ಆ್ಯಪ್ನಗರ

ಚೀನಾ ರಾಯಭಾರಿ ಕಚೇರಿ ಕಾಪಾಡಿದ್ದು ಮಹಿಳಾ ಪೊಲೀಸ್‌!

ಶಿಕ್ಷಣ ಪಡೆಯುವುದೇ ನಮ್ಮ ಕುಟುಂಬದಲ್ಲಿ ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಊರಿನಿಂದಲೇ ಹೊರ ಹೋಗಬೇಕಾಗಿತ್ತು ಎಂದು ಚೀನಾ ರಾಯಭಾರಿ ಕಚೇರಿಯ ದಾಳಿಯಲ್ಲಿ ಅಧಿಕಾರಿಗಳನ್ನು ಕಾಪಾಡಿದ ಮಹಿಳಾ ಪೊಲೀಸ್‌ ಹೇಳಿದ್ದಾರೆ

TIMESOFINDIA.COM 23 Nov 2018, 6:58 pm
[This story originally published in Times of India nov 23, 2018]
Vijaya Karnataka Web woan police


ಕರಾಚಿ: ಕುಟುಂಬದವರು ಪೊಲೀಸ್‌ ಇಲಾಖೆಗೆ ಸೇರಲು ಬಿಟ್ಟಿಲ್ಲ ಎಂದು ಮನೆಯಲ್ಲಿ ಕುಳಿತಿದ್ದರೆ, ದೇಶ ಹೆಮ್ಮೆ ಪಡುವ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಚೀನಾದ ರಾಯಭಾರಿ ಕಚೇರಿಯೊಳಕ್ಕೆ ನುಗ್ಗಲು ಬಿಡದೆ ಪ್ರತಿರೋಧ ಒಡ್ಡಿ ದಾಳಿ ನಡೆಸಿದ್ದು ಮಹಿಳಾ ಮಣಿ.

ಧೈರ್ಯಶಾಲಿಯಾದ ಹಿರಿಯ ಪೊಲೀಸ್‌ ಎಸ್‌ಪಿ ಸುಹಾಯ್‌ ಅಜೀಜ್‌ ತಲ್ಪುರ್‌ ಕಚೇರಿಯಲ್ಲಿದ್ದ ಅಧಿಕಾರಿಗಳ ಜೀವ ಉಳಿಸಿದ್ದಾಳೆ. ಗ್ರೆನೇಡ್‌ ಹಿಡಿದು ಕಚೇರಿಯೊಳಕ್ಕೆ ನುಗ್ಗಲು ಮುಂದಾದ ಉಗ್ರರನ್ನು ಹೊಡೆದುರುಳಿಸುವಲ್ಲಿ ಅಜೀಜ್‌ ಪ್ರಮುಖ ಪಾತ್ರ ವಹಿಸಿದ್ದಾಳೆ.

ಪೊಲೀಸ್‌ ಇಲಾಖೆಗೆ ಬಡ್ತಿ ಹೊಂದುವ ಮೊದಲು, ಕುಟುಂಬ ವರ್ಗದಿಂದ ಈ ಕೆಲಸಕ್ಕೆ ಸೇರಲು ತೀವ್ರ ವಿರೋಧ ವ್ಯಕ್ತವಾಗಿತ್ತು. ಅವರ ಮಾತು ಕೇಳಿ ಮನೆಯಲ್ಲೇ ಇರುತ್ತಿದ್ದರೆ ಇಂದು ಇಂತಹ ಸಾಹಸದ ಮೂಲಕ ದೇಶ ಮೆಚ್ಚುವ ಕೆಲಸ ಮಾಡಲಾಗುತ್ತಿರಲಿಲ್ಲ ಎಂಬ ಮಾತುಗಳು ಇದೀಗ ಕುಟುಂಬ ವರ್ಗದಿಂದಲೂ ಕೇಳಿ ಬಂದಿದೆ.

ಉಗ್ರರೊಂದಿಗೆ ಕೆಲ ಔಷಧಿಗಳು, ಆಹಾರಗಳು ಸಿಕ್ಕಿವೆ. ಮೂಲಗಳ ಪ್ರಕಾರ ರಾಯಭಾರಿ ಕಚೇರಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದರು ಎನ್ನಲಾಗಿದೆ. ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು.

ಕರಾಚಿಯ ಚೀನಾ ರಾಯಭಾರಿ ಕಚೇರಿ ಮೇಲೆ ಉಗ್ರ ದಾಳಿ

ಸಿಂಧ್‌ ಪ್ರಾಂತ್ಯದ ಭಾಯ್‌ ಖಾನ್‌ ತಲ್ಪೂರ್‌ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಬೆಳೆದ ಸುಹಾಯ್‌, ಸೆಂಟ್ರಲ್‌ ಸುಪೀರಿಯರ್‌ ಸರ್ವೀಸ್‌ ಪರೀಕ್ಷೆಯನ್ನು 2013ರಲ್ಲಿ ತೇರ್ಗಡೆಯಾಗಿದ್ದರು ಎಂದು ಪಾಕ್‌ನ ಎಕ್ಸ್‌ಪ್ರೆಸ್‌ ತ್ರಿಬ್ಯುನ್‌ ಪತ್ರಿಕೆ ವರದಿ ಮಾಡಿದೆ.

ಪೋಷಕರು ನನ್ನನ್ನು ಶಾಲೆಗೆ ಸೇರಿಸುವ ವೇಳೆ ಕುಟುಂಬದ ಸದಸ್ಯರು ಲೇವಡಿ ಮಾಡುತ್ತಿದ್ದರು. ಇದರಿಂದಾಗಿಯೇ ನಾವು ಆ ಗ್ರಾಮವನ್ನು ಬಿಟ್ಟು ಹತ್ತಿರದ ಪಟ್ಟಣ ಸೇರಬೇಕಾಯಿತು ಎಂದು ಅವರು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ತಂದೆ ರಾಜಕೀಯ ಮುಖಂಡರಾಗಿದ್ದು, ಮಗಳ ಮೇಲೆ ಅತೀವ ಆಕಾಂಕ್ಷೆ ಇಟ್ಟುಕೊಂಡಿದ್ದರು.

ಕುಟುಂಬದಲ್ಲಿ ನನಗೆ ಸಿ.ಎ. ಕಲಿಸಬೇಕೆಂದಿದ್ದರು. ಆದರೆ ನಾನು ಸಿಎಸ್‌ಎಸ್‌ ಪರೀಕ್ಷೆ ಬರೆದು ತೇರ್ಗಡೆಯಾದೆ. ತನ್ನ ಶಿಕ್ಷಣಕ್ಕಾಗಿ ಸಾಕಷ್ಟು ಕಷ್ಟ ಪಟ್ಟ ಪೋಷಕರಿಗೆ ಈ ಸಾಧನೆಯನ್ನು ಅರ್ಪಿಸಿರುವುದಾಗಿ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ