ಆ್ಯಪ್ನಗರ

ಶ್ರೀಕೃಷ್ಣ ದೇಗುಲದ ಜೀರ್ಣೋದ್ಧಾರಕ್ಕೆ ಚಾಲನೆ

''ಬಹರೇನ್‌ನ ಶ್ರೀನಾಥ್‌ಜೀ ದೇಗುಲದಲ್ಲಿ ಕೆಲಕಾಲ ಕಳೆದೆ. ಈ ಪ್ರಾಂತ್ಯದಲ್ಲಿ ಇದು ಅತ್ಯಂತ ಹಳೆಯ ದೇಗುಲ. ಇದು ಭಾರತ ಮತ್ತು ಬಹರೇನ್‌ ನಡುವಿನ ಬಾಂಧವ್ಯದ ಸಂಕೇತ,'' ಎಂದು ಮೋದಿ ಟ್ವೀಟಿಸಿದ್ದಾರೆ.

PTI 26 Aug 2019, 5:00 am
ಮನಾಮಾ: ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಬಹರೇನ್‌ ರಾಜಧಾನಿ ಮನಾಮಾನದಲ್ಲಿರುವ ಪುರಾತನ 'ಶ್ರೀನಾಥ್‌ಜೀ (ಶ್ರೀಕೃಷ್ಣ) ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. 200 ವರ್ಷಗಳಷ್ಟು ಹಳೆಯ ದೇಗುಲಕ್ಕೆ ಭೇಟಿ ನೀಡಿದ ಮೋದಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ರುಪೇ ಕಾರ್ಡ್‌ ಬಳಸಿ ದೇಗುಲದಲ್ಲಿ ಲಡ್ಡು ಪ್ರಸಾದವನ್ನೂ ಖರೀದಿಸಿದರು. ದೇಗುಲ ಭೇಟಿಯ ಬಗ್ಗೆ ಮೋದಿ ನಂತರ ಟ್ವೀಟ್‌ ಮಾಡಿ, ಅಲ್ಲಿನ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
Vijaya Karnataka Web temple

''ಬಹರೇನ್‌ನ ಶ್ರೀನಾಥ್‌ಜೀ ದೇಗುಲದಲ್ಲಿ ಕೆಲಕಾಲ ಕಳೆದೆ. ಈ ಪ್ರಾಂತ್ಯದಲ್ಲಿ ಇದು ಅತ್ಯಂತ ಹಳೆಯ ದೇಗುಲ. ಇದು ಭಾರತ ಮತ್ತು ಬಹರೇನ್‌ ನಡುವಿನ ಬಾಂಧವ್ಯದ ಸಂಕೇತ,'' ಎಂದು ಮೋದಿ ಟ್ವೀಟಿಸಿದ್ದಾರೆ.
ದೇಗುಲದಲ್ಲಿ ಮೋದಿ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಭಾರತೀಯರು ನೆರೆದಿದ್ದರು. ಅವರನ್ನು ಮೋದಿ ಅವರು ಮಾತನಾಡಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಬಹರೇನ್‌ನಲ್ಲಿ ಸುಮಾರು ಮೂರೂವರೆ ಲಕ್ಷ ಭಾರತೀಯರಿದ್ದು, ಅವರಲ್ಲಿ ಬಹುತೇಕ ಮಂದಿ ಕೇರಳಿಗರು. ಬಹ್ರೇನ್‌ನ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯ ಸಮುದಾಯದ ಪಾಲು ಮೂರನೇ ಒಂದರಷ್ಟಿದೆ.
ಭಾರತೀಯ ಸಮುದಾಯಕ್ಕೆ ಭೇಷ್‌: ಮನಾಮಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ''ಬಹರೇನ್‌ ದೇಶಕ್ಕೆ ಭಾರತೀಯರ ಕೊಡುಗೆಯ ಬಗ್ಗೆ ಅಲ್ಲಿನ ನಾಯಕರಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿ ಹೃದಯ ತುಂಬಿಬಂದಿದೆ,'' ಎಂದರು.
ಮೋದಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಭಾರತೀಯರು ತಮ್ಮ ಮೊಬೈಲ್‌ಗಳಲ್ಲಿ ಟಾರ್ಚ್‌ ಬೆಳಗುವ ಮೂಲಕ ಸ್ವಾಗತ ಕೋರಿದರು. 'ಮೋದಿ, ಮೋದಿ' ಎಂದು ಘೋಷಣೆಗಳನ್ನು ಕೂಗಿದರು. ಬಳಿಕ ಮಾತನಾಡಿದ ಪ್ರಧಾನಿ, ''ವೈವಿಧ್ಯತೆ ಮತ್ತು ವರ್ಣರಂಜಿñ ಸಂಸ್ಕೃತಿಯೇ ಭಾರತದ ದೊಡ್ಡ ಶಕ್ತಿ. ಅದು ಜಗತ್ತನ್ನು ಬೆರಗುಗೊಳಿಸಿ, ಭಾರತದತ್ತ ಆಕರ್ಷಿತವಾಗುವಂತೆ ಮಾಡುತ್ತದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ