ಆ್ಯಪ್ನಗರ

ಲಂಕಾ ಸ್ಫೋಟಕ್ಕೆ ಕಾರಣರಾದ ಶ್ರೀಮಂತ ಕುಟುಂಬದ ಸಹೋದರರು

ಅಚ್ಚರಿ ಎಂದರೆ ತನ್ನ ವಿಚಾರಣೆ ನಡೆಸಲು ಅಧಿಕಾರಿಗಳು ಮನೆಗೆ ಬಂದಾಗ ಇಲ್ಲಾಮ್‌ ತನ್ನನ್ನು ಸ್ಫೋಟಿಸಿಕೊಂಡ. ಇದರಲ್ಲಿ ಅಧಿಕಾರಿಗಳು, ಗರ್ಭಿಣಿ, ಪತ್ನಿ, ಮಕ್ಕಳು ಮೃತಪಟ್ಟಿದ್ದಾರೆ.

Vijaya Karnataka Web 25 Apr 2019, 6:31 pm
ಕೊಲಂಬೊ: ಶ್ರೀಲಂಕಾದಲ್ಲಿ ಈಸ್ಟರ್‌ ಸಂಡೇಯಂದು ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದ ಘಟನೆ ಕುರಿತು ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರ ಬೀಳುತ್ತಿದೆ.
Vijaya Karnataka Web ಲಂಕಾ ಬಾಂಬ್‌ ಸ್ಫೋಟ
ಲಂಕಾ ಬಾಂಬ್‌ ಸ್ಫೋಟ


ಈ ಘಟನೆಗೆ ಲಂಕಾದ ಅತ್ಯಂತ ಶ್ರೀಮಂತ ಕುಟುಂಬದ ಸಹೋದರರು ಕಾರಣವಾಗಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ.

ಕೊಲಂಬೊದಲ್ಲಿ ತಾಮ್ರದ ವ್ಯಾಪಾರ ಮಾಡುತ್ತಿದ್ದ ಮೊಹಮದ್‌ ಇಬ್ರಾಹಿಂ ಪುತ್ರರು ಈಗ ತಮ್ಮನ್ನು ತಾವು ಸ್ಫೋಟಿಸಿಕೊಂಡು 300ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದ್ದಾರೆ.

ಅಚ್ಚರಿ ಎಂದರೆ ತನ್ನ ವಿಚಾರಣೆ ನಡೆಸಲು ಅಧಿಕಾರಿಗಳು ಮನೆಗೆ ಬಂದಾಗ ಇಲ್ಲಾಮ್‌ ತನ್ನನ್ನು ಸ್ಫೋಟಿಸಿಕೊಂಡ. ಇದರಲ್ಲಿ ಅಧಿಕಾರಿಗಳು, ಗರ್ಭಿಣಿ, ಪತ್ನಿ, ಮಕ್ಕಳು ಮೃತಪಟ್ಟಿದ್ದಾರೆ.

ಇಲ್ಲಾಮ್‌ ಹಿರಿಯ ಸಹೋದರ ಇನ್ಷಾಫ್‌ ಇಬ್ರಾಹಿಂ (33) ಶಾಂಗ್ರಿಲಾ ಹೋಟೆಲ್‌ನಲ್ಲಿ ಬೆಳಗಿನ ತಿಂಡಿ ತಿನ್ನುತ್ತಿದ್ದ ಸ್ಥಳದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ.

ಇನ್ಷಾಫ್‌ ಇಬ್ರಾಹಿಂ ಕೆಲವು ವರ್ಷಗಳ ಹಿಂದಿನಿಂದ ಧರ್ಮಾಂಧನಾಗಿದ್ದ ಎಂದು ತಿಳಿದುಬಂದಿದೆ.

ಇಬ್ರಾಹಿಂ ಕುಟುಂಬ ಆಗರ್ಭ ಶ್ರೀಮಂತರು. ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇಬ್ರಾಹಿಂ ಮನೆಯ ಪಕ್ಕದಲ್ಲೇ ಇರುವ ಫಾತಿಮಾ ಫಾಜ್ಲಾಗೆ ಇಂಥ ದುರುಳು ಸಹೋದರರು ತಮ್ಮ ನೆರೆಯವರಾಗಿದ್ದರು ಎಂದು ನಂಬಲಿಕ್ಕೆ ಸಾಧ್ಯವಿಲ್ಲ.

ಈ ಕುಟುಂಬದ ಸದಸ್ಯರು ನಿಜಕ್ಕೂ ಸಭ್ಯರಾಗಿದ್ದರು. ಆದರೆ ಮನೆಯ ಒಳಗಡೆ ಎಂದಿಗೂ ಹೋಗಿರಲಿಲ್ಲ. ಅಲ್ಲದೇ ಮನೆಯ ಒಳಗಡೆ ಏನು ನಡೆಯುತ್ತಿತ್ತು ಎಂಬುದೂ ನನಗೆ ಗೊತ್ತಿಲ್ಲ ಎಂದು ಫಾತಿಮಾ ತಿಳಿಸಿದ್ದಾರೆ.

ಇನ್ನು ನಗರದ ಹೊರವಲಯದಲ್ಲಿರುವ ಬಂಗಲೆಯೊಂದನ್ನು ಈ ಸಹೋದರರು ಪಡೆದಿದ್ದರು. ಇಲ್ಲಿಯೇ ಬಾಂಬ್‌ ತಯಾರಿಕೆ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಈ ಬಂಗಲೆಯಲ್ಲಿ ಕೆಲವು ಸ್ಫೋಟಕ ಸಾಧನಗಳು, ಇತರೆ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಅಲ್ಲದೇ ಸ್ಫೋಟ ಸಂಭವಿಸಿದಕ್ಕೂ ಎರಡು ಗಂಟೆ ಮುನ್ನ ಇಲ್ಲಿಂದಲೇ ವ್ಯಾನೊಂದು ತೆರಳಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.

ಈ ವ್ಯಾನ್‌ನಲ್ಲಿ ಸ್ಫೋಟಕ ಕೊಂಡೊಯ್ದಿರಬಹುದು ಎಂದು ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ