ಆ್ಯಪ್ನಗರ

ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ಬ್ರಿಟನ್‌ನಲ್ಲಿ ಸಮುದಾಯಗಳ ಧ್ರುವೀಕರಣ !

''ಕಾಶ್ಮೀರ ವಿಚಾರ ಭಾರತ-ಪಾಕಿಸ್ತಾನ ನಡುವಿನ ಆಂತರಿಕ ವಿಷಯ ಆ ವಿಚಾರವನ್ನು ಬ್ರಿಟನ್‌ನಲ್ಲಿ ಸಮುದಾಯಗಳ ಧ್ರುವೀಕರಣಕ್ಕಾಗಿ ಬಳಸಿಕೊಳ್ಳಬಾರದು ಎಂದು ಪ್ರತಿಪಕ್ಷ ಲೇಬರ್‌ ಪಕ್ಷದ ಮುಖ್ಯಸ್ಥ ಇಯಾನ್‌ ಲೇವರಿ ಆಗ್ರಹಿಸಿದ್ದಾರೆ.

Vijaya Karnataka Web 13 Nov 2019, 7:31 am
ಲಂಡನ್‌: ''ಕಾಶ್ಮೀರ ವಿಚಾರ ಭಾರತ-ಪಾಕಿಸ್ತಾನ ನಡುವಿನ ಆಂತರಿಕ ವಿಷಯ. ಅದನ್ನು ದ್ವಿಪಕ್ಷೀಯವಾಗಿ ಶಾಂತ ರೀತಿಯಿಂದ ಬಗೆಹರಿಸಿಕೊಳ್ಳಲಾಗುತ್ತದೆ. ಆ ವಿಚಾರವನ್ನು ಬ್ರಿಟನ್‌ನಲ್ಲಿ ಸಮುದಾಯಗಳ ಧ್ರುವೀಕರಣಕ್ಕಾಗಿ ಬಳಸಿಕೊಳ್ಳಬಾರದು. ವಿಶೇಷವಾಗಿ ಡಿ.12ರಂದು ಸಾರ್ವತ್ರಿಕ ಚುನಾವಣೆ ಎದುರಾಗುತ್ತಿರುವ ಸಂದರ್ಭದಲ್ಲಿಇಂಥ ಯತ್ನ ಒಳ್ಳೆಯದಲ್ಲ,'' ಎಂದು ಪ್ರತಿಪಕ್ಷ ಲೇಬರ್‌ ಪಕ್ಷದ ಮುಖ್ಯಸ್ಥ ಇಯಾನ್‌ ಲೇವರಿ ಆಗ್ರಹಿಸಿದ್ದಾರೆ.
Vijaya Karnataka Web uks labour takes a u turn on kashmir stand after backlash labour ideologue leader jeremy corbyn
ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ಬ್ರಿಟನ್‌ನಲ್ಲಿ ಸಮುದಾಯಗಳ ಧ್ರುವೀಕರಣ !


ಕಾಶ್ಮೀರದ ನೈಜಸ್ಥಿತಿ 'ಕಣ್ಣಾರೆ' ನೋಡಲು ಐರೋಪ್ಯ ಒಕ್ಕೂಟ ಆಗಮನ: ಶ್ರೀನಗರದಲ್ಲಿ ಸುತ್ತಾಟ

ಈ ಕುರಿತು ಪಕ್ಷದ ಸಂಸದರಿಗೆ ಮತ್ತು ನಾಯಕರಿಗೆ ಪತ್ರ ಬರೆದಿರುವ ಅವರು, ವಿದೇಶಗಳ ರಾಜಕೀಯ ವ್ಯವಹಾರಗಳಲ್ಲಿ ಮೂಗು ತೂರಿಸುವುದನ್ನು ಮುಂಚಿನಿಂದಲೂ ಲೇಬರ್‌ ಪಕ್ಷ ವಿರೋಧಿಸಿಕೊಂಡು ಬಂದಿದೆ. ವಿಶ್ವಾದ್ಯಂತ ಮಾನವ ಹಕ್ಕುಗಳಿಗೆ ಗೌರವ ಸಿಗಬೇಕು ಎನ್ನುವುದು ಮಾತ್ರ ನಮ್ಮ ನಿಲುವು. ಆದರೆ ಕಾಶ್ಮೀರ ವಿಚಾರ ತೀರ ಸೂಕ್ಷ್ಮವಾದದ್ದು. ನಾವು ಭಾರತ ವಿರೋಧಿ ಅಥವಾ ಪಾಕಿಸ್ತಾನ ವಿರೋಧಿ ನಿಲುವುಗಳನ್ನು ತಾಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸಿಗರೇ ಕಾಶ್ಮೀರಕ್ಕೆ ಹೋಗುವುದಾದರೆ ಕಳುಹಿಸಲು ನಾವು ರೆಡಿ, ನೀವು ರೆಡಿನಾ?!

ಸಾಮಾಜಿಕ ಜಾಲತಾಣಗಳಲ್ಲಿ ಹಲವು ಆಕ್ಷೇಪಾರ್ಹ ಸಂದೇಶಗಳು ಚರ್ಚೆಯಲ್ಲಿದ್ದು, ಅದರಲ್ಲಿ ಲೇಬರ್‌ ಪಕ್ಷದ ವಿರುದ್ಧ ಜಾಲತಾಣಿಗರು ಕಿಡಿಕಾರುತ್ತಿದ್ದಾರೆ. ಪಾಕ್‌ ಪ್ರಾಯೋಜಿತ ಪ್ರತಿಭಟನೆಗಳು ಲಂಡನ್‌ನಲ್ಲಿ ಜರುಗುತ್ತಿದ್ದರೂ, ಲೇಬರ್‌ ಪಕ್ಷ ಭಾರತ ವಿರೋಧಿ ಧೋರಣೆ ತಾಳಿದು ಎಂದು ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲೇವರಿ ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ