ಆ್ಯಪ್ನಗರ

ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ ಬಲಿಪಶು: ಸೌದಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ

ಎಲ್ಲ ದೇಶಗಳೂ ಇತರರ ವಿರುದ್ಧ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸದಂತೆ ಆಗ್ರಹಿಸಿದ ಅವರು, ಭಯೋತ್ಪಾದಕರ ಮೂಲಸೌಕರ್ಯಗಳನ್ನು ನಾಶಪಡಿಸುವಂತೆ ಹಾಗೂ ಹಣಕಾಸು ನೆರವು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.

Vijaya Karnataka Web 20 Feb 2019, 9:35 pm
ರಿಯಾದ್: ಗಡಿಯಾಚೆಗಿನಿಂದ ಆಶ್ರಯ ಹಾಗೂ ಬೆಂಬಲ ಪಡೆದ ಭಯೋತ್ಪಾದನೆಗೆ ಭಾರತ ಬಲಿಪಶುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸೌದಿ ಅರೇಬಿಯಾದ 'ಒಕಾಝ್' (ಅರಬ್ಬೀ ಭಾಷೆಯ ಪತ್ರಿಕೆ) ಹಾಗೂ 'ಸೌದಿ ಗಜೆಟ್' (ಇಂಗ್ಲಿಷ್ ಪತ್ರಿಕೆ) ಗಳಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web PM Modi new


ಎಲ್ಲ ದೇಶಗಳೂ ಇತರರ ವಿರುದ್ಧ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸದಂತೆ ಆಗ್ರಹಿಸಿದ ಅವರು, ಭಯೋತ್ಪಾದಕರ ಮೂಲಸೌಕರ್ಯಗಳನ್ನು ನಾಶಪಡಿಸುವಂತೆ ಹಾಗೂ ಹಣಕಾಸು ನೆರವು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.

ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಮೊದಲ ಭಾರತ ಭೇಟಿ ಸಂದರ್ಭದಲ್ಲೇ ಈ ಸಂದರ್ಶನ ಪ್ರಕಟವಾಗಿದೆ. ಪುಲ್ವಾಮಾ ದಾಳಿಯಲ್ಲಿ ಭಾರತದ 4ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಕೆಲವೇ ದಿನಗಳ ಬಳಿಕ ಸೌದಿ ದೊರೆ ಭಾರತಕ್ಕೆ ಭೇಟಿ ನೀಡಿದ್ದಾರೆ.

ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಭಾರತಕ್ಕೆ ಎಲ್ಲ ಬಗೆಯ ಸಹಕಾರ: ಸೌದಿ ದೊರೆ

'ದಶಕಗಳಿಂದಲೂ ಗಡಿಯಾಚೆಗಿನಿಂದ ಬೆಂಬಲ ಹಾಗೂ ರಕ್ಷಣೆ ಪಡೆದಿರುವ ಭಯೋತ್ಪಾದನೆಗೆ ಭಾರತ ಬಲಿಪಶುವಾಗಿದೆ. ಸಾವಿರಾರು ಅಮಾಯಕ ಜೀವಗಳನ್ನು ಈ ಭಯೋತ್ಪಾದನೆಯ ಪಿಡುಗು ಬಲಿ ತೆಗೆದುಕೊಂಡಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ತೀವ್ರಗಾಮಿತ್ವ ಹಾಗೂ ಭಯೋತ್ಪಾದನೆ ಎಲ್ಲ ದೇಶಗಳು ಮತ್ತು ಸಮಾಜಗಳಿಗೂ ಕಾಡುತ್ತಿರುವ ಪಿಡುಗಾಗಿದೆ. ಯಾವುದೇ ಜನಾಂಗ, ಧರ್ಮ ಅಥವಾ ಸಂಸ್ಕೃತಿಗೆ ಇದು ಸೀಮಿತವಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ಉಗ್ರರ ರಕ್ಷಣೆ, ಸುರಕ್ಷಿತ ನೆಲೆ ಬೇಡ: ಪಾಕ್‌, ಚೀನಾಗೆ ಅಮೆರಿಕ ತಾಕೀತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ