ಆ್ಯಪ್ನಗರ

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಸಂಸತ್ತನ್ನು ಅಮಾನತಿನಲ್ಲಿರಿಸಿದ ಅಧ್ಯಕ್ಷರು

ವಿಕ್ರಮಸಿಂಘೆ ಬೇಡಿಕೆಯ ಬೆನ್ನಲ್ಲೇ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಮಹಿಂದಾ ರಾಜಪಕ್ಷೆಗೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡುವ ಉದ್ದೇಶದಿಂದ ಸಂಸತ್ತನ್ನು ಅಮಾನತಿನಲ್ಲಿ ಇರಿಸಿದ್ದಾರೆ ಎನ್ನಲಾಗುತ್ತಿದೆ.

Vijaya Karnataka Web 27 Oct 2018, 6:29 pm
ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾಗಿರುವ ಮತ್ತು ರಾಜಕೀಯ ಬಿಕ್ಕಟ್ಟು ಮತ್ತು ಕ್ಷಿಪ್ರ ಬೆಳವಣಿಗೆಯ ಮಧ್ಯೆಯೇ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸಂಸತ್ತನ್ನು ನ. 16ರವರೆಗೆ ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ.
Vijaya Karnataka Web sri lanka president suspends parliament after political crisis
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಸಂಸತ್ತನ್ನು ಅಮಾನತಿನಲ್ಲಿರಿಸಿದ ಅಧ್ಯಕ್ಷರು


ಶುಕ್ರವಾರ ಉಂಟಾಗಿದ್ದ ರಾಜಕೀಯ ವಿದ್ಯಮಾನದಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಹುದ್ದೆಯಿಂದ ಕೆಳಗಿಳಿಸಿ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಿದ್ದರು.

ಶ್ರೀಲಂಕಾ ಕ್ಷಿಪ್ರ ರಾಜಕೀಯ ಬೆಳವಣಿಗೆ: ಮಹಿಂದಾ ರಾಜಪಕ್ಷೆ ನೂತನ ಪ್ರಧಾನಿ

ಆದರೆ ಶನಿವಾರ ವಿಕ್ರಮಸಿಂಘೆ ಸಂಸತ್ತಿನ ತುರ್ತು ಅಧಿವೇಶನ ಕರೆಯುವಂತೆ ಅಧ್ಯಕ್ಷರನ್ನು ಒತ್ತಾಯಿಸಿದ್ದರು. ಅಲ್ಲದೆ ತಾವು ಬಹುಮತ ಸಾಬೀತುಪಡಿಸುವುದಾಗಿಯೂ ಹೇಳಿದ್ದರು. ವಿಕ್ರಮಸಿಂಘೆ ಬೇಡಿಕೆಯ ಬೆನ್ನಲ್ಲೇ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಮಹಿಂದಾ ರಾಜಪಕ್ಷೆಗೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡುವ ಉದ್ದೇಶದಿಂದ ಸಂಸತ್ತನ್ನು ಅಮಾನತಿನಲ್ಲಿ ಇರಿಸಿದ್ದಾರೆ ಎನ್ನಲಾಗುತ್ತಿದೆ.

ರಾಜಪಕ್ಸೆ ಮತ್ತೆ ಅಧಿಕಾರಕ್ಕೆ ಮರಳಿರುವುದು ಭಾರತದ ಆತಂಕಕ್ಕೆ ಕಾರಣ!

225 ಸದಸ್ಯಬಲದ ಶ್ರೀಲಂಕಾ ಸಂಸತ್ತಿನಲ್ಲಿ ರಾಜಪಕ್ಷೆ ಮತ್ತು ಸಿರಿಸೇನಾ ಒಕ್ಕೂಟ ಕೇವಲ 95 ಸ್ಥಾನ ಹೊಂದಿದೆ. ಆದರೆ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್ ನ್ಯಾಶನಲ್ ಪಾರ್ಟಿ ಒಟ್ಟು 106 ಸ್ಥಾನ ಹೊಂದಿದ್ದು, ಬಹುಮತಕ್ಕಿಂತ 7 ಸ್ಥಾನ ಕೊರತೆ ಹೊಂದಿದೆ. ಹಾಗಿದ್ದರೂ ಬಹುಮತ ಸಾಬೀತುಪಡಿಸುವುದಾಗಿ ವಿಕ್ರಮಸಿಂಘೆ ಕೇಳಿಕೊಂಡಿದ್ದರೂ, ಅದಕ್ಕೆ ಅವಕಾಶ ಲಭ್ಯವಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ