ಆ್ಯಪ್ನಗರ

ಪಾಕ್‌ನಲ್ಲಿ ಹಿಂದು ದೇವಾಲಯ ಧ್ವಂಸ: ಸಿಂಧ್‌ ಪ್ರಾಂತ್ಯದ ನಾಲ್ವರ ಬಂಧನ

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿನ ದೇವಾಲಯವೊಂದನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ನಾಲ್ವರು ಬಾಲಕರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಧರ್ಮನಿಂದನೆ ಆರೋಪಗಳನ್ನು ಹೊರಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಚಿವ ಹರಿರಾಮ್‌ ಕಿಶೋರಿ ಲಾಲ್‌ ಆಗ್ರಹಿಸಿದ್ದಾರೆ.

Vijaya Karnataka Web 29 Jan 2020, 7:21 pm
ಕರಾಚಿ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿನ ದೇವಾಲಯವೊಂದನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ನಾಲ್ವರು ಬಾಲಕರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಧರ್ಮನಿಂದನೆ ಆರೋಪಗಳನ್ನು ಹೊರಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಚಿವ ಹರಿರಾಮ್‌ ಕಿಶೋರಿ ಲಾಲ್‌ ಆಗ್ರಹಿಸಿದ್ದಾರೆ.
Vijaya Karnataka Web Hindu temple vandalising


ಈಗಾಗಲೇ ಪೊಲೀಸ್‌ ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು. ದೇವಾಲಯದ ಹುಂಡಿಯಲ್ಲಿನ ಹಣ ಕದಿಯುವುದಕ್ಕಾಗಿ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾರೆ ಎಂದು ಸ್ಥಳೀಯ ಡಾನ್‌ ಪತ್ರಿಕೆ ವರದಿ ಮಾಡಿದೆ. ''ಭಾನುವಾರ ರಾತ್ರಿ ಸಿಂಧ್‌ ಪ್ರಾಂತ್ಯದ ಛಾಚ್ರೊ ಪಟ್ಟಣದ ಮಾತಾ ದೇವಳ ಭಿಟ್ಟಾನಿ ಮಂದಿರದ ಗೋಡೆ ಒಡೆದು, ಅಲ್ಲಿನ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೆವು. ಬಂಧಿತ ಬಾಲಕರು ಇದೇ ಪಟ್ಟಣದವರು. ಹಣ ಪಡೆಯುವ ಜತೆಗೆ ಕೋಮುಗಲಭೆ ಸೃಷ್ಟಿಗೂ ಬಾಲಕರಿಗೆ ಕುಮ್ಮಕ್ಕು ನೀಡಲಾಗಿತ್ತು. ಆ ಕುರಿತು ತನಿಖೆ ನಡೆಯುತ್ತಿದೆ,'' ಎಂದು ತನಿಖಾಧಿಕಾರಿ ಅಬ್ದುಲ್ಲಾ ಅಹ್ಮದಿಯಾರ್‌ ತಿಳಿಸಿದ್ದಾರೆ.

ಸಿಂಧ್‌ ಪ್ರಾಂತ್ಯದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾಗಿರುವ ಹಿಂದೂ ಸಮುದಾಯದ ಹರಿ ರಾಮ್‌ ಕಿಶೋರಿ ಲಾಲ್‌ ಅವರು, ''ಪಾಕಿಸ್ತಾನ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಂಥ ಕೃತ್ಯಗಳನ್ನು ಸಹಿಸಲಾಗಲ್ಲ,'' ಎಂದಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ 75 ಲಕ್ಷಕ್ಕೂ ಅಧಿಕ ಹಿಂದೂಗಳು ದೇಶದಲ್ಲಿ ವಾಸಿಸುತ್ತಿದ್ದು, ಆ ಪೈಕಿ ಅತಿಹೆಚ್ಚು ಮಂದಿ ಸಿಂಧ್‌ ಪ್ರಾಂತ್ಯದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ