ಆ್ಯಪ್ನಗರ

ಮಗುವಿನ ಸಾವಿನಿಂದ ಆಘಾತಗೊಂಡು ಅಜ್ಜಿ, ಚಿಕ್ಕಮ್ಮ ಸಾವು

ವಾಂತಿಭೇದಿಯಿಂದ ಮೂರು ವರ್ಷದ ಮಗು ಸೇರಿ ಒಂದೇ ಮನೆಯ ಮೂವರು ಮೃತಪಟ್ಟ ಘಟನೆ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ನಡೆದಿದೆ.

Vijaya Karnataka Web 7 Jun 2018, 5:00 am
ಯಾದಗಿರಿ : ವಾಂತಿಭೇದಿಯಿಂದ ಮೂರು ವರ್ಷದ ಮಗು ಸೇರಿ ಒಂದೇ ಮನೆಯ ಮೂವರು ಮೃತಪಟ್ಟ ಘಟನೆ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರಿಗೆ ಈ ಘಟನೆ ತೀವ್ರ ನೋವುಂಟು ಮಾಡಿದ್ದು, ಎಲ್ಲೆಡೆ ನೀರವ ಮೌನ ಆವರಿಸಿದೆ.
Vijaya Karnataka Web child death jpge


ಕಳೆದ ಮೂರ್ನಾಲ್ಕು ದಿನಗಳಿಂದ ವಾಂತಿಭೇದಿಯಿಂದ ನರಳುತ್ತಿದ್ದ ಪ್ರದೀಪ್‌ ಅಬ್ರಾಹಿಂ(3) ಎಂಬ ಮೂರು ವರ್ಷದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ಅಂಬ್ಯುಲೆನ್ಸ್‌ ಮೂಲಕ ಕರೆತರಲಾಗುತ್ತಿತ್ತು. ಆದರೆ ಆಸ್ಪತ್ರೆ ಆವರಣ ಪ್ರವೇಶಿಸುವ ಮುನ್ನವೇ ಮಗು ಮೃತಪಟ್ಟಿತ್ತು. ವೈದ್ಯರ ಬಳಿ ತೋರಿಸಿದಾಗ ಮಗು ಅಸುನೀಗಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದಾಗ ದಂಗಾದರು.

ಒಂದೇ ಆಂಬ್ಯುಲೆನ್ಸ್‌ನಲ್ಲಿ ಮೃತ ಮಗುವಿನ ಅಜ್ಜಿ ಶಾಂತಮ್ಮ ಮತ್ತು ಚಿಕ್ಕಮ್ಮ ಭಾಗ್ಯಮ್ಮ ಆಗಮಿಸಿದ್ದರು. ಆದರೆ ವೈದ್ಯರು ಮಗು ಮೃತಪಟ್ಟಿದೆ ಎಂದು ವಿಷಯ ತಿಳಿದು ಅಘಾತಗೊಂಡು ಇಬ್ಬರು ಸಹ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

ಮಗು ಸೇರಿ ಮೂವರ ಮೃತಪಟ್ಟಿರುವ ಸುದ್ದಿಯನ್ನು ವೈದ್ಯರು ಅವರ ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಈ ವಿಷಯ ಕೋಡಲಾ ಗ್ರಾಮಸ್ಥರಿಗೂ ಮುಟ್ಟಿತು. ಈ ಮನಕುಲುಕವ ಘಟನೆ ಕೇಳಿ ಗ್ರಾಮಸ್ಥರು ಎಲ್ಲರೂ ಸಹ ಮಮ್ಮಲ ಮರಗಿದ್ದಾರೆ. ಅಲ್ಲದೆ ತಂಡೋಪ ತಂಡವಾಗಿ ಆಗಮಿಸಿ ಮೃತರ ಕುಟುಂಬಸ್ಥರಿಗೆ ಧೈರ್ಯ ತುಂಬವ ಕೆಲಸ ಮಾಡುತ್ತಿರುವುದು ಕಂಡು ಬಂದಿತು.

ಕುಟುಂಬಸ್ಥರಿಗೆ ತೀವ್ರ ಆಘಾತ


ಮೂವರು ಮೃತಪಟ್ಟಿರುವ ಸುದ್ದಿ ಕೇಳಿದ ಕುಟುಂಬಸ್ಥರಿಗೆ ಸಾಕಷ್ಟು ನೋವು ಉಂಟು ಮಾಡಿದೆ. ದುಃಖ ತಡೆಯಲಾಗದೆ ನೆಲದ ಮೇಲೆ ಬಿದ್ದು ಉರುಳಾಡಿ ಅಳುತ್ತಿರುವ ದೃಶ್ಯ ನೋಡುಗರ ಮನ ಕಲುಕಿತು.

ಜಿಲ್ಲಾಸ್ಪತ್ರೆಯಿಂದ ಮೃತಹ ದೇಹಗಳು ಗ್ರಾಮಕ್ಕೆ ಬಂದಾಗ ಇಡೀ ಊರಿನ ಜನತೆ ಶವದ ಬಳಿ ಆಗಮಿಸಿದರು. ಮೃತ ದೇಹಗಳನ್ನು ಮನಗಳಿಗೆ ಸಾಗಿಲಸು ಸಾಕಷ್ಟು ಸಾಹಸ ಮಾಡುವಂತಾಯಿತು. ಕಾರಣ ಕುಟುಂಬಸ್ಥರು ಶವ ಎತ್ತಿಕೊಂಡು ಹೋಗುವ ವೇಳೆ ಕಣ್ಣೀರು ಹಾಕುತ್ತಿದ್ದರು. ನಿಜಕ್ಕೂ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ