ಆ್ಯಪ್ನಗರ

ದೇಶದಲ್ಲಿ20 ಕೋಟಿ ಜನ ಹಸಿವಿನಿಂದ ಬಳಲಿಕೆ

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಿಂದ ತಾಲೂಕಿನ ಹೊರುಂಚಾ ತಾಂಡಾದಲ್ಲಿವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.

Vijaya Karnataka 18 Oct 2019, 9:57 pm
ಯಾದಗಿರಿ:ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಿಂದ ತಾಲೂಕಿನ ಹೊರುಂಚಾ ತಾಂಡಾದಲ್ಲಿವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.
Vijaya Karnataka Web 20 million starving people in the country
ದೇಶದಲ್ಲಿ20 ಕೋಟಿ ಜನ ಹಸಿವಿನಿಂದ ಬಳಲಿಕೆ


ಗ್ರಾಮದ ರೈತರ ಲಕ್ಷತ್ರ್ಮಣ ರಾಠೋಡ್‌ ಅವರ ತೋಟದಲ್ಲಿಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿಹಲವಾರು ರೈತರು ಭಾಗವಹಿಸಿದ್ದರು.

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ ಮಾತನಾಡಿ, ಪ್ರಪಂಚವನ್ನು ಹಸಿವು ಮುಕ್ತಗೊಳಿಸುವ ಉದ್ದೇಶದಿಂದ ಆಹಾರ ಮತ್ತು ಕೃಷಿ ಸಂಘಟನೆ ಇಟಲಿಯ ರೋಮನಲ್ಲಿಅ. 16, 1945ರಂದು ಸ್ಥಾಪಿಸಲಾಯಿತು ಎಂದು ತಿಳಿಸಿದರು.

ಮೊಟ್ಟಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ನಮ್ಮ ದೇಶದ ಹಸಿರುಕ್ರಾಂತಿಯ ಪಿತಮಹರಾದ ಡಾ. ಎಂ.ಎಸ್‌. ಸ್ವಾಮಿನಾಥನರವರಿಗೆ ನೀಡಲಾಗಿತ್ತು. ಈ ಪ್ರಶಸ್ತಿಯು 2.5 ಲಕ್ಷ ಡಾಲರ್‌ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದರು.

ಪ್ರತಿ ದಿನವೂ ಭಾರತದಲ್ಲಿಸುಮಾರು 224 ಕೋಟಿ ರೂ. ಮೌಲ್ಯದ ಆಹಾರ ಪೋಲಾಗುತ್ತಿದೆ. ಇನ್ನೊಂದೆಡೆ, 195.5 ದಶಲಕ್ಷ ಮಂದಿ ಆಹಾರದ ಕೊರತೆಯಿಂದ ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅಂದರೆ ಉತ್ಪತ್ತಿಯಾಗುವ ಆಹಾರದಲ್ಲಿಶೇ. 40 ರಷ್ಟು ಆಹಾರವನ್ನು ನಾವು ಪೋಲು ಮಾಡುತ್ತಿದ್ದರೆ, ಭಾರತದ ಜನಸಂಖ್ಯೆಯ ಶೇ. 14.8 ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆಹಾರ ಪೋಲು ಶುರುವಾಗುವುದು ನಮ್ಮ ಮನೆಯಿಂದಲೇ. ಈ ಪೋಲು ತಡೆಗಟ್ಟುವಲ್ಲಿಯುವಕರ ಪಾತ್ರ ಬಹುಮುಖ್ಯವಾದದ್ದು ಎಂದರು.

ಭಾರತ ದೇಶ ಒಂದರಲ್ಲೇ ಸುಮಾರು 20 ಕೋಟಿ ಜನ ಹಸಿವಿನಿಂದ ಬಳಲುತ್ತಿದ್ದು, ದಿನಕ್ಕೆ ಸುಮಾರು 8,000 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಂಕಿ-ಅಂಶದೊಂದಿಗೆ ನಿರೂಪಿಸಿ ವಿಶ್ವ ಆಹಾರ ದಿನಾಚರಣೆ ಮಹತ್ವದ ಬಗ್ಗೆ ತಿಳಿಸಿ ಮನವರಿಕೆ ಮಾಡಿದರು.

ಈ ಬೃಹತ್‌ ಜನಸಂಖ್ಯೆಯ ಹಸಿವು ನಿವಾರಣೆಗೆ, ಮರಣದ ಪ್ರಮಾಣ ತಗ್ಗಿಸುವಿಕೆಗೆ, ಬಡತನ ನಿವಾರಣೆಗೆ, ಅಪೌಷ್ಟಿಕತೆ ನಿವಾರಣೆಗೆ, ಜನರ ವಲಸೆ ನಿಲ್ಲಿಸುವಿಕೆಗೆ, ಆರ್ಥಿಕ ಭದ್ರತೆಗೆ, ಆರೋಗ್ಯ ಭದ್ರತೆಗೆ, ಗ್ರಾಮೀಣ ಅಭಿವೃದ್ಧಿಯಿಂದ ಹಿಡಿದು ಭಾರತದ ಅಭಿವೃದ್ಧಿಗೆ ತೋಟಗಾರಿಕೆ ಮಾತ್ರ ಸೂಕ್ತ ಉತ್ತರ ಎಂದು ಪ್ರತಿಪಾದಿಸಿದರು.

ಪ್ರಸ್ತುತ ದಿನಮಾನಗಳಲ್ಲಿನಿಜವಾದ ಅರ್ಥ ತುಂಬುವುದಾದರೆ ನಾವು, ನಮ್ಮ ತಂದೆ-ತಾಯಿಗಳು ಹಾಗೂ ಮನೆಯವರೆಲ್ಲಾ275 ಗ್ರಾಂ. ತರಕಾರಿ ಹಾಗೂ 75 ಗ್ರಾಂ. ಹಣ್ಣು ಪ್ರತಿಯೊಬ್ಬರು ಪ್ರತಿದಿನ ಸೇವಿಸಿದ್ದಲ್ಲಿಮಾತ್ರ ಸಾಧ್ಯ ಎಂದು ಹೆಚ್ಚಿಗೆ ತರಕಾರಿ ಮತ್ತು ಹಣ್ಣು ಬಳಸುವಂತೆ ಪ್ರೆರೇಪಿಸಿದರು ಹಾಗೂ ಪೌಷ್ಟಿಕ ಕೈತೋಟ ಹಾಗೂ ತಾರಸಿ ತೋಟಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ರೈತ ಲಕ್ಷತ್ರ್ಮಣ ರಾಠೋಡ ಮಾತಾನಾಡಿ, ಆಹಾರ ಜೀವನಕ್ಕೆ ತುಂಬಾ ಮಹತ್ವವಾದದ್ದು ಕಾರಣ, ಯಾರು ಆಹಾರವನ್ನು ವ್ಯರ್ಥ ಮಾಡಬಾರದು ಅಲ್ಲದೇ ಪ್ರತಿಯೊಬ್ಬರಿಗೆ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಈ ಹೇಳಿದರು.

ಶಿವರಾಜ ಕೋಟೆಗುಡ್ಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ