ಇಸ್ಲಾಮಾಬಾದ್: 'ಯಾವುದೇ ಸಾಕ್ಷಿಗಳಿಲ್ಲದೇ ಪಾಕಿಸ್ತಾನವನ್ನು ಭಾರತ ದೂಷಿಸುತ್ತಿದೆ,' ಎಂದು ಆರೋಪಿಸಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್, 'ಕಾಶ್ಮೀರದಲ್ಲಿರುವ ಪರಿಸ್ಥಿತಿಗೆ ಉರಿ ದಾಳಿ ಪ್ರತಿಕ್ರಿಯೆ ಇರಬಹುದು,' ಎಂದಿದ್ದಾರೆ.
'ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯಕ್ಕೆ ಉರಿ ದಾಳಿ ಮೂಲಕ ಪ್ರತಿಕಾರ ತೆಗೆದುಕೊಳ್ಳಲಾಗಿದೆ. ಕಳೆದೆರಡು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಧಂಗೆಯಿಂದ ಸಮೀಪದವರನ್ನು ಕಳೆದುಕೊಂಡು, ನೊಂದಿರುವ ಕಾಶ್ಮೀರಿಗಳು, ಉರಿ ದಾಳಿ ಮೂಲಕ ಹಗೆ ತೀರಿಸಿಕೊಂಡಿದ್ದಾರೆ,' ಎಂದು ನ್ಯೂಯಾರ್ಕ್ನಲ್ಲಿ ನಡೆದಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ನಂತರ ಲಂಡನ್ನಲ್ಲಿ ಉಳಿದುಕೊಂಡಿರುವ ನವಾಜ್, ಸುದ್ದಿಗಾರರೊಂದಿಗೆ ಮಾತನಾಡಿದರು.
'ಯಾವುದೇ ತನಿಖೆ ಅಥವಾ ವಿಚಾರಣೆ ನಡೆಸದೇ ಉರಿ ದಾಳಿಗೆ ಪಾಕಿಸ್ತಾನವೇ ಹೊಣೆ ಎಂದು ಭಾರತ ಹೇಗೆ ಹೇಳಲು ಸಾಧ್ಯ?' ಎಂದ ನವಾಜ್, 'ಕಾಶ್ಮೀರದಲ್ಲಿ ನಡೆಸುತ್ತಿರುವ ಭಾರತದ ದೌರ್ಜನ್ಯದ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತು. ಇದುವರೆಗೂ ಕಳೆದೆರಡು ತಿಂಗಳಲ್ಲಿ 108 ಮಂದಿಯನ್ನು ಕೊಲ್ಲಲಾಗಿದೆ. 150ಕ್ಕೂ ಹೆಚ್ಚು ಮಂದಿ ಕಣ್ಣು ಕಳೆದುಕೊಂಡಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ,' ಎಂದು ಆರೋಪಿಸಿದರು.
'ಸುಖಾಸುಮ್ಮನೆ ಪಾಕಿಸ್ತಾನವನ್ನು ದೂಷಿಸುವ ಬದಲು ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಭಾರತ ಗಮನಿಸಬೇಕು. ಕಾಶ್ಮೀರದಲ್ಲಿ ನಡೆಯುತ್ತಿರುವ ಕೊಲೆಗಳ ಬಗ್ಗೆ ಭಾರತ ತನಿಖೆ ನಡೆಸಲಿ,' ಎಂದರು.
'ಜಮ್ಮು ಕಾಶ್ಮೀರ ಸಮಸ್ಯೆ ಬಗೆಹರಿಸುವವರೆಗೂ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ,' ಎಂದು ನವಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೈಷೆ ಮೊಹ್ಮದ್ ಉಗ್ರರು ಉರಿ ಸೇನಾ ನೆಲೆ ಮೇಲೆ ನಡೆಸಿರುವ ದಾಳಿಯಲ್ಲಿ 18 ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗೆ ಮತ್ತಷ್ಟು ಹಿನ್ನಡೆಯಾಗಿದೆ.
Pakistan Prime Minister Nawaz Sharif has claimed that the Uri terror attack could be the result of a 'reaction' of the people to the situation in Kashmir as he criticized India for blaming Pakistan 'without any evidence'.
'ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯಕ್ಕೆ ಉರಿ ದಾಳಿ ಮೂಲಕ ಪ್ರತಿಕಾರ ತೆಗೆದುಕೊಳ್ಳಲಾಗಿದೆ. ಕಳೆದೆರಡು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಧಂಗೆಯಿಂದ ಸಮೀಪದವರನ್ನು ಕಳೆದುಕೊಂಡು, ನೊಂದಿರುವ ಕಾಶ್ಮೀರಿಗಳು, ಉರಿ ದಾಳಿ ಮೂಲಕ ಹಗೆ ತೀರಿಸಿಕೊಂಡಿದ್ದಾರೆ,' ಎಂದು ನ್ಯೂಯಾರ್ಕ್ನಲ್ಲಿ ನಡೆದಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ನಂತರ ಲಂಡನ್ನಲ್ಲಿ ಉಳಿದುಕೊಂಡಿರುವ ನವಾಜ್, ಸುದ್ದಿಗಾರರೊಂದಿಗೆ ಮಾತನಾಡಿದರು.
'ಯಾವುದೇ ತನಿಖೆ ಅಥವಾ ವಿಚಾರಣೆ ನಡೆಸದೇ ಉರಿ ದಾಳಿಗೆ ಪಾಕಿಸ್ತಾನವೇ ಹೊಣೆ ಎಂದು ಭಾರತ ಹೇಗೆ ಹೇಳಲು ಸಾಧ್ಯ?' ಎಂದ ನವಾಜ್, 'ಕಾಶ್ಮೀರದಲ್ಲಿ ನಡೆಸುತ್ತಿರುವ ಭಾರತದ ದೌರ್ಜನ್ಯದ ಬಗ್ಗೆ ಇಡೀ ವಿಶ್ವಕ್ಕೇ ಗೊತ್ತು. ಇದುವರೆಗೂ ಕಳೆದೆರಡು ತಿಂಗಳಲ್ಲಿ 108 ಮಂದಿಯನ್ನು ಕೊಲ್ಲಲಾಗಿದೆ. 150ಕ್ಕೂ ಹೆಚ್ಚು ಮಂದಿ ಕಣ್ಣು ಕಳೆದುಕೊಂಡಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ,' ಎಂದು ಆರೋಪಿಸಿದರು.
'ಸುಖಾಸುಮ್ಮನೆ ಪಾಕಿಸ್ತಾನವನ್ನು ದೂಷಿಸುವ ಬದಲು ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಭಾರತ ಗಮನಿಸಬೇಕು. ಕಾಶ್ಮೀರದಲ್ಲಿ ನಡೆಯುತ್ತಿರುವ ಕೊಲೆಗಳ ಬಗ್ಗೆ ಭಾರತ ತನಿಖೆ ನಡೆಸಲಿ,' ಎಂದರು.
'ಜಮ್ಮು ಕಾಶ್ಮೀರ ಸಮಸ್ಯೆ ಬಗೆಹರಿಸುವವರೆಗೂ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ,' ಎಂದು ನವಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೈಷೆ ಮೊಹ್ಮದ್ ಉಗ್ರರು ಉರಿ ಸೇನಾ ನೆಲೆ ಮೇಲೆ ನಡೆಸಿರುವ ದಾಳಿಯಲ್ಲಿ 18 ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗೆ ಮತ್ತಷ್ಟು ಹಿನ್ನಡೆಯಾಗಿದೆ.
Pakistan Prime Minister Nawaz Sharif has claimed that the Uri terror attack could be the result of a 'reaction' of the people to the situation in Kashmir as he criticized India for blaming Pakistan 'without any evidence'.