ಆ್ಯಪ್ನಗರ

ಸುರಪುರ ಕುಡಿವ ನೀರಿಗೆ 9 ಕೋಟಿ ಅನುದಾನ

ನಗರದ ಕುಡಿಯವ ನೀರಿನ ಯೋಜನೆಗೆ 9 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇಲ್ಲಿಯ ಶಾಶ್ವತ ಕುಡಿವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಜುಗೌಡ ಹೇಳಿದರು.

Vijaya Karnataka 2 Nov 2019, 5:00 am
ಸುರಪುರ :ನಗರದ ಕುಡಿಯವ ನೀರಿನ ಯೋಜನೆಗೆ 9 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇಲ್ಲಿಯ ಶಾಶ್ವತ ಕುಡಿವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಜುಗೌಡ ಹೇಳಿದರು.
Vijaya Karnataka Web 9 crore grant for surapur drinking water
ಸುರಪುರ ಕುಡಿವ ನೀರಿಗೆ 9 ಕೋಟಿ ಅನುದಾನ


ನಗರದಲ್ಲಿಶುಕ್ರವಾರ ಸುದ್ದಿಗಾರರ ಜತೆಯಲ್ಲಿಮಾತನಾಡಿದರು. ಶೆಳ್ಳಗಿ ಜಾಕ್‌ವೆಲ್‌ನಿಂದ ನಗರಕ್ಕೆ ಪೈಪ್‌ಲೈನ್‌ ದುರಸ್ತಿ, ಏರವಾಲ್‌ ಅಳವಡಿಕೆ ಸೇರಿ ನಾನಾ ಕಾಮಗಾರಿಗಳಿಗೆ 3.31 ಕೋಟಿ ಮತ್ತು ಸಮೀಪದ ಕುಂಬಾರಪೇಟೆ ನೀರು ಶುದ್ಧೀಕರಣ ಘಟಕ ಹೊಸದಾಗಿ ಸ್ಥಾಪಿಸಲು 4 ಕೋಟಿ, ಶೆಳ್ಳಗಿ ಎಕ್ಸಪ್ರೆಸ್‌ಲೈನ್‌ಗೆ 91 ಲಕ್ಷ ಅನುದಾನ ಮಂಜೂರಾಗಿದೆ. ಟೆಂಡರ್‌ ಕರೆದು ಶೀಘ್ರ ಕಾಮಗಾರಿಗಳನ್ನು ಪಾರಂಭಿಸಲಾಗುವುದು ಎಂದರು.

ತಿಂಗಳಿಂದ ನಗರದ ನೀರಿನ ಸಮಸ್ಯೆ ಹತೋಟಿಗೆ ಬಂದಿದೆ. ವಾರಕ್ಕೊಮ್ಮೆ ಮತ್ತು ಎರಡು ಬಾರಿ ನೀರು ಪೂರೈಸಲಾಗುತ್ತಿದೆ. ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಉಲ್ಭಣಿಸದಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಗರದ ನೀರಿನ ಸಮಸ್ಯೆ ಪರಿಹಾರಕ್ಕೆ ಅವಿರತ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಸಮೀಪದ ಹಸನಾಪುರದ ಎಪಿಎಂಸಿ ಆವರಣದಲ್ಲಿಹೊಸ ಬೋರ್‌ವೆಲ್‌ ಕೊರೆದು ರಂಗಂಪೇಟೆ, ತಿಮ್ಮಾಪುರ, ದಿವಳಗುಡ್ಡ, ಸತ್ಯಂಪೇಟೆ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ. ಹಸನಾಪುರದ ಕೆರೆಯಿಂದ ಶಾಶ್ವತ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೆಳ್ಳಗಿ ಎಕ್ಸ್‌ಪ್ರೆಸ್‌ ಲೈನ್‌ನ ಹೊಸ ಜೋಡಣೆಗೆ 91 ಲಕ್ಷ ರೂ. ಮೀಸಲಿರಿಸಲಾಗಿದೆ. ಇದರಿಂದ ನಗರದ ಕುಡಿವ ನೀರಿನ ಸಮಸ್ಯೆ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನರ್ಹರ ಶಾಸಕರ ಹಿತರಕ್ಷಣೆಗೆ ಸರಕಾರ ಬದ್ಧ

ರಾಜ್ಯದಲ್ಲಿಬಿಜೆಪಿ ಸರಕಾರ ರಚನೆಗೆ ಅನರ್ಹ ಶಾಸಕರೇ ಕಾರಣ. ಹೀಗಾಗಿ ಅವರ ಹಿತ ರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಅವರಿಗೆ ಯಾವುದೇ ಅನ್ಯಾಯವಾಗದು. ರಾಜ್ಯದಲ್ಲಿ15 ಕ್ಷೇತ್ರಗಳ ಉಪ ಚುನಾವಣೆಯಲ್ಲಿಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಮತ್ತು ಶಾಸಕ ರಾಜುಗೌಡ ಹೇಳಿದರು. ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಮೂಲ ಕಾರ್ಯಕರ್ತರಲ್ಲಿಅಸಮಾಧಾನ ಮಾಮೂಲು. ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರು ಅತೃಪ್ತರನ್ನು ಸಮಾಧಾನಪಡಿಸಲಿದ್ದು, ನ.4ರಂದು ನ್ಯಾಯಾಲಯದ ತೀರ್ಪು ಆಧರಿಸಿ ಪಕ್ಷದ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಎಸ್‌ಟಿ ಸಮುದಾಯದವರು 15 ಕ್ಷೇತ್ರಗಳಲ್ಲಿದ್ದು, ಹೀಗಾಗಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಸಮುದಾಯದ ಜನರಿಗೆ ಮನವಿ ಮಾಡುವೆ. ಪಕ್ಷ ಜವಾಬ್ದಾರಿ ವಹಿಸಿದರೆ ಈ ಕ್ಷೇತ್ರಗಳಲ್ಲಿಪ್ರಚಾರಕ್ಕೆ ಹೋಗುವುದಾಗಿ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ