ಲಂಡನ್: ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ನಿಂದ ಭಾರತಕ್ಕೆ ಗಡಿಪಾರು ಮಾಡಬೇಕು ಎಂಬ ಭಾರತದ ಮನವಿಗೆ ಜಯ ದಕ್ಕಿದೆ.
ಭಾರತದ ಬ್ಯಾಂಕ್ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಪರಾರಿಯಾಗಿದ್ದ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಹಸ್ತಾಂತರ ಮಾಡಬೇಕೆಂದು ಭಾರತ ಲಂಡನ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.
ಅಗಸ್ಟಾ ವೆಸ್ಟ್ಲ್ಯಾಂಡ್ ಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಗಡಿಪಾರಿನ ಯಶಸ್ಸಿನ ನಂತರ ಭಾರತಕ್ಕೆ ಈಗ ಮತ್ತೊಂದು ರಾಜತಾಂತ್ರಿಕ ಗೆಲುವು ದಕ್ಕಿದಂತಾಗಿದೆ.
ಇಲ್ಲಿನ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಪ್ರೇಟ್ಸ್ ಕೋರ್ಟ್ನಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳು ಮಲ್ಯ ಗಡಿಪಾರಿಗೆ ಅನುಮತಿ ನೀಡಿದ್ದಾರೆ.
ಸೋಮವಾರ ಭಾರತೀಯ ಕಾಲಮಾನ 5.44ರ ಸಮಯದಲ್ಲಿ ಲಂಡನ್ ಕೋರ್ಟ್ ತೀರ್ಪು ಪ್ರಕಟಿಸಿತು.
ತೀರ್ಪು ಪ್ರಶ್ನಿಸಿ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ.
ಲಂಡನ್ ಕೋರ್ಟ್ನ ತೀರ್ಪನ್ನು ಸಿಬಿಐ ಸ್ವಾಗತಿಸಿದೆ. ಹಲವಾರು ವರ್ಗದಿಂದ ಈ ತೀರ್ಪಿಗೆ ಸ್ವಾಗತ ವ್ಯಕ್ತವಾಗುತ್ತಿದ್ದರೆ, ಕಾಂಗ್ರೆಸ್ ಇದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದೆ.
ತೀರ್ಪು ಬಂದ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದೇನೂ ಅಷ್ಟು ದೊಡ್ಡ ಗೆಲುವಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ತೀರ್ಪು ಪ್ರಕಟಣೆ ನಂತರ ನ್ಯಾಯಾಲಯದ ಆವರಣದಲ್ಲಿ ಮಾತನಾಡಿದ ವಿಜಯ್ ಮಲ್ಯ, ನನ್ನ ಪರ ವಕೀಲರು ಇದ್ದಾರೆ. ತೀರ್ಪು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಈ ತೀರ್ಪು ಬಂದಿದ್ದು ನಿಜಕ್ಕೂ ಆಘಾತವಾಗಿದೆ, ಅಸಮಾಧಾನ ತಂದಿದೆ. ನಾನು ಮೇಲ್ಮನವಿ ಸಲ್ಲಿಸಬಹುದು ಎಂದು ಜಡ್ಜ್ ಮಾಹಿತಿ ನೀಡಿದ್ದಾರೆ. ಮೇಲ್ಮನವಿ ಸಲ್ಲಿಸುವ ಬಗ್ಗೆ ನನ್ನ ವಕೀಲರ ತಂಡ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮಲ್ಯ ಅವರು ಕಳೆದ ವರ್ಷ ಏಪ್ರಿಲ್ನಲ್ಲಿ ಗಡಿಪಾರು ಕೇಸ್ಗೆ ಸಂಬಂಧಿಸಿ ಬಂಧನಕ್ಕೀಡಾಗಿದ್ದರು. ಆದರೆ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದರು..
ಲಂಡನ್ ಕೋರ್ಟ್ನಲ್ಲಿ ಸೊಮವಾರ ಭಾರತಕ್ಕೆ ಗಡಿಪಾರು ಮಾಡುವಂತೆ ತೀರ್ಪು ಪ್ರಕಟವಾಗಿದ್ದು. ನಂತರ ಮಲ್ಯ ಬಂಧನಕ್ಕೀಡಾಗಲಿದ್ದಾರೆ. ಮುಂಬಯಿನ ಅರ್ಥರ್ ರಸ್ತೆಯ ಜೈಲಿನ 12ನೇ ಬರಾಕ್ನಲ್ಲಿ ಮಲ್ಯ ಸೆರೆವಾಸದಲ್ಲಿರಬೇಕಾಗುತ್ತದೆ.
ಭಾರತದ ಬ್ಯಾಂಕ್ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಪರಾರಿಯಾಗಿದ್ದ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಹಸ್ತಾಂತರ ಮಾಡಬೇಕೆಂದು ಭಾರತ ಲಂಡನ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.
ಅಗಸ್ಟಾ ವೆಸ್ಟ್ಲ್ಯಾಂಡ್ ಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಗಡಿಪಾರಿನ ಯಶಸ್ಸಿನ ನಂತರ ಭಾರತಕ್ಕೆ ಈಗ ಮತ್ತೊಂದು ರಾಜತಾಂತ್ರಿಕ ಗೆಲುವು ದಕ್ಕಿದಂತಾಗಿದೆ.
ಇಲ್ಲಿನ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಪ್ರೇಟ್ಸ್ ಕೋರ್ಟ್ನಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳು ಮಲ್ಯ ಗಡಿಪಾರಿಗೆ ಅನುಮತಿ ನೀಡಿದ್ದಾರೆ.
ಸೋಮವಾರ ಭಾರತೀಯ ಕಾಲಮಾನ 5.44ರ ಸಮಯದಲ್ಲಿ ಲಂಡನ್ ಕೋರ್ಟ್ ತೀರ್ಪು ಪ್ರಕಟಿಸಿತು.
ತೀರ್ಪು ಪ್ರಶ್ನಿಸಿ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ.
ಲಂಡನ್ ಕೋರ್ಟ್ನ ತೀರ್ಪನ್ನು ಸಿಬಿಐ ಸ್ವಾಗತಿಸಿದೆ. ಹಲವಾರು ವರ್ಗದಿಂದ ಈ ತೀರ್ಪಿಗೆ ಸ್ವಾಗತ ವ್ಯಕ್ತವಾಗುತ್ತಿದ್ದರೆ, ಕಾಂಗ್ರೆಸ್ ಇದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದೆ.
ತೀರ್ಪು ಬಂದ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದೇನೂ ಅಷ್ಟು ದೊಡ್ಡ ಗೆಲುವಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ತೀರ್ಪು ಪ್ರಕಟಣೆ ನಂತರ ನ್ಯಾಯಾಲಯದ ಆವರಣದಲ್ಲಿ ಮಾತನಾಡಿದ ವಿಜಯ್ ಮಲ್ಯ, ನನ್ನ ಪರ ವಕೀಲರು ಇದ್ದಾರೆ. ತೀರ್ಪು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಈ ತೀರ್ಪು ಬಂದಿದ್ದು ನಿಜಕ್ಕೂ ಆಘಾತವಾಗಿದೆ, ಅಸಮಾಧಾನ ತಂದಿದೆ. ನಾನು ಮೇಲ್ಮನವಿ ಸಲ್ಲಿಸಬಹುದು ಎಂದು ಜಡ್ಜ್ ಮಾಹಿತಿ ನೀಡಿದ್ದಾರೆ. ಮೇಲ್ಮನವಿ ಸಲ್ಲಿಸುವ ಬಗ್ಗೆ ನನ್ನ ವಕೀಲರ ತಂಡ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮಲ್ಯ ಅವರು ಕಳೆದ ವರ್ಷ ಏಪ್ರಿಲ್ನಲ್ಲಿ ಗಡಿಪಾರು ಕೇಸ್ಗೆ ಸಂಬಂಧಿಸಿ ಬಂಧನಕ್ಕೀಡಾಗಿದ್ದರು. ಆದರೆ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದರು..
ಲಂಡನ್ ಕೋರ್ಟ್ನಲ್ಲಿ ಸೊಮವಾರ ಭಾರತಕ್ಕೆ ಗಡಿಪಾರು ಮಾಡುವಂತೆ ತೀರ್ಪು ಪ್ರಕಟವಾಗಿದ್ದು. ನಂತರ ಮಲ್ಯ ಬಂಧನಕ್ಕೀಡಾಗಲಿದ್ದಾರೆ. ಮುಂಬಯಿನ ಅರ್ಥರ್ ರಸ್ತೆಯ ಜೈಲಿನ 12ನೇ ಬರಾಕ್ನಲ್ಲಿ ಮಲ್ಯ ಸೆರೆವಾಸದಲ್ಲಿರಬೇಕಾಗುತ್ತದೆ.