ಕೊಲಂಬೊ: ಕೊಲಂಬೊದಲ್ಲಿ ಕಳೆದ ಭಾನುವಾರ ನಡೆದ ಐಸಿಸ್ ಉಗ್ರರ ಆತ್ಮಾಹುತಿ ದಾಳಿ ನಂತರ ದೇಶದ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ತಿಳಿಸಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ಉಗ್ರರ ಗುಂಪುಗಳು ಸಕ್ರಿಯವಾಗಿರುವ ಬಗ್ಗೆ ಭದ್ರತಾ ಪಡೆಗಳು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ಅದಕ್ಕೆ ಪೂರಕವಾಗಿ ಕಾರ್ಯಾಚರಣೆ ತೀವ್ರಗೊಳಿಸಿವೆ.
ಕೊಲಂಬೊದಲ್ಲಿ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರನಿಲ್ ವಿಕ್ರಮಸಿಂಘೆ ಈ ಮಾಹಿತಿ ನೀಡಿದ್ದಾರೆ.
ಪ್ರತಿ ನಿತ್ಯ ಹೊಸ ಸಾಕ್ಷ್ಯಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಶ್ರೀಲಂಕಾ ಸರ್ಕಾರಕ್ಕೆ ವಿದೇಶಿ ತನಿಖಾ ಸಂಸ್ಥೆಗಳು ಸಹಾಯ ನೀಡುತ್ತಿವೆ. ಉಗ್ರರ ಸಂಪರ್ಕಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಭಯೋತ್ಪಾದಕ ದಾಳಿ ನಂತರ ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಹಿನ್ನಡೆ ಉಂಟಾಗಿದೆ. ಆಗಸ್ಟ್ ನಂತರ ಅದು ಸಹಜ ಸ್ಥಿತಿಗೆ ಮರಳಲಿದೆ ಎಂದು ವಿಕ್ರಮ್ ಸಿಂಘೆ ತಿಳಿಸಿದರು.
ದ್ವೀಪ ರಾಷ್ಟ್ರದಲ್ಲಿ ಉಗ್ರರ ಗುಂಪುಗಳು ಸಕ್ರಿಯವಾಗಿರುವ ಬಗ್ಗೆ ಭದ್ರತಾ ಪಡೆಗಳು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ಅದಕ್ಕೆ ಪೂರಕವಾಗಿ ಕಾರ್ಯಾಚರಣೆ ತೀವ್ರಗೊಳಿಸಿವೆ.
ಕೊಲಂಬೊದಲ್ಲಿ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರನಿಲ್ ವಿಕ್ರಮಸಿಂಘೆ ಈ ಮಾಹಿತಿ ನೀಡಿದ್ದಾರೆ.
ಪ್ರತಿ ನಿತ್ಯ ಹೊಸ ಸಾಕ್ಷ್ಯಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಶ್ರೀಲಂಕಾ ಸರ್ಕಾರಕ್ಕೆ ವಿದೇಶಿ ತನಿಖಾ ಸಂಸ್ಥೆಗಳು ಸಹಾಯ ನೀಡುತ್ತಿವೆ. ಉಗ್ರರ ಸಂಪರ್ಕಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಭಯೋತ್ಪಾದಕ ದಾಳಿ ನಂತರ ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಹಿನ್ನಡೆ ಉಂಟಾಗಿದೆ. ಆಗಸ್ಟ್ ನಂತರ ಅದು ಸಹಜ ಸ್ಥಿತಿಗೆ ಮರಳಲಿದೆ ಎಂದು ವಿಕ್ರಮ್ ಸಿಂಘೆ ತಿಳಿಸಿದರು.