ಆ್ಯಪ್ನಗರ

'ಪ್ರಧಾನಿ ಮೋದಿ ನನ್ನ ಅತ್ಯಂತ ನಂಬಿಕಸ್ಥ ಗೆಳೆಯರಲ್ಲಿ ಒಬ್ಬರು': ಶಿಂಜೋ ಅಬೆ

ಜಪಾನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿನ ಪ್ರೀಮಿಯರ್ ಶಿಂಜೋ ಅಬೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ, ಮೋದಿ ತನ್ನ ನಂಬಿಕಸ್ಥ ಗೆಳೆಯ ಎಂದ ಅಬೆ, ಭಾರತದೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲ ಪಡಿಸಲು ಇಚ್ಚಿಸುತ್ತೇನೆ ಎಂದೂ ಹೇಳಿದರು.

TIMESOFINDIA.COM 28 Oct 2018, 3:39 pm
ಹೊಸದಿಲ್ಲಿ: ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಸಾಧ್ಯವಾಗಿಸಲು ಭಾರತದೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಗೊಳಿಸುವುದಾಗಿ ಜಪಾನ್‌ ಪ್ರೀಮಿಯರ್ ಶಿಂಜೋ ಅಬೆ ತಿಳಿಸಿದ್ದಾರೆ. ಜಪಾನ್‌ನಲ್ಲಿ ಮೋದಿ ಹಾಗೂ ಅಬೆ ಶೃಂಗಸಭೆಯಲ್ಲಿ ಭಾಗಿಯಾಗಿದ್ದು, ಈ ವೇಳೆ ಮಾತನಾಡಿದ ಅವರು, ''ಭಾರತವು ಈ ಪ್ರದೇಶವನ್ನು ವೇಗವಾಗಿ ಮುನ್ನಡೆಸುತ್ತಿದ್ದು, ಇದರೊಂದಿಗೆ ವಿಶ್ವದ ಸಮೃದ್ಧಿಗಾಗಿ ಜಾಗತಿಕ ಶಕ್ತಿಯಾಗಿಯೂ ಹೊರಹೊಮ್ಮುತ್ತಿದೆ'' ಎಂದೂ ಹೇಳಿದರು.
Vijaya Karnataka Web modi shinzo abe


ಇನ್ನು, ಜಪಾನ್‌ ಪ್ರವಾಸದಲ್ಲಿರುವ ಮೋದಿ, ಶಿಂಜೋ ಅಬೆಗೆ ಮೂರು ವಿಧದ ಉಡುಗೊರೆಗಳನ್ನು ನೀಡಿದ್ದಾರೆ. ಎರಡು ಕರಕುಶಲ ಕಲ್ಲಿನ ಬಟ್ಟಲುಗಳು, ಹತ್ತಿಯಿಂದ ಮಾಡಿರುವ ಧುರ್ರೀ ವಸ್ತ್ರ ಹಾಗೂ ಜೋಧಪುರದ ಮರದ ಪೆಟ್ಟಿಗೆಯನ್ನು ನೀಡಿದ್ದಾರೆ. ಬಟ್ಟಲುಗಳನ್ನು ರಾಜಸ್ಥಾನ ಮೂಲದ ರೋಸ್‌ ಬೆಣಚುಕಲ್ಲು ( ಕ್ವಾರ್ಟ್ಜ್‌ ) ಹಾಗೂ ಹಳದಿ ಬೆಣಚು ಕಲ್ಲಿನಿಂದ ರಚಿಸಲಾಗಿದೆ. ಇದನ್ನು ಗುಜರಾತ್‌ನ ಖಾಂಬತ್ ಪ್ರದೇಶದ ಖ್ಯಾತ ಕುಶಲಕರ್ಮಿ ಶಬ್ಬೀರ್‌ಹುಸೇನ್‌ ಇಬ್ರಾಹಿಂಭಾಯ್‌ ಶೇಖ್‌ ರಚಿಸಿದ್ದಾರೆ. ಹಲವು ತಲೆಮಾರುಗಳಿಂದಲೂ ಕಲ್ಲಿನಿಂದ ಮಾಡಿರುವ ಕರಕುಶಲ ವಸ್ತುಗಳಿಗಾಗಿ ಆ ಪ್ರದೇಶ ಸಾಕಷ್ಟು ಖ್ಯಾತಿ ಪಡೆದಿದೆ. ಕೈಯಿಂದ ನೇಯ್ದಿರುವ ಧುರ್ರೀಯನ್ನು ಉತ್ತರ ಪ್ರದೇಶದ ಮಿರ್ಜಾಪುರದ ಖ್ಯಾತ ನೇಕಾರರು ನೇಯ್ದಿದ್ದಾರೆ. ಅಲ್ಲದೆ, ಜೋಧಪುರಿ ಮರದ ಪೆಟ್ಟಿಗೆಯನ್ನು ರಾಜಸ್ಥಾನದಲ್ಲಿ ಮಾಡಿದ್ದು, ಆ ಪ್ರದೇಶದಲ್ಲಿ ಆ ಸಾಂಪ್ರದಾಯಿಕ ವಸ್ತು ಖ್ಯಾತಿ ಪಡೆದಿದೆ.

ಜೋಧಪುರದ ಮರದ ಪೆಟ್ಟಿಗೆ

ಅಲ್ಲದೆ, ''ಭಾರತದಂತಹ ಶ್ರೇಷ್ಠ ದೇಶದಲ್ಲಿ ಮೋದಿ ಅದ್ಭುತ ನಾಯಕ. ಜಪಾನ್‌ ಹಾಗೂ ಭಾರತ ನಡುವೆ ಸಂಬಂಧವು ಚೆನ್ನಾಗಿದೆ. ಇದಕ್ಕೆ ವಿಶ್ವದ ಅತಿ ದೊಡ್ಡ ಶಕ್ತಿಯ ಆಶೀರ್ವಾದವೂ ಇದೆ'' ಎಂದು ಶಿಂಜೋ ಅಬೆ ಹೇಳಿದರು. ಜತೆಗೆ, ಭದ್ರತೆ, ಹೂಡಿಕೆ, ಮಾಹಿತಿ ತಂತ್ರಜ್ಞಾನ, ಕೃಷಿ, ಆರೋಗ್ಯ, ಪರಿಸರ ಹಾಗೂ ಪ್ರವಾಸೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಜಪಾನ್‌ ಹಾಗೂ ಭಾರತದ ನಡುವೆ ಸಹಕಾರ ವಿಶಾಲವಾಗಿಯೇ ವಿಸ್ತರಣೆಯಾಗುತ್ತಿದೆ'' ಎಂದು ಅಬೆ ಹೇಳಿದ್ದಾರೆ.


ಇನ್ನು,'' ಭಾರತದ ಆರ್ಥಿಕ ಬೆಳವಣಿಗೆ ಹಾಗೂ ಪ್ರಧಾನಿ ಮೋದಿಯ ಮೇಕ್‌ ಇನ್ ಇಂಡಿಯಾ ಯೋಜನೆಗೆ ಜಪಾನ್ ಬೆಂಬಲ ಸದಾ ಇರುತ್ತದೆ. ಹೈ ಸ್ಪೀಡ್ ರೈಲು, ಸಬ್‌ವೇ ಹಾಗೂ ಇತರ ಮೂಲಸೌಕರ್ಯ ಯೋಜನೆಗಳಿಗೆ ಜಪಾನ್ ಸಹಕಾರ ನೀಡುತ್ತದೆ. ಹಾಗೂ ಎಲ್ಲ ಪ್ರದೇಶಗಳಲ್ಲೂ ದೊಡ್ಡ ದೊಡ್ಡ ಸಾಮರ್ಥ್ಯವನ್ನು ಎರಡೂ ದೇಶಗಳು ಪಾಲುದಾರರಾಗಿದ್ದೇವೆ'' ಎಂದೂ ಅವರು ಹೇಳಿದರು. ಜತೆಗೆ, ಮುಂಬೈ ಹಾಗೂ ಅಹಮದಾಬಾದ್‌ ನಡುವೆ ಜಪಾನ್‌ನ ಬುಲೆಟ್‌ ರೈಲು ಚಲಿಸಲು ಆರಂಭವಾದ ಬಳಿಕ ಜಪಾನ್ - ಭಾರತದ ಗೆಳೆತನ ಭವಿಷ್ಯದಲ್ಲಿ ಹೊಳೆಯುವ ಚಿಹ್ನೆಯಾಗಲಿದೆ'' ಎಂದೂ ತಿಳಿಸಿದರು.

ಅಲ್ಲದೆ, ''ಸದ್ಯ ಜಪಾನ್‌ನಲ್ಲಿರುವ ಪ್ರಧಾನಿ ಮೋದಿ, ನನ್ನ ಅತ್ಯಂತ ನಂಬಿಕಸ್ಥ ಹಾಗೂ ಬೆಲೆಬಾಳುವ ಸ್ನೇಹಿತರಲ್ಲಿ ಒಬ್ಬರು. ಹೀಗಾಗಿ ಜಪಾನ್‌ ಸರಕಾರದ ಪರವಾಗಿ, ಅವರಿಗೆ ಆತ್ಮೀಯ ಆತಿಥ್ಯವನ್ನು ನೀಡುವ ಸೌಭಾಗ್ಯ ನನಗಿದೆ'' ಎಂದು ಜಪಾನ್‌ನ ಪ್ರಮುಖ ನಾಯಕ ಭಾರತದ ಮಾಧ್ಯಮಗಳಿಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ