಜನೆಗೂ ಹಣ ವ್ಯಯಿಸಿಲ್ಲ. ಯಾರೊಬ್ಬರೂ ಇದರ ಲಾಭ ಪಡೆದಿಲ್ಲ. ಬದಲಾಗಿ ಪಾಕಿಸ್ತಾನದ ಜನರು ಸರಕಾರದ ಭ್ರಷ್ಟಾಚಾರದಿಂದ ಅನುಭವಿಸುವಂತಾಗಿದೆ,' ಎಂದಿದ್ದಾರೆ.

ಭಾರತದ ಸರ್ಜಿಕಲ್ ದಾಳಿಯನ್ನೂ ಟೀಕಿಸಿದ ಪರ್ವೀಜ್, 'ಪಾಕಿಸ್ತಾನ ಸೇನೆ ಬಲವಾಗಿದೆ. ಅಕಸ್ಮಾತ್ ಭಾರತಕ್ಕೆ ಪ್ರತಿಕ್ರಿಯೆ ತೋರಿದರೆ ಪರಿಣಾಮ ನಿರೀಕ್ಷಿಸಿದ ಮಟ್ಟಕ್ಕಿಂತಲೂ ಹೆಚ್ಚಾಗಿರುತ್ತದೆ,' ಎಂದು ಎಚ್ಚರಿಸಿದ್ದಾರೆ.

'ನಾನು ಬೆನ್ನು ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ. ಅಲ್ಲದೇ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯವಾಗಿ ಓಡಾಡಲೂ ಅಸಾಧ್ಯವಾಗಿರುವುದರಿಂದ ದೇಶಕ್ಕೆ ಸದ್ಯಕ್ಕೆ ಮರಳುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ಧದ ಪ್ರಕರಣಗಳ ತನಿಖೆ ವಿಚಾರಣೆ ಮುಗಿದ ನಂತರ ಪಾಕಿಸ್ತಾನಕ್ಕೆ ಮರಳುವೆ. ದೇಶದ ಮುಂದಿನ ಚುನಾವಣೆಯಲ್ಲಿ ಎಪಿಎಂಲ್ ಸ್ಪರ್ಧಿಸಲಿದೆ,' ಎಂದು ಖಚಿತಿಪಡಿಸಿದರು.

Even as Islamabad becomes an international pariah following the Uri terror attack , Pakistan's former Prime Minister Pervez Musharraf has blamed the Nawaz Sharif government's 'wrong policies' for its global isolation.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ