ಆ್ಯಪ್ನಗರ

ದಾಖಲಾತಿ ಹೆಚ್ಚಿಸಿ ಕಲಿಕೆ ಉತ್ತೇಜಿಸಲು ಜಾಗೃತಿ ಅಭಿಯಾನ

ಬೇಸಿಗೆ ಅವಧಿ ಮುಗಿದು ಶಾಲೆಗಳು ಆರಂಭವಾಗುತ್ತಿದ್ದು, 2019-20 ನೇ ಸಾಲಿನ ಶೈಕ್ಷ ಣಿಕ ವರ್ಷದ ಈ ಸುಂದರ ದಿನಮಾನಗಳಲ್ಲಿ ಪಾಲಕ ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ದಾಖಲಾತಿಯನ್ನು ಹೆಚ್ಚಿಸಲು ಶ್ರಮಿಸುವುದು ಅಗತ್ಯ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಮರೆಡ್ಡಿ ಸಾಹು ಹೇಳಿದರು.

Vijaya Karnataka 13 Jun 2019, 9:08 pm
ಕೊಡೇಕಲ್‌ :ಬೇಸಿಗೆ ಅವಧಿ ಮುಗಿದು ಶಾಲೆಗಳು ಆರಂಭವಾಗುತ್ತಿದ್ದು, 2019-20 ನೇ ಸಾಲಿನ ಶೈಕ್ಷ ಣಿಕ ವರ್ಷದ ಈ ಸುಂದರ ದಿನಮಾನಗಳಲ್ಲಿ ಪಾಲಕ ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ದಾಖಲಾತಿಯನ್ನು ಹೆಚ್ಚಿಸಲು ಶ್ರಮಿಸುವುದು ಅಗತ್ಯ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಮರೆಡ್ಡಿ ಸಾಹು ಹೇಳಿದರು.
Vijaya Karnataka Web awareness campaign to increase enrollment and improve learning
ದಾಖಲಾತಿ ಹೆಚ್ಚಿಸಿ ಕಲಿಕೆ ಉತ್ತೇಜಿಸಲು ಜಾಗೃತಿ ಅಭಿಯಾನ


ಸಮೀಪದ ಗೆದ್ದಲಮರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಅಂದೋಲನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎರಡು ತಿಂಗಳಿಗೂ ಹೆಚ್ಚು ಕಾಲ ಬೇಸಿಗೆಯ ಅವಧಿಯಲ್ಲಿ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಶಾಲೆಯಿಂದ ದೂರವಿದ್ದು ಅನ್ಯ ಕೆಲಸ ಕಾರ್ಯದಲ್ಲಿ ತೊಡಗಿ ಶಾಲೆಯತ್ತ ಗಮನ ಹರಿಸದಿರುವುದು ಸಹಜ, ಆದರೆ ಮರಳಿ ಶೈಕ್ಷ ಣಿಕ ವರ್ಷದ ಅವಧಿಗಳು ಪ್ರಾರಂಭವಾಗುತ್ತಿದ್ದು ಗ್ರಾಮೀಣ ಪ್ರದೇಶದ ಪ್ರತಿಯೋರ್ವ ಶಿಕ್ಷ ಣ ಪ್ರೇಮಿಗಳು, ಎಸ್‌ಡಿಎಂಸಿ ಸದಸ್ಯರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ಶಾಲೆಗಳತ್ತ ಮಕ್ಕಳ ಬರುವಿಕೆಗೆ ಸಹಕರಿಸುವುದು ತುಂಬಾ ಅಗತ್ಯವಿದೆ ಎಂದರು.

ಮುಖ್ಯಗುರು ಸಂಗಯ್ಯ ಬಾಚಿಹಾಳ ಮಾತನಾಡಿ, ಸಾರ್ವಜನಿಕ ಶಿಕ್ಷ ಣ ಇಲಾಖೆಯು ಈ ವರ್ಷವೂ ಕೂಡ ಜಾಗೃತೆಯಿಂದ ಕಾರ್ಯನಿರ್ವಹಿಸಲು ಮುಂದಾಗಿದೆ. ದಾಖಲಾತಿ ಹೊಂದಿದ ಎಲ್ಲಾ ಮಕ್ಕಳು ನಿತ್ಯ ತಪ್ಪದೆ ಶಾಲೆಗೆ ಆಗಮಿಸಿ ಹಾಜರಾತಿಯನ್ನು ಹೆಚ್ಚಿಸುವುದು ಕೂಡ ಮಹತ್ವದ್ದಾಗಿದೆ. ಆದ್ದರಿಂದ ಪಾಲಕ ಪೋಷಕರು ವಿಶೇಷವಾದ ಕಾಳಜಿವಹಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ ದೇಶದ ಸತ್ಪ್ರಜೆಯನ್ನಾಗಿ ರೂಪಿಸಿ ಎಂದು ಕರೆನೀಡಿದರು.

ಈ ಸಂದರ್ಭದಲ್ಲಿ ಸಿಆರ್‌ಪಿ ಸುಭಾಷ ಜಾಧವ್‌, ರೇಣುಕಾ.ಪಿ.ಧವನ್‌, ಮಲ್ಲಿಕಾರ್ಜುನ ಬಂಗಾರಗುಂಡ, ಅಮರೇಶ ಹುಜರತಿ, ಮಂಜುನಾಥ ಢನಾಳ, ಬಸನಗೌಡ ಪಾಟೀಲ್‌ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಮಕ್ಕಳ ಪಾಲಕ ಪೋಷಕರು ಉಪಸ್ಥಿತರಿದ್ದರು.

ಶಾಲೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಕೈಬೀಸಿ ಕರೆಯುವಂತೆ ಮಾಡಿದ ಇಲ್ಲಿನ ಸಿಬ್ಬಂದಿಗಳು ಪ್ರಶಂಶೆಗೆ ಪಾತ್ರರಾದರು. ನಂತರ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ