ಆ್ಯಪ್ನಗರ

ಶ್ವೇತಭವನದ ಹೊರಗೆ ಶೂಟೌಟ್: ಏಕಾಏಕಿ ಸುದ್ದಿಗೋಷ್ಠಿಯಿಂದ ಟ್ರಂಪ್‌ರನ್ನ ಬೇರೆಡೆ ರವಾನಿಸಿದ ಭದ್ರತಾ ಪಡೆ!

ಅಮೆರಿಕ ಅಧ್ಯಕ್ಷ ಅವರನ್ನ ಅವರ ಭದ್ರತಾ ಪಡೆ, ಸುದ್ದಿಗೋಷ್ಠಿ(ನ್ಯೂಸ್‌ ರೂಂ)ನಿಂದ ಏಕಾಏಕಿ ಹೊರಗೆ ಕರೆದುಕೊಂಡು ಹೋದ ಘಟನೆ ನಡೆದಿದೆ. ಯಾವುದೇ ಮಾಹಿತಿ ನೀಡದೆ ಭದ್ರತಾ ಪಡೆ ಏಕಾಏಕಿ ಟ್ರಂಪ್‌ ಅವರನ್ನ ನ್ಯೂಸ್‌ ರೂಂನಿಂದ ಹೊರ ಕರೆದುಕೊಂಡು ಹೋಗಿದ್ದರಿಂದ ಕೊಂಚ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೆಲ ನಿಮಿಷ ಟ್ರಂಪ್‌ ಹೊರಗಿದ್ದರು. ಅದಕ್ಕೆ ಕಾರಣ ಏನು? ಇಲ್ಲಿದೆ.

Agencies 11 Aug 2020, 7:52 am
ವಾಷಿಂಗ್ಟನ್‌: ಶ್ವೇತಭವನದ ಸಂಕೀರ್ಣದ ಹೊರಗೆ ದುಷ್ಕರ್ಮಿಗಳು ಗುಂಡು ಹಾರಿಸಿದ ಹಿನ್ನೆಲೆ ಅಮೆರಿಕ ಅಧ್ಯಕ್ಷ ಅವರನ್ನ ಅವರ ಭದ್ರತಾ ಪಡೆ ಸುದ್ದಿಗೋಷ್ಠಿ(ನ್ಯೂಸ್‌ ರೂಂ)ನಿಂದ ಏಕಾಏಕಿ ಹೊರಗೆ ಕರೆದುಕೊಂಡು ಹೋದ ಘಟನೆ ನಡೆದಿದೆ. ಯಾವುದೇ ಮಾಹಿತಿ ನೀಡದೆ ಭದ್ರತಾ ಪಡೆ ಏಕಾಏಕಿ ಟ್ರಂಪ್‌ ಅವರನ್ನ ನ್ಯೂಸ್‌ ರೂಂನಿಂದ ಹೊರ ಕರೆದುಕೊಂಡು ಹೋಗಿದ್ದರಿಂದ ಕೊಂಚ ಹೊತ್ತು ಆತಂಕ ನಿರ್ಮಾಣವಾಗಿತ್ತು. ಕೆಲ ನಿಮಿಷಗಳ ಕಾಲ ಟ್ರಂಪ್‌ ಬೇರೆ ಕಡೆ ಇದ್ದರು.
Vijaya Karnataka Web EfF7J1dXoAAY8Wc


ಈ ಘಟನೆ ಸೋಮವಾರ ಶ್ವೇತಭವನದ ಸುದ್ದಿ ಕೊಠಡಿಯಲ್ಲಿ ನಡೆದಿದ್ದು ಬಳಿಕ ಅಧ್ಯಕ್ಷ ಟ್ರಂಪ್‌ ಅವರೇ ಯಾಕೆ ತನ್ನನ್ನ ಕರೆದುಕೊಂಡು ಹೋದರು ಎಂದು ಮಾಹಿತಿ ಮಾಧ್ಯಮಗಳಿಗೆ ನೀಡಿದ್ದಾರೆ. ಶ್ವೇತಭವನದ ಹೊರಗಡೆ ಶೂಟೌಟ್‌ ನಡೆಯುತ್ತಿದೆ. ಹೀಗಾಗಿ ನನ್ನನ್ನ ಕರೆದುಕೊಂಡು ಹೋಗಲಾಯಿತು ಎಂದು ತಿಳಿಸಿದ ಟ್ರಂಪ್‌, ಘಟನೆಯಲ್ಲಿ ಶಸ್ತ್ರಾಸ್ತ್ರ ಹೊಂದಿದ ವ್ಯಕ್ತಿ ಮೇಲೆ ಭದ್ರತಾ ಪಡೆ ಗುಂಡು ಹಾರಿಸಿದೆ. ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ಶ್ವೇತಭವನದ ಮೈದಾನದ ಅಂಚಿನಲ್ಲಿರುವ ಗಡಿಯ ಬಳಿ ಶೂಟಿಂಗ್‌ ನಡೆದಿದ್ದು, ನಮ್ಮ ಭದ್ರತಾ ಪಡೆಯ ಯಾರಿಗೂ ಯಾವುದೇ ಗಾಯಾಗಳಾಗಿಲ್ಲ ಎಂದು ತಿಳಿಸಿದ ಟ್ರಂಪ್‌, ಸಿಕ್ರೇಟ್‌ ಸರ್ವೀಸ್‌ ಎಚ್ಚೆತ್ತುಕೊಂಡು ನಡೆಸಿದ ಕಾರ್ಯಾಚರಣೆಯ ಬಗ್ಗೆ ಶ್ಲಾಘಿಸಿದ್ದಾರೆ.

ಸುದ್ದಿಗೋಷ್ಠಿಗೆ ಬಂದ ಅಧ್ಯಕ್ಷ ಟ್ರಂಪ್‌ ಅವರನ್ನ ಏಕಾಏಕಿ ಭದ್ರತಾ ಪಡೆ ಅಲ್ಲಿಂದ ಕರೆದುಕೊಂಡು ಬೇರೆ ಕಡೆ ಹೋಯಿತು. ಸ್ವಲ್ಪ ನಿಮಿಷಗಳ ಕಾಲ ಅವರು ಬಂದೆ ಇರಲಿಲ್ಲ. ಯಾವುದೇ ಮಾಹಿತಿ ನೀಡದೆ ಸುದ್ದಿಗೋಷ್ಠಿ ನಡೆಯುವ ಸ್ಥಳದಿಂದ ಟ್ರಂಪ್‌ ಅವರನ್ನ ಕರೆದುಕೊಂಡು ಹೋದ ಹಿನ್ನೆಲೆ ಎಲ್ಲರೂ ಆತಂಕಕ್ಕೆ ಒಳಗಾದರು. ಟ್ರಂಪ್‌ ಮಾತ್ರವಲ್ಲದೇ ಸುದ್ದಿಗೋಷ್ಠಿಗೆ ಬಂದಿದ್ದ ಬೇರೆ ಸಚಿವರು, ಅಧಿಕಾರಿಗಳನ್ನು ಕರೆದುಕೊಂಡು ಹೋಗಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ