ಆ್ಯಪ್ನಗರ

ಭೀಮೆಯಲ್ಲಿ ದಸರಾ ಸ್ನಾನ

ಭೀಮಾ ಪುಷ್ಕರ ಮಹೋತ್ಸವ 12ವರ್ಷಕ್ಕೊಮ್ಮೆ ನಡೆಯುತ್ತಿರುವ ಪರಿಣಾಮ ಕುಟುಂಬ ಸಮೇತರಾಗಿ ಆಗಮಿಸುವ ಮೂಲಕ ಪುಷ್ಕರ ಮಹೋತ್ಸವದಲ್ಲಿ ಸ್ನಾನ ಮಾಡಿದರು.

Vijaya Karnataka Web 20 Oct 2018, 8:10 am
ಯಾದಗಿರಿ: ಆಯುಧ ಪೂಜೆ ಮತ್ತು ವಿಜಯ ದಶಮಿ ದಿನ ಭೀಮಾ ಪುಷ್ಕರದಲ್ಲಿ ಸಹಸ್ರಾರು ಭಕ್ತರು ಸ್ನಾನ ಮಾಡಿದರು. ಶಹಾಪುರ ತಾಲೂಕಿನ ವಡಗೇರಾ ಗ್ರಾಮದಲ್ಲಿ ಭೀಮಾ ಪಷ್ಕರ ಮಹೋತ್ಸವ ನಡೆಯುತ್ತಿದೆ. ಈ ಎರಡು ದಿನ ಜನರ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
Vijaya Karnataka Web BHima


ರಜಾ ದಿನ ಹಿನ್ನೆಲೆಯಲ್ಲಿ ಎಲ್ಲರೂ ಹಬ್ಬಕ್ಕಾಗಿ ಊರಿಗೆ ಆಗಮಿಸಿದ್ದರು. ಆದರೆ, ಈ ಭೀಮಾ ಪುಷ್ಕರ ಮಹೋತ್ಸವ 12ವರ್ಷಕ್ಕೊಮ್ಮೆ ನಡೆಯುತ್ತಿರುವ ಪರಿಣಾಮ ಕುಟುಂಬ ಸಮೇತರಾಗಿ ಆಗಮಿಸುವ ಮೂಲಕ ಪುಷ್ಕರ ಮಹೋತ್ಸವದಲ್ಲಿ ಸ್ನಾನ ಮಾಡಿದರು.

ಭೀಮಾ ಪುಷ್ಕರ ಮಹೋತ್ಸವ ಸಂದರ್ಭದಲ್ಲಿ ಸ್ನಾನ ಮಾಡಿದರೇ ಪುಣ್ಯ ಪ್ರಾಪ್ತಿ ಆಗಿ ಜೀವನದಲ್ಲಿ ಬದಲಾವಣೆ ಕಾಣಬಹುದು ಎಂಬ ಪ್ರತೀತಿ ಇದೆ. ಹೀಗಾಗಿಯೇ ಜನರು ಅಪಾರ ಪ್ರಮಾಣದಲ್ಲಿ ಆಗಮಿಸುವ ಮೂಲಕ ಭೀಮಾ ನದಿಯಲ್ಲಿ ಮಿಂದೇಳುತ್ತಿರುವುದು ಎಲ್ಲೆಡೆ ಕಂಡು ಬಂದಿತು.

ಶಾಸಕ ಮತ್ತು ಮಾಜಿ ಸಚಿವ ನರಸಿಂಹನಾಯಕ ಮತ್ತು ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರು ಸಹ ಪುಷ್ಕರ ಮಹೋತ್ಸವಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ