ಆ್ಯಪ್ನಗರ

ಫಿಜಿ: ಕಾರ್ಯಕ್ರಮದ ವೇಳೆ ಚೀನಾ-ತೈವಾನ್‌ ಸರಕಾರಿ ಅಧಿಕಾರಿಗಳ ನಡುವೆ ಮಾರಾಮಾರಿ!

​ತೈವಾನ್‌ನ ರಾಷ್ಟ್ರೀಯ ದಿನವನ್ನು ಆಚರಿಸುವ ಹಿನ್ನೆಲೆ ಸುವಾದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು, ಈ ಸಂದರ್ಭ ಇಂತಹ ಅಹಿತಕರ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ತೈವಾನ್‌ ವಿದೇಶಾಂಗ ಸಚಿವಾಲಯ, ಗಾಯಗೊಂಡಿರುವ ತೈವಾನ್‌ನ ಸರಕಾರಿ ನೌಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೀನಾದ ರಾಯಬಾರಿಯನ್ನು ಪೊಲೀಸರು ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ.

Vijaya Karnataka Web 19 Oct 2020, 1:38 pm
ಸುವಾ: ಚೀನಾ ಹಾಗೂ ತೈವಾನ್‌ ನಡುವೆ ರಾಜತಾಂತ್ರಿಕ ಮಾನ್ಯತೆ ಕುರಿತು ಶೀತಲ ಸಮರ ಏರ್ಪಟ್ಟಿರುವ ನಡುವೆಯೇ ಚೀನಾದ ರಾಯಬಾರಿ ಹಾಗೂ ತೈವಾನ್‌ನ ಸರಕಾರಿ ಸಿಬ್ಬಂದಿ ನಡುವೆ ಹೊಡೆದಾಟ ನಡೆದಿದೆ. ಈ ಘಟನೆ ಫಿಜಿ ದೇಶದ ರಾಜಧಾನಿ ಸುವಾದಲ್ಲಿ ಸಂಭವಿಸಿದೆ.
Vijaya Karnataka Web Taiwan


ತೈವಾನ್‌ನ ರಾಷ್ಟ್ರೀಯ ದಿನವನ್ನು ಆಚರಿಸುವ ಹಿನ್ನೆಲೆ ಸುವಾದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು, ಈ ಸಂದರ್ಭ ಇಂತಹ ಅಹಿತಕರ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ತೈವಾನ್‌ ವಿದೇಶಾಂಗ ಸಚಿವಾಲಯ, ಗಾಯಗೊಂಡಿರುವ ತೈವಾನ್‌ನ ಸರಕಾರಿ ನೌಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೀನಾದ ರಾಯಬಾರಿಯನ್ನು ಪೊಲೀಸರು ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ.

ಅಕ್ಟೋಬರ್ 8 ರ ಕಾರ್ಯಕ್ರಮದ ವೇಳೆ ಅತಿಥಿಗಳ ಫೋಟೋ ತೆಗೆಯುವುದನ್ನು ತೈವಾನ್‌ನ ಸರಕಾರಿ ಅಧಿಕಾರಿ ಚೀನಾದ ರಾಯಬಾರಿಯನ್ನು ತಡೆದ ಹಿನ್ನೆಲೆ ಈ ರೀತಿ ಹಲ್ಲೆ ನಡೆಸಲಾಗಿದೆ ಎಂದು ತೈವಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ಜೊವಾನ್ನೆ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಇನ್ನು ಚೀನಾದ ಫಿಜಿ ರಾಯಬಾರಿಯ ನಡೆಗೆ ತೈವಾನ್‌ನ ವಿದೇಶಾಂಗ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಇದು ಕಾನೂನಿನ ನಿಯಮ ಮತ್ತು ನಾಗರಿಕ ವರ್ತನೆಯನ್ನು ಉಲ್ಲಂಘಿಸಿದೆ ಎಂದು ಕಿಡಿಕಾರಿದೆ.

ಪಿಎಂ ಇಮ್ರಾನ್‌ ಸರಕಾರದ ವಿರುದ್ಧ ಪ್ರತಿಭಟನೆ ಬೆನ್ನಲ್ಲೆ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಅಳಿಯ ಅರೆಸ್ಟ್‌!

ಈ ಬಗ್ಗೆ ಕ್ರಮಗೈಗೊಳ್ಳುವಂತೆ ಪಿಜಿ ಸರಕಾರಕ್ಕೆ ತೈವಾನ್‌ ಮನವಿ ಮಾಡಿದೆ. 1949 ಅಂತರ್ಯುದ್ಧದ ನಂತರ ತೈವಾನ್ ಪ್ರತ್ಯೇಕವಾಗಿದೆ. ಸದ್ಯ ವಿಭಜನೆಯಾಗಿರುವ ತೈವಾನ್‌ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಸರ್ವಾಧಿಕಾರಿಯಾಗಿರುವ ಚೀನಾಗೆ ಈ ಪುಟ್ಟ ದೇಶವನ್ನು ಬಡಿದು ಬಾಯಿಗೆ ಹಾಕಿಕೊಳ್ಳಬೇಕು ಎನ್ನುವ ಆಸೆ. ಹೀಗಾಗಿ ಒಂದಲ್ಲ ಒಂದು ರೀತಿಯಲ್ಲಿ ಕಿರಿಕ್‌ ಮಾಡುತ್ತಲೇ ಇದೆ. ಆದರೆ ಎಲ್ಲೆಡೆ ತೈವಾನ್‌ ತಿರುಗೇಟು ನೀಡುತ್ತಲೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ