ಆ್ಯಪ್ನಗರ

Sri Lanka Crisis: ವಿಮಾನಯಾನ ಸಂಸ್ಥೆ ಮಾರಾಟ, ಸಂಬಳ ನೀಡಲು ಹಣ ಮುದ್ರಣಕ್ಕೆ ಮುಂದಾದ ಶ್ರೀಲಂಕಾ

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯನ್ನು ಖಾಸಗಿಗೆ ಮಾರಾಟ ಮಾಡಲು ಪ್ರಧಾನಿ ರಾನಿಲ್ ವಿಕ್ರೆಮಸಿಂಘೆ ಮುಂದಾಗಿದ್ದಾರೆ, ಜತೆಗೆ ಸರ್ಕಾರಿ ನೌಕರರ ವೇತನ ಪಾವತಿಗೆ ಹಣ ಮುದ್ರಣಕ್ಕೆ ಬಯಕೆ ವ್ಯಕ್ತಪಡಿಸಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 17 May 2022, 2:58 pm

ಹೈಲೈಟ್ಸ್‌:

  • ಶ್ರೀಲಂಕನ್ ಏರ್‌ಲೈನ್ಸ್ ಮಾರಾಟಕ್ಕೆ ಶ್ರೀಲಂಕಾದ ಸರ್ಕಾರ ಚಿಂತನೆ
  • ಸರ್ಕಾರಿ ನೌಕರರಿಗೆ ವೇತನ ನೀಡಲು ಹಣ ಮುದ್ರಣದ ಅನಿವಾರ್ಯತೆ
  • ಪರಿಹಾರ ಕಂಡುಕೊಳ್ಳಲು ಸರ್ವಪಕ್ಷಗಳ ಸಮಿತಿ ರಚನೆಗೆ ಒಲವು
  • ವಿದೇಶಿ ಸಾಲದ ಸುಸ್ತಿದಾರಿಕೆ ಅಧಿಕೃತ ಘೋಷಣೆಗೆ ದಿನಗಳು ಬಾಕಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web sri lanka pm ranil wickremesinghe says planning to sell airline print money to pay salaries
Sri Lanka Crisis: ವಿಮಾನಯಾನ ಸಂಸ್ಥೆ ಮಾರಾಟ, ಸಂಬಳ ನೀಡಲು ಹಣ ಮುದ್ರಣಕ್ಕೆ ಮುಂದಾದ ಶ್ರೀಲಂಕಾ
ಕೊಲಂಬೋ: ನಷ್ಟವನ್ನು ಭರಿಸಲು ಶ್ರೀಲಂಕಾದ ನೂತನ ಸರ್ಕಾರವು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ. ಸರ್ಕಾರಿ ಸಂಬಳ ಪಾವತಿ ಮಾಡಲು ಹಣ ಮುದ್ರಣ ಮಾಡುವ ಒತ್ತಡಕ್ಕೆ ಸಿಲುಕಿರುವುದರ ನಡುವೆ ರಾಷ್ಟ್ರೀಯ ಆರ್ಥಿಕತೆಯನ್ನು ಸ್ಥಿರಗೊಳಿಸುವ ಪ್ರಯತ್ನದ ಭಾಗವಾಗಿ ಈ ಮಾರಾಟ ಯೋಜನೆ ನಡೆಯುತ್ತಿದೆ.
ಹೊಸ ಆಡಳಿತವು ಶ್ರೀಲಂಕನ್ ಏರ್‌ಲೈನ್ಸ್‌ (Sri Lankan Airlines) ಅನ್ನು ಖಾಸಗೀಕರಣಗೊಳಿಸಲು ಆಲೋಚಿಸುತ್ತಿದೆ ಎಂದು ಪ್ರಧಾನಿ ರಾನಿಲ್ ವಿಕ್ರೆಮಸಿಂಘೆ ಸೋಮವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. 2021ರ ಮಾರ್ಚ್ ಅಂತ್ಯದ ವೇಳೆಗೆ ವಿಮಾನ ಸಂಸ್ಥೆಯು 45 ಬಿಲಿಯನ್ ರೂಪಾಯಿ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚು ಖರ್ಚು, ಇಂಧನ ಸಂಗ್ರಹವಿಲ್ಲ, ಔ‍ಷಧ ಇಲ್ಲವೇ ಇಲ್ಲ: ಇದು ಶ್ರೀಲಂಕಾ ಕಥೆ -ವ್ಯಥೆ!

ವಿದೇಶಿ ಸಾಲದ ಸುಸ್ತಿದಾರ ಎಂದು ಅಧಿಕೃತವಾಗಿ ಘೋಷಣೆ ಮಾಡಲು ಶ್ರೀಲಂಕಾ ಸಿದ್ಧತೆ ನಡೆಸಿದೆ. ಇದೇ ವೇಳೆ ಅದು ಸರ್ಕಾರಿ ಸಂಸ್ಥೆಗಳ ಮಾರಾಟದ ಅನಿವಾರ್ಯ ಸ್ಥಿತಿಗೆ ತಲುಪಿದೆ. "ವಿಮಾನದ ಒಳಗೆ ಕಾಲನ್ನೇ ಇಡದಂತಹ ಬಡವರಲ್ಲಿಯೇ ಬಡವರು ಈ ನಷ್ಟದ ಹೊರೆ ಹೊರುವಂತೆ ಆಗಬಾರದು" ಎಂದು ವಿಕ್ರೆಮಸಿಂಘೆ ಹೇಳಿದ್ದಾರೆ.

ಸಂಬಳಗಳನ್ನು ಪಾವತಿ ಮಾಡಲು ತಾವು ಹಣ ಮುದ್ರಣ ಮಾಡುವ ಒತ್ತಡಕ್ಕೆ ಸಿಲುಕಿರುವುದಾಗಿ ತಿಳಿಸಿದ್ದಾರೆ. ಇದು ರಾಷ್ಟ್ರೀಯ ಕರೆನ್ಸಿ ಮೇಲೆ ಒತ್ತಡ ಉಂಟುಮಾಡಲಿದೆ. ದೇಶದಲ್ಲಿ ಒಂದು ದಿನಕ್ಕೆ ಸಾಲುವಷ್ಟು ಮಾತ್ರವೇ ಪೆಟ್ರೋಲ್ ಉಳಿದಿದೆ. ಶ್ರೀಲಂಕಾ ನೀರಿನಲ್ಲಿ ಲಂಗರು ಹಾಕಿರುವ ಕಚ್ಚಾ ತೈಲ ಹೊತ್ತ ಮೂರು ಹಡಗುಗಳಿದ್ದು, ಅವುಗಳಿಗೆ ಹಣ ಪಾವತಿ ಮಾಡಲು ಮುಕ್ತ ಮಾರುಕಟ್ಟೆಯಲ್ಲಿ ಡಾಲರ್ ಖರೀದಿಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾ ನೆರವಿಗೆ ನಿಂತ ಭಾರತ, 65,000 ಮೆಟ್ರಿಕ್‌ ಟನ್‌ ಯೂರಿಯಾ ಪೂರೈಸಲು ನಿರ್ಧಾರ

"ಮುಂದಿನ ಕೆಲವು ತಿಂಗಳು ನಮ್ಮ ಜೀವನಕ್ಕೆ ಬಹಳ ಕಷ್ಟಕರ ಸಮಯವಾಗಿರಲಿವೆ. ಪ್ರಸ್ತುತ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯೊಂದಿಗೆ ರಾಷ್ಟ್ರೀಯ ಸಂಸತ್ ಅಥವಾ ರಾಜಕೀಯ ಒಕ್ಕೂಟವನ್ನು ನಾವು ಕೂಡಲೇ ಸ್ಥಾಪಿಸಬೇಕಾಗಿದೆ" ಎಂದು ತಿಳಿಸಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ