ಆ್ಯಪ್ನಗರ

2 ವಾರದಲ್ಲಿ ಪಾಕ್‌ ಬಗ್ಗು ಬಡಿದು ಬಾಂಗ್ಲಾದೇಶದ ಉದಯಕ್ಕೆ ಕಾರಣವಾಗಿದ್ದ ಭಾರತ

ನಾವು ರೋಹಿಂಗ್ಯಾ ನಿರಾಶ್ರಿತರಿಗೆ ಆಹಾರ, ವಸತಿ ನೀಡುವ ಮೂಲಕ ಸಹಾಯ ಮಾಡಿದ್ದೇವೆ. ಆದರೆ ನಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದು ಭಾರತ ಎಂದು ಕೋಲ್ಕತಾದಲ್ಲಿ ನಡೆದ ವಿಜಯ ದಿವಸ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಬಾಂಗ್ಲಾ ನಿಯೋಗಿ ಕ್ವಾಜಿ ರೋಸಿ ಶ್ಲಾಘಿಸಿದ್ದಾರೆ.

TOI.in 16 Dec 2018, 11:40 am
ಬೆಂಗಳೂರು: ಬೆಂಗಾಲಿ ಭಾಷಿಗರೇ ಹೆಚ್ಚಿರುವ ಪೂರ್ವ ಪಾಕಿಸ್ತಾನವು ಪಾಕಿಸ್ತಾನ ಸೇನೆಯ ಪೈಶಾಚಿಕ ಕೃತ್ಯಗಳಿಂದ ಸಿಡಿದೆದ್ದು ಸ್ವಾತಂತ್ರ್ಯ ಹೋರಾಟವನ್ನು ಮಾರ್ಚ್‌ 1971ರಲ್ಲಿ ಆರಂಭಿಸಿತು.
Vijaya Karnataka Web Vijay Diwas


ಪೂರ್ವ ಪಾಕಿಸ್ತಾನದ ನೆರವಿಗೆ ಧಾವಿಸಿದ ಭಾರತವು ಪಾಕಿಸ್ತಾನದ ವಿರುದ್ಧ ಡಿಸೆಂಬರ್‌ 3, 1971ರಂದು ಯುದ್ಧ ಆರಂಭಿಸಿತು. ಎರಡೇ ವಾರದಲ್ಲಿ ಪಾಕಿಸ್ತಾನ ಸೇನೆಯನ್ನು ಬಗ್ಗು ಬಡಿದು ಹೊಸ ರಾಷ್ಟ್ರ ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು. ಡಿಸೆಂಬರ್‌ 16ರಂದು ಪೂರ್ವ ಪಾಕಿಸ್ತಾನದ ಸೇನೆಯ ಮುಖ್ಯಸ್ಥನಾಗಿದ್ದ ಪಾಕಿಸ್ತಾನದ ಲೆಫ್ಟಿನೆಂಟ್‌ ಜನರಲ್‌ ಆಕ್‌ ನಿಯಾಜಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿದ್ದ.

ಭಾರತೀಯ ಸೇನೆಯ ಸಹಾಯದಿಂದ ಕೇವಲ 9 ತಿಂಗಳಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯಗೊಂಡಿತು. ಪಾಕಿಸ್ತಾನ ಸೇನೆಯು ನಡೆಸುತ್ತಿದ್ದ ಪೈಶಾಚಿಕ ಕೃತ್ಯಗಳು ಬಾಂಗ್ಲಾದೇಶದ ಉದಯದೊಂದಿಗೆ ತಾರ್ಕಿಕ ಅಂತ್ಯ ಕಂಡಿತು.

ಭಾರತದ ಸಹಾಯವಿಲ್ಲದಿದ್ದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ: ಬಾಂಗ್ಲಾದೇಶ

ಬಾಂಗ್ಲಾದೇಶಕ್ಕೆ ಬಂದ ರೋಹಿಂಗ್ಯಾ ನಿರಾಶ್ರಿತರಿಗೆ ಆಹಾರ, ವಸತಿ ನೀಡಿದ್ದೇವೆ. ಆದರೆ ಭಾರತ ನಮಗೆ ನಾವು ಕಷ್ಟದಲ್ಲಿದ್ದಂತಹ ಸಂದರ್ಭದಲ್ಲಿ ಸಹಾಯ ಮಾಡಿದ್ದಾರೆ ಎಂದು ಬಾಂಗ್ಲಾ ನಿಯೋಗದ ಮುಖ್ಯಸ್ಥೆ ಕ್ವಾಜಿ ರೋಸಿ ಸ್ಮರಿಸಿದ್ದರೆ.

ಕೋಲ್ಕತಾದಲ್ಲಿ ನಡೆದ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಸಿ ಭಾರತದ ಸಹಾಯವನ್ನು ಕೊಂಡಾಡಿದರು.

ಕೋಲ್ಕತಾ ವ್ಯಾಪಾರಿಗಳು ನಮ್ಮ ಸೇನೆಗೆ ಉಚಿತ ಆಹಾರ, ಔಷಧಿ ಒದಗಿಸಿದ್ದರು: ಬಾಂಗ್ಲಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ