ತಾಲಿಬಾನ್ ಕೂಡ ಬರಬೇಕು ಎಂದು ಪಟ್ಟು ಹಿಡಿದ ಪಾಕಿಸ್ತಾನ: ಸಾರ್ಕ್ ಸಭೆ ರದ್ದು
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದ ಸಂದರ್ಭದಲ್ಲಿ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಮಟ್ಟದ ಸಭೆಯನ್ನು ಸೆ. 25ರಂದು ಆಯೋಜಿಸಲಾಗಿತ್ತು. ಆದರೆ ತಾಲಿಬಾನ್ ಕೂಡ ಇದರಲ್ಲಿ ಭಾಗವಹಿಸಬೇಕು ಎಂಬ ಪಾಕ್ ಪಟ್ಟು ಹಿಡಿದಿದ್ದರಿಂದ ಸಭೆಯನ್ನು ರದ್ದುಗೊಳಿಸಲಾಗಿದೆ.
Vijaya Karnataka Web 22 Sep 2021, 11:51 am
ಹೈಲೈಟ್ಸ್:
- ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಸಮ್ಮೇಳನ ಸಂದರ್ಭದಲ್ಲಿ ಸಾರ್ಕ್ ಸಭೆ ಆಯೋಜನೆ
- ಸೆ. 25ರಂದು ನಡೆಯಬೇಕಿದ್ದ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಮಟ್ಟದ ಸಭೆ
- ಅಫ್ಘಾನಿಸ್ತಾನದ ಪ್ರತಿನಿಧಿಯಾಗಿ ತಾಲಿಬಾನ್ ಭಾಗವಹಿಸಬೇಕೆಂದು ಪಾಕಿಸ್ತಾನ ಪಟ್ಟು
- ತಾಲಿಬಾನ್ ಪಾಲ್ಗೊಳ್ಳುವಿಕೆಗೆ ಭಾರತ ಸೇರಿದಂತೆ ವಿವಿಧ ದೇಶಗಳಿಂದ ವಿರೋಧ
ಇಸ್ಲಾಮಾಬಾದ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅವಧಿ ಮುಗಿದ ಬಳಿಕ ಶನಿವಾರ ನ್ಯೂಯಾರ್ಕ್ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್) ದೇಶಗಳ ವಿದೇಶಾಂಗ ಸಚಿವರ ಮಟ್ಟದ ಸಭೆಯನ್ನು ರದ್ದುಗೊಳಿಸಲಾಗಿದೆ. ಸಾರ್ಕ್ ಸಭೆಯಲ್ಲಿ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಲು ತಾಲಿಬಾನ್ ನಾಯಕರಿಗೆ ಅವಕಾಶ ನೀಡಬೇಕೆಂದು ಪಾಕಿಸ್ತಾನ ಪಟ್ಟು ಹಿಡಿದಿದೆ. ಈ ಪ್ರಸ್ತಾಪಕ್ಕೆ ಭಾರತ ಹಾಗೂ ಇತರೆ ಕೆಲವು ಸದಸ್ಯ ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಫ್ಘಾನಿಸ್ತಾನದ ಹಿಂದಿನ ಅಶ್ರಫ್ ಘನಿ ಸರ್ಕಾರದಲ್ಲಿ ವಿಶ್ವಸಂಸ್ಥೆಯ ರಾಯಭಾರಿಯಾಗಿದ್ದವರು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇತ್ತು. ಆದರೆ ಆ ಸರ್ಕಾರದ ಯಾವುದೇ ಪ್ರತಿನಿಧಿ ಪಾಲ್ಗೊಳ್ಳಬಾರದು ಎಂದು ಪಾಕಿಸ್ತಾನ ಒತ್ತಾಯಿಸಿದೆ. ಅದರ ಬದಲು ಖಾಲಿ ಕುರ್ಚಿಯನ್ನು ಇರಿಸುವಂತೆ ಹೇಳಿದೆ ಎಂದು ತಿಳಿಸಿದೆ.
ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಯ ಸಂದರ್ಭದಲ್ಲಿಯೇ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಮಟ್ಟದ ವಾರ್ಷಿಕ ಸಭೆ ನಡೆಯಲಿದ್ದು, ಈ ಬಾರಿ ನೇಪಾಳ ಆತಿಥ್ಯ ವಹಿಸಿತ್ತು. ತಾಲಿಬಾನ್ ಸರ್ಕಾರವನ್ನು ಭಾರತ ಇದುವರೆಗೂ ಮಾನ್ಯ ಮಾಡಿಲ್ಲ. ಜಗತ್ತಿನ ಬಹುತೇಕ ದೇಶಗಳು ಈ ಸರ್ಕಾರವನ್ನು ಪರಿಗಣಿಸಿಲ್ಲ. ವಿಶ್ವಸಂಸ್ಥೆಯು ಅದರ ಸಂಪುಟ ಸಚಿವರನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಪಾಕಿಸ್ತಾನ ಮತ್ತು ಚೀನಾ ದೇಶಗಳು ಮಾತ್ರ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಬಹಿರಂಗ ಬೆಂಬಲ ನೀಡುತ್ತಿವೆ. ಸಾರ್ಕ್ ಸಭೆಯಲ್ಲಿ ತಾಲಿಬಾನ್ಗೆ ಅವಕಾಶ ನೀಡಬೇಕೆಂದು ಪಾಕಿಸ್ತಾನ ಪ್ರತಿಪಾದಿಸಿದೆ. ಇದಕ್ಕೆ ಬೇರೆ ದೇಶಗಳು ಒಪ್ಪದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಗಿದೆ. ಆದರೆ ಈ ಬಗ್ಗೆ ಸಾರ್ಕ್ ಸದಸ್ಯ ದೇಶಗಳು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಒಮ್ಮತ ಬಾರದ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿದೆ ಎಂದು ಹೇಳಲಾಗಿದೆ.
'ಈ ಸಮಯದಲ್ಲಿ ಎಲ್ಲ ಸದಸ್ಯ ದೇಶಗಳ ನಡುವೆ ಸಮ್ಮತಿಯ ಕೊರತೆಯಿಂದ, ಸೆ. 25ರಂದು 76ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅವಧಿ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸಾರ್ಕ್ ಸಮಿತಿ ಸಚಿವರ ಮುಖಾಮುಖಿ ಔಪಚಾರಿಕ ಸಭೆಯು ನಡೆಯುತ್ತಿಲ್ಲ' ಎಂದು ನೇಪಾಳ ವಿದೇಶಾಂಗ ಸಚಿವಾಲಯವು ಸಾರ್ಕ್ ಕಾರ್ಯಾಲಯಕ್ಕೆ ಪತ್ರ ಬರೆದಿದೆ.
1987ರ ಜನವರಿ 17ರಂದು ಕಠ್ಮಂಡುವಿನಲ್ಲಿ ಸಾರ್ಕ್ ಕಾರ್ಯಾಲಯ ರಚನೆಯಾಗಿತ್ತು. ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳು ಈ ಸಂಘದ ಭಾಗವಾಗಿದ್ದವು. 2007ರಲ್ಲಿ ಅಫ್ಘಾನಿಸ್ತಾನವನ್ನು ಸೇರ್ಪಡೆ ಮಾಡಲಾಗಿತ್ತು.
ವಿಶ್ವಸಂಸ್ಥೆ ಪ್ರತಿನಿಧಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಾಗತಿಕ ನಾಯಕರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಬೇಕು ಎಂದು ತಾಲಿಬಾನ್ ಮನವಿ ಮಾಡಿದೆ. ವಿಶ್ವಸಂಸ್ಥೆಯ ಅಫ್ಘಾನಿಸ್ತಾನ ರಾಯಭಾರಿಯನ್ನಾಗಿ ದೋಹಾ ಮೂಲದ ವಕ್ತಾರ ಸುಹೈಲ್ ಶಹೀನ್ನನ್ನು ನೇಮಕ ಮಾಡಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರಿಗೆ ಸೋಮವಾರ ಪತ್ರ ಬರೆದಿರುವ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಈ ಮನವಿ ಸಲ್ಲಿಸಿದ್ದಾನೆ.
ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಯ ಸಂದರ್ಭದಲ್ಲಿಯೇ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಮಟ್ಟದ ವಾರ್ಷಿಕ ಸಭೆ ನಡೆಯಲಿದ್ದು, ಈ ಬಾರಿ ನೇಪಾಳ ಆತಿಥ್ಯ ವಹಿಸಿತ್ತು. ತಾಲಿಬಾನ್ ಸರ್ಕಾರವನ್ನು ಭಾರತ ಇದುವರೆಗೂ ಮಾನ್ಯ ಮಾಡಿಲ್ಲ. ಜಗತ್ತಿನ ಬಹುತೇಕ ದೇಶಗಳು ಈ ಸರ್ಕಾರವನ್ನು ಪರಿಗಣಿಸಿಲ್ಲ. ವಿಶ್ವಸಂಸ್ಥೆಯು ಅದರ ಸಂಪುಟ ಸಚಿವರನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಪಾಕಿಸ್ತಾನ ಮತ್ತು ಚೀನಾ ದೇಶಗಳು ಮಾತ್ರ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಬಹಿರಂಗ ಬೆಂಬಲ ನೀಡುತ್ತಿವೆ. ಸಾರ್ಕ್ ಸಭೆಯಲ್ಲಿ ತಾಲಿಬಾನ್ಗೆ ಅವಕಾಶ ನೀಡಬೇಕೆಂದು ಪಾಕಿಸ್ತಾನ ಪ್ರತಿಪಾದಿಸಿದೆ. ಇದಕ್ಕೆ ಬೇರೆ ದೇಶಗಳು ಒಪ್ಪದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಗಿದೆ. ಆದರೆ ಈ ಬಗ್ಗೆ ಸಾರ್ಕ್ ಸದಸ್ಯ ದೇಶಗಳು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಒಮ್ಮತ ಬಾರದ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿದೆ ಎಂದು ಹೇಳಲಾಗಿದೆ.
'ಈ ಸಮಯದಲ್ಲಿ ಎಲ್ಲ ಸದಸ್ಯ ದೇಶಗಳ ನಡುವೆ ಸಮ್ಮತಿಯ ಕೊರತೆಯಿಂದ, ಸೆ. 25ರಂದು 76ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅವಧಿ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸಾರ್ಕ್ ಸಮಿತಿ ಸಚಿವರ ಮುಖಾಮುಖಿ ಔಪಚಾರಿಕ ಸಭೆಯು ನಡೆಯುತ್ತಿಲ್ಲ' ಎಂದು ನೇಪಾಳ ವಿದೇಶಾಂಗ ಸಚಿವಾಲಯವು ಸಾರ್ಕ್ ಕಾರ್ಯಾಲಯಕ್ಕೆ ಪತ್ರ ಬರೆದಿದೆ.
1987ರ ಜನವರಿ 17ರಂದು ಕಠ್ಮಂಡುವಿನಲ್ಲಿ ಸಾರ್ಕ್ ಕಾರ್ಯಾಲಯ ರಚನೆಯಾಗಿತ್ತು. ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳು ಈ ಸಂಘದ ಭಾಗವಾಗಿದ್ದವು. 2007ರಲ್ಲಿ ಅಫ್ಘಾನಿಸ್ತಾನವನ್ನು ಸೇರ್ಪಡೆ ಮಾಡಲಾಗಿತ್ತು.
ವಿಶ್ವಸಂಸ್ಥೆ ಪ್ರತಿನಿಧಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಾಗತಿಕ ನಾಯಕರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಬೇಕು ಎಂದು ತಾಲಿಬಾನ್ ಮನವಿ ಮಾಡಿದೆ. ವಿಶ್ವಸಂಸ್ಥೆಯ ಅಫ್ಘಾನಿಸ್ತಾನ ರಾಯಭಾರಿಯನ್ನಾಗಿ ದೋಹಾ ಮೂಲದ ವಕ್ತಾರ ಸುಹೈಲ್ ಶಹೀನ್ನನ್ನು ನೇಮಕ ಮಾಡಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರಿಗೆ ಸೋಮವಾರ ಪತ್ರ ಬರೆದಿರುವ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಈ ಮನವಿ ಸಲ್ಲಿಸಿದ್ದಾನೆ.