ಆ್ಯಪ್ನಗರ

ಸುಡಾನ್‌ ಅಧ್ಯಕ್ಷ ಬಶೀರ್‌ ಆಡಳಿತ ಅಂತ್ಯ

ದೇಶವಾಸಿಗಳು ಬಶೀರ್‌ ಅಡಳಿತದ ವಿರುದ್ಧ ತಿರುಗಿ ಬಿದ್ದಿದ್ದು, ಅನೇಕ ತಿಂಗಳಿನಿಂದ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಸರ್ವಾಧಿಕಾರಿ ಆಡಳಿತ ಪತನದ ಸುದ್ದಿ ಹೊರಬೀಳುತ್ತಿದ್ದಂತೆ ಸುಡಾನ್‌ ನಿವಾಸಿಗಳು ರಸ್ತೆಗಿಳಿದು ಸಂಭ್ರಮಿಸಿದ್ದಾರೆ.

Vijaya Karnataka 12 Apr 2019, 5:00 am
ಖಾರ್ಟೌಮ್‌: ಸುಡಾನ್‌ ಅಧ್ಯಕ್ಷ ಒಮರ್‌ ಅಲ್‌ ಬಶೀರ್‌ ಅವರನ್ನು ಅಲ್ಲಿನ ಸೇನೆ ಗುರುವಾರ ಬಂಧಿಸಿದ್ದು, ಈ ಮೂಲಕ ಮೂರು ದಶಕಗಳ ಸರ್ವಾಧಿಕಾರಿ ಅಡಳಿತಕ್ಕೆ ಕೊನೆ ಬಿದ್ದಿದೆ.
Vijaya Karnataka Web bashir


ದೇಶವಾಸಿಗಳು ಬಶೀರ್‌ ಅಡಳಿತದ ವಿರುದ್ಧ ತಿರುಗಿ ಬಿದ್ದಿದ್ದು, ಅನೇಕ ತಿಂಗಳಿನಿಂದ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಸರ್ವಾಧಿಕಾರಿ ಆಡಳಿತ ಪತನದ ಸುದ್ದಿ ಹೊರಬೀಳುತ್ತಿದ್ದಂತೆ ಸುಡಾನ್‌ ನಿವಾಸಿಗಳು ರಸ್ತೆಗಿಳಿದು ಸಂಭ್ರಮಿಸಿದ್ದಾರೆ. ಇದೇ ವೇಳೆ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುವುದಾಗಿ ಭದ್ರತಾ ಪಡೆಗಳು ಘೋಷಿಸಿವೆ.

''ಬಶೀರ್‌ ಅವರ ಅಡಳಿತವನ್ನು ಕೊನೆಗಳಿಸಲಾಗಿದೆ. ಅವರನ್ನು ಸುರಕ್ಷಿತ ಪ್ರದೇಶದಲ್ಲಿ ಇರಿಸಲಾಗಿದೆ. ಮುಂದಿನ ಎರಡು ವರ್ಷ ಕಾಲ ದೇಶದ ಅಡಳಿತವನ್ನು ಮಿಲಿಟರಿ ಸಮಿತಿಯೊಂದು ನಿರ್ವಹಿಸಲಿದೆ. ಮುಂದಿನ ಆದೇಶದವರೆಗೆ ದೇಶದ ಗಡಿ ಮತ್ತು ವಾಯುಪ್ರದೇಶವನ್ನು ಬಂದ್‌ ಮಾಡಲಾಗುವುದು,'' ಎಂದು ಸುಡಾನ್‌ ರಕ್ಷಣಾ ಸಚಿವ ಅವದ್‌ ಇಬ್ನೋಫ್‌ ತಿಳಿಸಿದ್ದಾರೆ.

1989ರಿಂದ ಇಲ್ಲಿಯವರೆಗೆ ಸುಡಾನ್‌ ಅಧ್ಯಕ್ಷರಾಗಿ ಬಶೀರ್‌ ಅಡಳಿತ ನಡೆಸಿದ್ದಾರೆ. ನರಮೇಧ ಮತ್ತು ಯುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯವೂ ಬಶೀರ್‌ ವಿರುದ್ಧ ವಾರಂಟ್‌ ಜಾರಿಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ