ಆ್ಯಪ್ನಗರ

ಧರ್ಮನಿಂದಕ ಝಾಕಿರ್‌ ನಾಯ್ಕ್‌ಗೆ ಮಲೇಷ್ಯಾದಲ್ಲಿ ಭಾಷಣ ನಿರ್ಬಂಧ

''ಭಾರತದಲ್ಲಿ ಮುಸ್ಲಿಮರು ಹೊಂದಿರುವುದಕ್ಕಿಂತ 100 ಪಟ್ಟು ಹೆಚ್ಚಿನ ಹಕ್ಕುಗಳನ್ನು ಮಲೇಷ್ಯಾದಲ್ಲಿನ ಹಿಂದೂಗಳು ಹೊಂದಿದ್ದಾರೆ,'' ಎಂದು ಆ.3ರಂದು ಪ್ರವಚನವೊಂದರಲ್ಲಿ ಹೇಳಿದ್ದ ಝಾಕಿರ್‌, ದೇಶದಲ್ಲಿನ ಚೀನೀಯರ ಕುರಿತಾಗಿಯೂ ಇದೇ ರೀತಿ ಅವಹೇಳಕಾರಿ ಮಾತನಾಡಿದ್ದ.

PTI 21 Aug 2019, 5:00 am
ಕೌಲಾಂಲಪುರ: ಹಿಂದೂ ಮತ್ತು ಚೀನಿ ಸಮುದಾಯದವರನ್ನು ನಿಂದಿಸಿ ಪ್ರಚೋದನಾತ್ಮಕ ಭಾಷಣ ಮಾಡಿದ್ದ ವಿವಾದಿತ ಮುಸ್ಲಿಂ ಪ್ರವಚನಕಾರ ಝಾಕಿರ್‌ ನಾಯ್ಕ್‌ಗೆ ಪ್ರವಚನ, ಭಾಷಣ ಮಾಡದಂತೆ ಮಲೇಷ್ಯಾ ನಿರ್ಬಂಧ ವಿಧಿಸಿದೆ.
Vijaya Karnataka Web zakir


''ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಜನಾಂಗೀಯ ಸಾಮರಸ್ಯ ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ,'' ಎಂದು ಮಲೇಷ್ಯಾ ಪೊಲೀಸ್‌ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ದತುಕ್‌ ಅಸ್ಮಾವತಿ ಅಹಮದ್‌ ತಿಳಿಸಿದ್ದಾರೆ. ಮಲೇಷ್ಯಾ ಮುಸ್ಲಿಂ ಬಾಹುಳ್ಯದ ರಾಷ್ಟ್ರವಾಗಿದ್ದರೂ, ಹಿಂದೂ ಮತ್ತು ಚೀನೀಯರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

''ಭಾರತದಲ್ಲಿ ಮುಸ್ಲಿಮರು ಹೊಂದಿರುವುದಕ್ಕಿಂತ 100 ಪಟ್ಟು ಹೆಚ್ಚಿನ ಹಕ್ಕುಗಳನ್ನು ಮಲೇಷ್ಯಾದಲ್ಲಿನ ಹಿಂದೂಗಳು ಹೊಂದಿದ್ದಾರೆ,'' ಎಂದು ಆ.3ರಂದು ಪ್ರವಚನವೊಂದರಲ್ಲಿ ಹೇಳಿದ್ದ ಝಾಕಿರ್‌, ದೇಶದಲ್ಲಿನ ಚೀನೀಯರ ಕುರಿತಾಗಿಯೂ ಇದೇ ರೀತಿ ಅವಹೇಳಕಾರಿ ಮಾತನಾಡಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರವು ಧರ್ಮ ಹಾಗೂ ವರ್ಣನಿಂದನೆ ಮಾಡಿದ ಆರೋಪ ಹೊರಿಸಿ ಸೋಮವಾರವಷ್ಟೇ ಸಮನ್ಸ್‌ ಜಾರಿಗೊಳಿಸಿದೆ. ತನ್ನ ಹೇಳಿಕೆಗೆ ಝಾಕಿರ್‌ ಮಂಗಳವಾರ ಕ್ಷಮೆ ಯಾಚಿಸಿದ್ದರೂ, ಸರಕಾರ ಅದಕ್ಕೆ ಸೊಪ್ಪು ಹಾಕಿಲ್ಲ. ದ್ವೇಷ ಭಾಷಣ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ 2016ರಿಂದಲೂ ಭಾರತಕ್ಕೆ ಬೇಕಾಗಿರುವ ಝಾಕಿರ್‌ ನಾಯ್ಕ್‌ ಮಲೇಷ್ಯಾದ ಶಾಶ್ವತ ಪೌರತ್ವ ಹೊಂದಿದ್ದು, ಪ್ರಕರಣದಲ್ಲಿ ದೋಷಾರೋಪ ಸಾಬೀತಾದರೆ ಪೌರತ್ವ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ