ಆ್ಯಪ್ನಗರ

ಯುದ್ಧ ಕೊನೆಗಾಣಿಸಲು ದ.ಕೊರಿಯಾ ಅಧ್ಯಕ್ಷರಿಂದ ಚೀನಾದೊಂದಿಗೆ 'ಕೂಡಿ ಬಾಳುವ' ಇಂಗಿತ!

ಕೊರಿಯನ್ ದ್ವೀಪದಲ್ಲಿ ಯುದ್ಧ ಕೊನೆಗಾಣಿಸಲು ನಾವು ಚೀನಾದೊಂದಿಗೆ ಕೂಡಿ ಕೆಲಸ ಮಾಡಲು ಸಿದ್ಧವಿರುದಾಗಿ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಸ್ಪಷ್ಟಪಡಿಸಿದ್ದಾರೆ. ದ.ಕೊರಿಯಾ ಪ್ರವಾಸದಲ್ಲಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ವೈ ಅವರೊಂದಿಗೆ ಮೂನ್ ಜೇ-ಇನ್ ಮಾತುಕತೆ ನಡೆಸಿದ್ದಾರೆ.

Vijaya Karnataka Web 26 Nov 2020, 5:02 pm
ಸಿಯೋಲ್: ಕೊರಿಯನ್ ದ್ವೀಪದಲ್ಲಿ ಯುದ್ಧ ಕೊನೆಗಾಣಿಸಲು ನಾವು ಚೀನಾದೊಂದಿಗೆ ಕೂಡಿ ಕೆಲಸ ಮಾಡಲು ಸಿದ್ಧವಿರುದಾಗಿ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಸ್ಪಷ್ಟಪಡಿಸಿದ್ದಾರೆ.
Vijaya Karnataka Web Moon Jae-in
ದ.ಕೊರಿಯಾ ಅಧ್ಯಕ್ಷ ಹಾಗೂ ಚೀನಾ ವಿದೇಶಾಂಗ ಸಚಿವ


ದೀರ್ಘ ಕಾಲದ ಕೊರಿಯನ್ ಯುದ್ಧವನ್ನು ಕೊನೆಗಾಣಿಸುವ ಸಮಯ ಬಂದಿದ್ದು, ಇದಕ್ಕಾಗಿ ನೆರೆಯ ಚೀನಾದೊಂದಿಗೆ ಸಹಕರಿಸಲು ಸಿದ್ಧ ಎಂದು ಮೂನ್ ಜೇ-ಇನ್ ಅಭಿಪ್ರಾಯಪಟ್ಟಿದ್ದಾರೆ.

ಕೊರಿಯನ್ ದ್ವೀಪ ಸಮೂಹದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗಾಗಿ ನಾವು ಕೆಲಸ ಮಾಡಬೇಕಿದೆ. ದೀರ್ಘ ಕಾಲದ ಯುದ್ಧದಿಂದ ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಜರ್ಜರಿತವಾಗಿದ್ದು, ಶಾಂತಿ ಸ್ಥಾಪನೆಯೊಂದೇ ಸಮಸ್ಯೆಗೆ ಪರಿಹಾರ ಎಂದು ಮೂನ್ ಜೇ-ಇನ್ ನುಡಿದಿದ್ದಾರೆ.

ಸೇನಾ ಕಾರ್ಯಾಚರಣೆ ಕಾದಿದೆ: ದ.ಕೊರಿಯಾಗೆ ವಿನಾಶದ ಬೆದರಿಕೆ ಹಾಕಿದ ಕಿಮ್ ತಂಗಿ!

ಚೀನಾದ ವಿದೇಶಾಂಗ ಸಚಿವ ವಾಂಗ್ ವೈ ಅವರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಮೂನ್ ಜೇ-ಇನ್, ಕೊರಿಯನ್ ದ್ವೀಪದಲ್ಲಿ ಶಾಂತಿ ಸ್ಥಾಪನೆಗೆ ಚೀನಾದ ನೆರವಿನ ಅವಶ್ಯಕತೆ ಇದೆ ಎಂದು ಹೇಳಿದರು.

ಇದೇ ವೇಳೆ ಕೊರೊನಾ ವೈರಸ್ ಹಾವಳಿ ನಿಯಂತ್ರಿಸುವ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದರು ಎಂದು ದಕ್ಷಿಣ ಕೊರಿಯಾ ಸರ್ಕಾರದ ಮೂಲಗಳು ಖಚಿತಪಡಿಸಿವೆ.

ಉ.ಕೊರಿಯಾ ಗರಂ?:
ಇನ್ನು ಚೀನಾ ವಿದೇಶಾಂಗ ಸಚಿವ ವಾಂಗ್ ವೈ ಅವರ ದಕ್ಷಿಣ ಕೊರಿಯಾ ಭೇಟಿಯಿಂದ, ಉತ್ತರ ಕೊರಿಯಾ ಮುನಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದ.ಕೊರಿಯಾ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಉ.ಕೊರಿಯಾ ಬ್ರೇಕ್: ಇಷ್ಟೊಳ್ಳೆ ಬುದ್ಧಿ ಹೇಗೆ ಬಂತು?

ತನ್ನ ದೀರ್ಘ ಕಾಲದ ಸೈದ್ಧಾಂತಿಕ ಸ್ನೇಹಿತನಾಗಿರುವ ಚೀನಾ, ತನ್ನ ಗಮನಕ್ಕೂ ತರದೇ ದಕ್ಷಿಣ ಕೊರಿಯಾಗೆ ತನ್ನ ವಿದೇಶಾಂಗ ಸಚಿವರನ್ನು ಕಳುಹಿಸಿರುವುದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನನ್ನು ಕೆರಳಿಸಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ