ಆ್ಯಪ್ನಗರ

ಲಿಬಿಯಾದಲ್ಲಿ ಅಪಹರಣಕ್ಕೊಳಗಾದ ಏಳು ಭಾರತೀಯರ ಬಿಡುಗಡೆ!

ಉತ್ತರ ಅಫಿಕ್ರಾದಲ್ಲಿರುವ ಲಿಬಿಯಾದಲ್ಲಿ ಭಾರತೀಯ ರಾಯಬಾರಿ ಕಚೇರಿ ಇಲ್ಲ. ಹೀಗಾಗಿ ನೆರೆಯ ದೇಶ ಟುನೀಶಿಯಾದಲ್ಲಿರುವ ಭಾರತೀಯ ರಾಯಬಾರಿ ಕಚೇರಿ ಭಾರತೀಯರನ್ನು ಬಿಡುಗಡೆಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತು. ಟುನೀಶಿಯಾದ ಭಾರತೀಯ ರಾಯಬಾರಿ ಲಿಬಿಯಾ ಸರಕಾರದೊಂದಿಗೆ ಮಾತುಕತೆ ನಡೆಸಿತು.

Agencies 12 Oct 2020, 9:12 am
ಲಿಬಿಯಾ ದೇಶದಲ್ಲಿ ಅಪಹರಣಕ್ಕೊಳಗಾದ ಏಳು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಟುನೀಶಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಆಂಧ್ರಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರ ಪ್ರದೇಶದ ಒಟ್ಟು ಏಳು ಮಂದಿ ಕಾರ್ಮಿಕರು ಭಾರತಕ್ಕೆ ವಾಪಾಸ್‌ ಆಗುತ್ತಿದ್ದ ವೇಳೆ ಅವರನ್ನು ಸೆಪ್ಟೆಂಬರ್ 14 ರಂದು ಅಪಹರಣ ಮಾಡಲಾಗಿತ್ತು.
Vijaya Karnataka Web EkFcR4GVkAE8LUx


ಇತ್ತೀಚೆಗೆ ಭಾರತ ಈ ವಿಚಾರವನ್ನು ದೃಢಪಡಿಸಿತ್ತು, ಈ ಬೆನ್ನಲ್ಲೆ ಕಾರ್ಯಪ್ರವೃತ್ತರಾದ ಟುನೀಶಿಯಾದಲ್ಲಿರುವ ರಾಯಬಾರ ಕಚೇರಿ ಏಳು ಮಂದಿಯನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಟುನೀಶಿಯಾದ ಭಾರತೀಯ ರಾಯಭಾರಿ ಪುನೀತ್ ರಾಯ್ ಕುಂಡಾಲ್ ಭಾರತೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಟುನೀಶಿಯಾದಿಂದ ಕಾರ್ಯಾಚರಣೆ ಏಕೆ?
ಉತ್ತರ ಅಫಿಕ್ರಾದಲ್ಲಿರುವ ಲಿಬಿಯಾದಲ್ಲಿ ಭಾರತೀಯ ರಾಯಬಾರಿ ಕಚೇರಿ ಇಲ್ಲ. ಹೀಗಾಗಿ ನೆರೆಯ ದೇಶ ಟುನೀಶಿಯಾದಲ್ಲಿರುವ ಭಾರತೀಯ ರಾಯಬಾರಿ ಕಚೇರಿ ಭಾರತೀಯರನ್ನು ಬಿಡುಗಡೆಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತು. ಟುನೀಶಿಯಾದ ಭಾರತೀಯ ರಾಯಬಾರಿ ಲಿಬಿಯಾ ಸರಕಾರದೊಂದಿಗೆ ಮಾತುಕತೆ ನಡೆಸಿತು. ಅಲ್ಲದೆ ಅಲ್ಲರುವ ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಭಾರತೀಯರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆಯು ಅಪಹರಣ ನಡೆದಿತ್ತು!
ಲಿಬಿಯಾದಲ್ಲಿ ಭಾರತೀಯರನ್ನು ಅಪಹರಿಸುವುದು ಇದೇ ಮೊದಲೇನಲ್ಲ. 2014 ರಲ್ಲಿ 39 ಭಾರತೀಯ ಕಾರ್ಮಿಕರನ್ನು ಇರಾಕಿನ ನಗರ ಮೊಸುಲ್ ನಿಂದ ಲಿಬಿಯಾದ ಇಸ್ಲಾಮಿಕ್ ಸ್ಟೇಟ್ ಗುಂಪು ಅಪಹರಿಸಿತ್ತು. ನಂತರ ಅವರನ್ನು ಬಿಟ್ಟುಕೊಟ್ಟಿತ್ತು. 2015ರಲ್ಲೂ ನಾಲ್ವರು ಭಾರತೀಯರನ್ನು ಅಪಹರಿಸಿ ನಂತರ ಬಿಡುಗಡೆ ಮಾಡಲಾಯಿತು.

ಈ ಎರಡು ಅಪಹರಣದ ಹಿಂದೆ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ ಇತ್ತು. 2011 ರಿಂದ ಲಿಬಿಯಾದಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ. ದೇಶವನ್ನು ಸಂಫೂರ್ಣ ಮುಸ್ಲಿಂ ದೇಶವನ್ನಾಗಿಸಬೇಕು ಎನ್ನುವ ಉದ್ದೇಶದಿಂದ ಸ್ಲಾಮಿಕ್ ಸ್ಟೇಟ್ ಪಡೆಗಳ ಹೋರಾಡುತ್ತಿದೆ. ಹೀಗಾಗಿ 2015ರಿಂದ ಲಿಬಿಯಾಕ್ಕೆ ತೆರಳುವುದಕ್ಕೆ ಭಾರತ ನಿರ್ಬಂಧ ಹೇರಿದೆ. ಅಲ್ಲದೆ ಟುನೀಶಿಯಾದಿಂದಲೆ ಲಿಬಿಯಾದಲ್ಲಿರುವ ಭಾರತೀಯರ ಸಂಪರ್ಕವನ್ನು ಸಾಧಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ