ಆ್ಯಪ್ನಗರ

ಕಾಶ್ಮೀರ, ಕೇರಳ, ಬೆಂಗಳೂರಿಗೂ ಭೇಟಿ ನೀಡಿದ್ದ ಸೂಸೈಡ್ ಬಾಂಬರ್‌ಗಳು: ಲಂಕಾ ಸೇನಾ ಮುಖ್ಯಸ್ಥರ ಹೇಳಿಕೆ

ಉಗ್ರರ ಈ ಭೇಟಿಗಳ ನಿಖರ ಕಾರಣ ಇನ್ನೂ ತಿಳಿದಿಲ್ಲ; ಆದರೆ ಇತರ ಉಗ್ರ ಸಂಘಟನೆಗಳ ಜತೆಗೆ ಅವರ ಸಂಬಂಧಗಳಿರುವುದು ಖಚಿತವಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನಾನಾಯಕೆ ತಿಳಿಸಿದರು. 'ಅವರು ಭಾರತಕ್ಕೆ ಭೇಟಿ ನೀಡಿದ್ದರು. ಬೆಂಗಳೂರು, ಕಾಶ್ಮೀರ ಮತ್ತು ಕೇರಳ ರಾಜ್ಯಗಳಿಗೆ ಭೇಟಿ ನೀಡಿದ್ದರು ಎಂದು ನಮಗೆ ಲಭ್ಯವಿರುವ ಮಾಹಿತಿ ತಿಳಿಸಿದೆ' ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಸೇನಾ ಮುಖ್ಯಸ್ಥರು ತಿಳಿಸಿದರು.

Vijaya Karnataka Web 4 May 2019, 2:17 pm
ಕೊಲಂಬೋ: ಈಸ್ಟರ್ ಭಾನುವಾರದಂದು ದ್ವೀಪ ರಾಷ್ಟ್ರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಆತ್ಮಾಹುತಿ ದಳದ ಉಗ್ರರು ಭಯೋತ್ಪಾದನೆ ಚಟುವಟಿಕೆಗಳ ತರಬೇತಿಗಾಗಿ ಕಾಶ್ಮೀರ, ಕೇರಳ ಮತ್ತು ಬೆಂಗಳೂರಿಗೆ ಭೇಟಿ ನೀಡಿದ್ದರು ಎಂದು ಶ್ರೀಲಂಕಾ ಸೇನಾ ಪಡೆ ಮುಖ್ಯಸ್ಥರು ಹೇಳಿದ್ದಾರೆ.
Vijaya Karnataka Web Lanka Blasts probe


ಉಗ್ರರ ಈ ಭೇಟಿಗಳ ನಿಖರ ಕಾರಣ ಇನ್ನೂ ತಿಳಿದಿಲ್ಲ; ಆದರೆ ಇತರ ಉಗ್ರ ಸಂಘಟನೆಗಳ ಜತೆಗೆ ಅವರ ಸಂಬಂಧಗಳಿರುವುದು ಖಚಿತವಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನಾನಾಯಕೆ ತಿಳಿಸಿದರು.

'ಅವರು ಭಾರತಕ್ಕೆ ಭೇಟಿ ನೀಡಿದ್ದರು. ಬೆಂಗಳೂರು, ಕಾಶ್ಮೀರ ಮತ್ತು ಕೇರಳ ರಾಜ್ಯಗಳಿಗೆ ಭೇಟಿ ನೀಡಿದ್ದರು ಎಂದು ನಮಗೆ ಲಭ್ಯವಿರುವ ಮಾಹಿತಿ ತಿಳಿಸಿದೆ' ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಸೇನಾ ಮುಖ್ಯಸ್ಥರು ತಿಳಿಸಿದರು.

ದೇಶದ ಹೊರಗಿನ ಕೆಲವು ಉಗ್ರ ಸಂಘಟನೆಗಳ ಜತೆಗೆ ಸಂಪರ್ಕ ಸಾಧಿಸಲು ಈ ಭೇಟಿ ನಡೆದಿರಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಏಪ್ರಿಲ್ 21ರಂದು ಶ್ರೀಲಂಕಾದ ಮೂರು ಚರ್ಚ್‌ಗಳು ಮತ್ತು ನಾಲ್ಕು ಐಷಾರಾಮಿ ಹೋಟೆಲ್‌ಗಳಲ್ಲಿ ಒಟ್ಟು 9 ಸರಣಿ ಸ್ಫೋಟಗಳು ಸಂಭವಿಸಿದ್ದವು. ದುರಂತದಲ್ಲಿ 253 ಮಂದಿ ಬಲಿಯಾಗಿ 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಈ ದಾಳಿಗಳ ಹೊಣೆ ಹೊತ್ತುಕೊಂಡಿತ್ತು.

ಐಸಿಸ್‌ ಜತೆ ಸಂಪರ್ಕವಿರುವ ಹಲವು ಶಂಕಿತ ಉಗ್ರರನ್ನು ಇತ್ತೀಚೆಗೆ ಭಾರತದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಮಿಳುನಾಡು ಮತ್ತು ಕೇರಳದಲ್ಲಿ ಬಂಧಿಸಿತ್ತು.

ಕೊಲಂಬೋ ಸ್ಫೋಟಗಳ ಸಂಚುಕೋರರಲ್ಲಿ ಒಬ್ಬನಾದ ಸೊಹ್ರಾನ್ ಹಾಶಿಫ್ ಜತೆ ನೇರ ಸಂಪರ್ಕ ಹೊಂದಿದ್ದ ಫೈಜಲ್ ಎಂಬಾತನನ್ನು ಏಪ್ರಿಲ್ 27ರಂದು ಕೇರಳದ ಕೊಲ್ಲಂನಲ್ಲಿ ಎನ್‌ಐಎ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದೆ.

ಫೈಜಲ್ ನೀಡಿದ ಮಾಹಿತಿ ಅನುಸರಿಸಿ ಕೇರಳದ ಪಾಲಕ್ಕಾಡ್ ಮತ್ತು ಕಾಸರಗೋಡಿನಿಂದಲೂ ಮೂವರನ್ನು ಎನ್‌ಐಎ ಬಂಧಿಸಿತ್ತು.

ಸರಣಿ ಬಾಂಬ್ ಸ್ಫೋಟಗಳಿಗೆ ಮೊದಲೇ ಇಂತಹದದೊಂದು ದಾಳಿ ಸಾಧ್ಯತೆ ಇದೆ ಎಂದು ಭಾರತ ಶ್ರೀಲಂಕಾದ ಗುಪ್ತಚರ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿತ್ತು. ಶಂಕಿತ ಐಸಿಸ್ ಉಗ್ರನ ಬಂಧನದ ಬಳಿಕ ಈ ಸ್ಫೋಟದ ಸಂಚಿನ ಸುಳಿವು ದೊರೆತಿತ್ತು ಎಂದು ವರದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ