ಆ್ಯಪ್ನಗರ

ಅಧ್ಯಕ್ಷರು ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ: ಲಂಕಾದಲ್ಲಿ ಉರಿಯುತ್ತಿರುವ ಬೆಂಕಿಗೆ ಸರ್ಕಾರದಿಂದಲೇ ತುಪ್ಪ!

ಆರ್ಥಿಕ ಬಿಕ್ಕಟ್ಟು ನಿಭಾಯಿಸುವಲ್ಲಿಎಡವಿದ ಸರಕಾರದ ವಿರುದ್ಧ ಜನಾಕ್ರೋಶ ತೀವ್ರಗೊಂಡಿದ್ದು, ಜನರು ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆಹಾರ, ಅಗತ್ಯ ಔಷಧ, ಪೆಟ್ರೋಲ್‌, ಡೀಸೆಲ್‌ ಖರೀದಿಸಲು ಪರಿತಪಿಸುವಂತಾಗಿದ್ದು, ಆಕ್ರೋಶದ ಕಟ್ಟೆಯೊಡೆದು ಹಿಂಸಾಚಾರಕ್ಕೆ ಇಳಿದಿದ್ದಾರೆ. ರಾಜಕೀಯ ಅಸ್ಥಿರತೆ ತೀವ್ರವಾಗಿದ್ದರೂ ರಾಜಪಕ್ಸ ಮಾತ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದು, ಅಲ್ಲಿನ ಜನರ ಆಕ್ರೋಶ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

Authored byಸಿನಾನ್\u200c ಇಂದಬೆಟ್ಟು | Vijaya Karnataka Web 6 Apr 2022, 11:23 pm
ಕೊಲಂಬೊ: ಆರ್ಥಿಕ ಸಂಕಷ್ಟದಿಂದ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿತಲೆದೋರಿರುವ ರಾಜಕೀಯ ಅಸ್ಥಿರತೆ ಸದ್ಯಕ್ಕೆ ತಿಳಿಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. 'ಮಿತ್ರಪಕ್ಷಗಳ ಸಂಸದರು ಬೆಂಬಲ ವಾಪಸ್‌ ಪಡೆದಿರುವ ಕಾರಣ ಸರಕಾರ ಅಲ್ಪಮತಕ್ಕೆ ಕುಸಿದಿದ್ದರೂ ಅಧ್ಯಕ್ಷ ಗೊಟಬೊಯ ರಾಜಪಕ್ಸ ಯಾವ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಸದ್ಯ ಉದ್ಭವಿಸಿರುವ ಬಿಕ್ಕಟ್ಟನ್ನು ಎದುರಿಸಲಿದ್ದಾರೆ' ಎಂದು ಸರಕಾರ ಸ್ಪಷ್ಟಪಡಿಸಿದೆ.
Vijaya Karnataka Web Sri Lanka Economic Crisis
ಅಧ್ಯಕ್ಷ ಗೋಟಬಯ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದಿರುವ ಜನ


'ಅಧ್ಯಕ್ಷರ ಪದತ್ಯಾಗದ ಮಾತೇ ಇಲ್ಲ. ಸರಕಾರಕ್ಕೆ ಬಹುಮತ ಇರುವುದನ್ನು ಅವರು ಸಾಬೀತುಪಡಿಸಲಿದ್ದಾರೆ' ಎಂದು ಸರಕಾರದ ಮುಖ್ಯ ಸಚೇತಕ ಜಾನ್ಸ್‌ಟನ್‌ ಫೆರ್ನಾಂಡೊ ಅವರು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ತುರ್ತು ಪರಿಸ್ಥಿತಿಗೂ ಬಗ್ಗದ ಲಂಕಾ ಪ್ರಜೆಗಳು: ಕೊಲಂಬೋದ ಬೀದಿಗಳಲ್ಲಿ ಆಕ್ರೋಶದ ಹೊಳೆ, ಪೊಲೀಸರು ಹೈರಾಣ
ಅಲ್ಲದೇ, 'ದೇಶದಲ್ಲಿಹೆಚ್ಚುತ್ತಿರುವ ಹಿಂಸಾಚಾರದ ಹಿಂದೆ ಪ್ರತಿಪಕ್ಷ ಜನತಾ ವಿಮುಕ್ತಿ ಪೆರಮುನವಾಸದ(ಜೆವಿಪಿ) ಕೈವಾಡವಿದೆ. ಕೀಳು ರಾಜಕೀಯ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟು ನಿಭಾಯಿಸುವಲ್ಲಿಎಡವಿದ ಸರಕಾರದ ವಿರುದ್ಧ ಜನಾಕ್ರೋಶ ತೀವ್ರಗೊಂಡಿದ್ದು, ಜನರು ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆಹಾರ, ಅಗತ್ಯ ಔಷಧ, ಪೆಟ್ರೋಲ್‌, ಡೀಸೆಲ್‌ ಖರೀದಿಸಲು ಪರಿತಪಿಸುವಂತಾಗಿದ್ದು, ಆಕ್ರೋಶದ ಕಟ್ಟೆಯೊಡೆದು ಹಿಂಸಾಚಾರಕ್ಕೆ ಇಳಿದಿದ್ದಾರೆ. ರಾಜಕೀಯ ಅಸ್ಥಿರತೆ ತೀವ್ರವಾಗಿದ್ದರೂ ರಾಜಪಕ್ಸ ಮಾತ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದು, ಅಲ್ಲಿನ ಜನರ ಆಕ್ರೋಶ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಅಕ್ಕಿ ಕೆಜಿಗೆ 220 ರೂ, ಹಾಲಿನ ಪುಡಿಗೆ 1900 ರೂ.! ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳ ಬೆಲೆ ಬಲು ದುಬಾರಿ
'ಎಲ್ಲವನ್ನೂ ಚೀನಾಕ್ಕೆ ಮಾರಾಟ ಮಾಡಿದ್ದೀರಿ': ಶ್ರೀಲಂಕಾ ಸರ್ಕಾರದ ವಿರುದ್ಧ ಜನರ ಆಕ್ರೋಶ
ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಎದುರಿಸುತ್ತಿರುವ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಲಂಕಾದಲ್ಲಿ ಈಗ ರಾಜಕೀಯ ಕೋಲಾಹಲ ನಡೆದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಅವುಗಳ ಅಲಭ್ಯತೆ ಜನರಲ್ಲಿ ಆಕ್ರೋಶ ಮಡುಗಟ್ಟಿಸಿದೆ. ಇದರಿಂದ ಕರ್ಫ್ಯೂವನ್ನು ಲೆಕ್ಕಿಸದೆ ಜನರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಂಕಾ ವಿಶೇಷ ಪಡೆಗಳ ಸೈನಿಕರನ್ನು ಬಳಸಿಕೊಳ್ಳುತ್ತಿದ್ದರೆ, ರಾಜಧಾನಿ ಕೊಲಂಬೋದಲ್ಲಿ ಸೈನಿಕರನ್ನು ಪೊಲೀಸರು ತಡೆಯುತ್ತಿರುವ ಘಟನೆ ವಿವಾದ ಸೃಷ್ಟಿಸಿದೆ.

ಎಲ್ಲವನ್ನೂ ಚೀನಾಕ್ಕೆ ಮಾರಾಟ ಮಾಡಿದ್ದೀರಿ, ಈಗ ನಮ್ಮ ದೇಶದಲ್ಲಿ ಏನೂ ಉಳಿದಿಲ್ಲ. ಪ್ರತಿಯೊಂದಕ್ಕೂ ಬೇರೆ ದೇಶಗಳ ಕಡೆ ಕೈಚಾಚುವ ದಯನೀಯ ಪರಿಸ್ಥಿತಿಯನ್ನು ನೀವೇ ತಂದಿದ್ದೀರಿ ಎಂದು ರಾಜಪಕ್ಸ ಸರ್ಕಾರದ ವಿರುದ್ಧ ಲಂಕಾದ ಆಹಾರ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ.

Sri Lanka Crisis: ಶ್ರೀಲಂಕಾದಲ್ಲಿ ಕರ್ಫ್ಯೂ; ಟ್ವಿಟ್ಟರ್, ಫೇಸ್‌ಬುಕ್ ಕೂಡ ಬಂದ್
ಹಣ್ಣು ಮತ್ತು ತರಕಾರಿಗಳ ದರ ಗಗನಮುಖಿಯಾಗುತ್ತಿವೆ. ಇದರಿಂದ ಜನರು ಕಂಗಾಲಾಗಿದ್ದಾರೆ. "3-4 ತಿಂಗಳ ಹಿಂದೆ ಸೇಬು ಹಣ್ಣು ಕೆಜಿಗೆ 500 ರೂ ಇತ್ತು. ಈಗ ಅದು 1,000 ರೂ ಆಗಿದೆ. ಕೆಜಿಗೆ 700 ರೂ ಇದ್ದ ಸೀಬೆ ಹಣ್ಣಿನ ದರ, ಈಗ 1500 ರೂಪಾಯಿ ಆಗಿದೆ. ಅವುಗಳನ್ನು ಕೊಳ್ಳಲೂ ಜನರ ಬಳಿ ಹಣವಿಲ್ಲ" ಎಂದು ಹಣ್ಣು ವ್ಯಾಪಾರಿ ಫಾರೂಖ್ ತಿಳಿಸಿದ್ದಾರೆ.

"ಶ್ರೀಲಂಕಾ ಸರ್ಕಾರ ಎಲ್ಲವನ್ನೂ ಚೀನಾಕ್ಕೆ ಮಾರಾಟ ಮಾಡಿದೆ. ಇದು ಅತ್ಯಂತ ದೊಡ್ಡ ಸಮಸ್ಯೆ. ಎಲ್ಲವನ್ನೂ ಚೀನಾಕ್ಕೆ ಮಾರಾಟ ಮಾಡಿರುವುದರಿಂದ ಶ್ರೀಲಂಕಾ ಬಳಿ ಹಣವೇ ಇಲ್ಲ. ಬೇರೆ ದೇಶಗಳಿಂದ ಸಾಲದ ರೂಪದಲ್ಲಿ ಎಲ್ಲವನ್ನೂ ಪಡೆದುಕೊಳ್ಳುತ್ತಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ