ಆ್ಯಪ್ನಗರ

ಭಾರತೀಯ ಮೂಲದ ಚಾಲಕನ ಮೇಲೆ ಇಂಗ್ಲೆಂಡ್‌ನಲ್ಲಿ ದೌರ್ಜನ್ಯ; ನೀನು ತಾಲಿಬಾನಾ..? ಎಂದು ಪ್ರಶ್ನೆ

ಇಂಗ್ಲೆಂಡ್‌ನಲ್ಲಿ ಭಾರತ ಮೂಲದ ಸಿಖ್ ಟ್ಯಾಕ್ಸಿ ಡ್ರೈವರ್ ಮೇಲೆ ಪ್ರಯಾಣಿಕರು ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದ್ದು, ನೀನು ತಾಲಿಬಾನಾ ಎಂದು ಪ್ರಶ್ನಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

Agencies 22 Sep 2020, 6:01 pm
ಲಂಡನ್‌: ಇಂಗ್ಲೆಂಡ್‌ನಲ್ಲಿ ಭಾರತ ಮೂಲದ ಸಿಖ್ ಟ್ಯಾಕ್ಸಿ ಡ್ರೈವರ್ ಮೇಲೆ ಪ್ರಯಾಣಿಕರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕ ಹಲ್ಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಆಗ್ನೇಯ ಇಂಗ್ಲೆಂಡ್‌ನ ಬರ್ಕ್‌ಶೈರ್‌ನಲ್ಲಿ ಘಟನೆ ನಡೆದಿದೆ. ಕ್ಯಾಸಿನೋದಿಂದ ಬಂದ ಪ್ರಯಾಣಿರು ದೈಹಿಕ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಇಂಗ್ಲೆಂಡ್‌ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Vijaya Karnataka Web sikh taxi driver vaneet singh assaulted by passengers in uk are you taliban
ಭಾರತೀಯ ಮೂಲದ ಚಾಲಕನ ಮೇಲೆ ಇಂಗ್ಲೆಂಡ್‌ನಲ್ಲಿ ದೌರ್ಜನ್ಯ; ನೀನು ತಾಲಿಬಾನಾ..? ಎಂದು ಪ್ರಶ್ನೆ


ಹಲ್ಲೆಗೊಳಗಾದ ವ್ಯಕ್ತಿಯನ್ನು 41 ವರ್ಷದ ವನೀತ್ ಸಿಂಗ್ ಎಂದು ಹೇಳಲಾಗಿದೆ. ಕ್ಯಾಸಿನೋದಿಂದ ಬಂದ ನಾಲ್ಕು ಜನರ ಗುಂಪು ವನೀತ್‌ ಸಿಂಗ್‌ಗೆ ಕಪಾಳ ಮೋಕ್ಷ ಮಾಡಿ, ನೀನು ತಾಲಿಬಾನಾ ಎಂದು ಕೇಳಿದ್ದಾರೆ. ಭಾನುವಾರ ಬೆಳಗ್ಗೆ ಘಟನೆ ನಡೆದಿದ್ದು, ಬರ್ಕ್‌ಶೈರ್‌ನಲ್ಲಿನ ಗ್ರೋಸ್ವೆನರ್ ಕ್ಯಾಸಿನೊದಿಂದ ಪ್ರಯಾಣಿಕರು ಟ್ಯಾಕ್ಸಿಗೆ ಹತ್ತಿದ್ದರು.

ನಾಲ್ಕು ಪ್ರಯಾಣಿಕರಲ್ಲಿ ಒರ್ವ ವನೀತ್‌ ಸಿಂಗ್‌ ಪೇಟ ತೆಗೆಯಲು ಸಹ ಪ್ರಯತ್ನಿಸಿದ್ದ ಎನ್ನಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವನೀತ್‌ ಸಿಂಗ್‌, ಅದು ಭಯಾನಕ, ನಿಜವಾಗಿಯೂ ಆತಂಕಕಾರಿಯಾಗಿತ್ತು. ನಾನು ಮತ್ತೆ ನೈಟ್‌ಶಿಫ್ಟ್‌ನಲ್ಲಿ ಕೆಲಸ ಮಾಡುವುದಿಲ್ಲ. ನನಗೆ ಇನ್ನೂ ತುಂಬಾ ಹೆದರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಥೇಮ್ಸ್ ವ್ಯಾಲಿ ಪೊಲೀಸರು ಹಲ್ಲೆಯ ಬಗ್ಗೆ ತನಿಖೆ ನಡೆಸಲು ಸಾಕ್ಷಿಗಳನ್ನು ಕೇಳುತ್ತಿದ್ದಾರೆ. ಬರ್ಕ್‌ಶೈರ್‌ನ ಸ್ಲಫ್‌ನಲ್ಲಿರುವ ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ವನೀತ್‌ ಸಿಂಗ್‌ ಕೊರೊನಾ ವೈರಸ್‌ ಪರಿಸ್ಥಿತಿ ಹಿನ್ನೆಲೆ ಟ್ಯಾಕ್ಸಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಟೈಲ್‌ಹರ್ಸ್ಟ್‌ನಲ್ಲಿ ವಾಸಿಸುವ ವನೀತ್‌ ಸಿಂಗ್‌ ಘಟನೆಯಿಂದ ಭಯಗೊಂಡಿದ್ದಾರೆ.

ಸದ್ದಿಲ್ಲದೆ ಚೀನಾದಿಂದ ನಡೀತಿದೆ ನೇಪಾಳ ಅತಿಕ್ರಮಣ..! ತನ್ನ ನೆಲದಲ್ಲಿ ಪಿಎಲ್‌ಎ ಕಟ್ಟಡ ನಿರ್ಮಿಸಿದರೂ ಓಲಿ ಮೌನ

ಅದು ತುಂಬಾ ಕೆಟ್ಟ ಅನುಭವ. ಅದು ನನ್ನ ಧರ್ಮ, ಹಾಗಾಗಿ ನನ್ನ ಪೇಟವನ್ನು ಗೌರವಿಸುತ್ತೇನೆ ಎಂದು ಎಂದು ಅವರು ಹೇಳಿದ್ದು, ಇನ್ಮುಂದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲ್ಲ ಎಂದಿದ್ದಾರೆ. ನಾಲ್ಕು ಪ್ರಯಾಣಿಕರು ಬಿಳಿಯರು ಎನ್ನಲಾಗಿದ್ದು, ವನೀತ್‌ ಸಿಂಗ್‌ ಚಾಲನೆ ಮಾಡುತ್ತಿದ್ದಾಗ ಅವನ ಪೇಟ ಎಳೆದು ಕಪಾಳ ಮೋಕ್ಷ ಮಾಡಿದರೆ, ಇತರರು ಚಾಲಕನ ಸೀಟಿನ ಹಿಂಭಾಗಕ್ಕೆ ಹೊಡೆದಿದ್ದಾರೆ.

ಅಮೆರಿಕದಲ್ಲಿ ಭಾರತೀಯ ಮೂಲದ ಹೋಟೆಲ್ ಧ್ವಂಸ; ದ್ವೇಷದ ದಾಳಿಗೆ ಸಿಖ್‌ ಸಮುದಾಯ ಖಂಡನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ