ಆ್ಯಪ್ನಗರ

ಜನಾಂಗೀಯ ಹಲ್ಲೆ: ಪ್ರಧಾನಿಗೆ ಪತ್ರ ಬರೆದ ಕಾನ್ಸಾಸ್‌ ಗವರ್ನರ್‌

ಕಾನ್ಸಾಸ್‌ನಲ್ಲಿ ಭಾರತೀಯ ಟೆಕ್ಕಿ ಮೇಲೆ ನಡೆದ ಜನಾಂಗೀಯ ದಾಳಿಯ ಕುರಿತು ಖೇದ ವ್ಯಕ್ತ ಪಡಿಸಿ ಅಲ್ಲಿನ ಗವರ್ನರ್‌, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 8 Mar 2017, 10:27 pm
ವಾಷಿಂಗ್ಟನ್‌: ಕಾನ್ಸಾಸ್‌ನಲ್ಲಿ ಭಾರತೀಯ ಟೆಕ್ಕಿ ಮೇಲೆ ನಡೆದ ಜನಾಂಗೀಯ ದಾಳಿಯ ಕುರಿತು ಖೇದ ವ್ಯಕ್ತಪಡಿಸಿ ಅಲ್ಲಿನ ಗವರ್ನರ್‌, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Vijaya Karnataka Web we profoundly regret acts of violence against indians kansas governor writes to pm modi
ಜನಾಂಗೀಯ ಹಲ್ಲೆ: ಪ್ರಧಾನಿಗೆ ಪತ್ರ ಬರೆದ ಕಾನ್ಸಾಸ್‌ ಗವರ್ನರ್‌


ಕೆಲ ದಿನಗಳ ಹಿಂದೆ ಹೈದರಾಬಾದ್‌ ಮೂಲದ ಶ್ರಿನಿವಾಸ್‌ ಕುಚಿಬೋಟ್ಲಾ ಎಂಬವರ ಮೇಲೆ ಅಮೆರಿಕದ ಮಾಜಿ ಯೊಧ ಗಂಡು ಹಾರಿಸಿದ್ದ. ಇದಕ್ಕೂ ಮುನ್ನ ಆತ ಕುಚಿ ಬೋಟ್ಲಾಗೆ 'ನಿಮ್ಮ ದೇಶಕ್ಕೆ ಹಿಂತಿರುಗಿ' ಎಂದು ಬೆದರಿಸಿದ್ದ. ಈ ಘಟನೆಗೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗಿತ್ತು.

ಈ ಕುರಿತು ಪ್ರಧಾನಿಗೆ ಪತ್ರ ಬರೆದಿರುವ ಕನ್ಸಾಸ್‌ ರಾಜ್ಯಪಾಲ ಸಾನ್‌ ಬ್ರೌನ್‌ಬ್ಯಾಕ್, ಈ ಘಟನೆಯಿಂದ ಬಹಳಷ್ಟು ದುಃಖವಾಗಿದ್ದು, ನಮ್ಮ ನೋವನ್ನು ಹೇಳಲು ಪದಗಳೇ ಇಲ್ಲ. ಶ್ರಿನಿವಾಸ್‌ ಅವರ ಕುಟುಂಬ ವರ್ಗಕ್ಕೂ ನಾವು ಸಂತಾಪ ಸೂಚಿಸಿದ್ದೇವೆ' ಎಂದು ಬ್ರೌನ್‌ಬ್ಯಾಕ್‌ ಹೇಳಿದ್ದು, ಅಲ್ಲದೇ ಇದೇ ವೇಳೆ ಘಟನೆಯಲ್ಲಿ ಗಾಯಗೊಂಡ ಅಲೋಕ್‌ ಮದಸನಿಗೂ ಅನುಕಂಪ ವ್ಯಕ್ತ ಪಡಿಸಿದ್ದಾರೆ.

ಕಾನ್ಸಾಸ್‌ ತೆರಳುವ ಭಾರತೀಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಲ್ಲಿನ ಕಾನೂನು ಕಾಪಾಡುತ್ತದೆ ಎಂದಿರುವ ಬ್ರೌನ್‌ಬ್ಯಾಕ್‌, 'ಕಾನ್ಸಾಸ್‌ನಲ್ಲಿ ಯಾವುದೇ ಕಾರಣಕ್ಕೂ ಅಸಹಿಷ್ಣುತೆಗೆ ಜಾಗವಿಲ್ಲ. ನಾವೆಲ್ಲರೂ ಒಂದೇ ಕುಟುಂಬದವರಂತೆ ಬದುಕುತ್ತಿದ್ದು ಜನಾಂಗೀಯ ದ್ವೇಷಿಗಳಿಗೆ ಇಲ್ಲಿ ಜಾಗವಿಲ್ಲ' ಎಂದು ಪತ್ರ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ