ಆ್ಯಪ್ನಗರ

ಮುನ್ನೆಚ್ಚರಿಕಾ ಕ್ರಮ ಕಡೆಗಣಿಸಿದರೆ ಕೊರೊನಾ ಡೇಂಜರ್‌: ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ಅತೀ ಮುಖ್ಯ ಇದನ್ನ ಕಡೆಗಣಿಸಿದರೆ ಕೊರೊನಾ ಸೋಂಕು ಡೇಂಜರ್‌ ಹಂತಕ್ಕೆ ತಲುಪಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

Vijaya Karnataka 14 Jul 2020, 7:38 am
ಹೊಸದಿಲ್ಲಿ: ಆರೋಗ್ಯ ಕಾಪಾಡಿಕೊಳ್ಳುವ ವಿಷಯದಲ್ಲಿ ಮೂಲಭೂತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದ ರಾಷ್ಟ್ರಗಳಲ್ಲಿ ಕೋವಿಡ್‌-19 ಸೋಂಕು ಹಾವಳಿ ಮಿತಿ ಮೀರಿ ಹೆಚ್ಚಳವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಎಚ್ಚರಿಕೆ ನೀಡಿದೆ.
Vijaya Karnataka Web 75755812


''ಸೋಂಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ವಿಷಯದಲ್ಲಿಅನೇಕ ರಾಷ್ಟ್ರಗಳು ತಪ್ಪು ದಾರಿಯಲ್ಲಿ ಸಾಗಿವೆ. ಜನರು ಕೂಡ ಈ ಸೋಂಕಿನ ಅಪಾಯವನ್ನು ಕಡೆಗಣಿಸುತ್ತಿದ್ದಾರೆ. ಇದರಿಂದ ಅಪಾಯದ ಕತ್ತಿ ಇನ್ನಷ್ಟು ಹರಿತಗೊಳ್ಳುತ್ತಿದೆ. ಮುಖ್ಯವಾಗಿ ಈ ಸೋಂಕು ನಿಯಂತ್ರಣಕ್ಕೆ ಬರಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಆಗಾಗ ಕೈ ತೊಳೆಯುವುದು ಮರೆಯಬಾರದು. ಕೆಮ್ಮು-ಜ್ವರದಂತಹ ಸೋಂಕು ಲಕ್ಷಣಗಳು ಇರುವವರು ಜನರ ನಡುವೆ ಓಡಾಡದೇ ಮನೆಯಲ್ಲಿಯೇ ಪ್ರತ್ಯೇಕವಾಗಿ ಉಳಿಯಬೇಕು. ಸರಕಾರಗಳು ಕೂಡ ಅಗತ್ಯ ವೈದ್ಯಕೀಯ ಶುಶ್ರೂಷೆಯನ್ನು ತ್ವರಿತವಾಗಿ ಅಚ್ಚುಕಟ್ಟುಗೊಳಿಸಬೇಕು. ಇವು ಸಾಂಕ್ರಾಮಿಕ ತಡೆಯುವ ಮೂಲ ಹಾಗೂ ಮಹತ್ವದ ಕ್ರಮಗಳು,'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್‌ ಅಧನೋಮ್‌ ಘೆಬ್ರೆಯಾಸುಸ್‌ ಹೇಳಿದ್ದಾರೆ.
ವಿಕ ಆಶಯ: ವ್ಯರ್ಥವಾಗದಿರಲಿ ಲಾಕ್‌ಡೌನ್‌, ಸರಕಾರ ತನ್ನ ಕೆಲಸ ಮಾಡಲಿ, ಕೊರೊನಾ ಬಗ್ಗೆ ಭಯ ಬೇಡ, ಜನರು ನಿಯಮ ಪಾಲಿಸಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ