ಆ್ಯಪ್ನಗರ

ಸರಕಾರ ಬೀಳಲಿ ಅಂತಾ ಬೆರಳು ಮುರಿಯುತ್ತಿದ್ದೇವೆ: ಬಿಎಸ್‌ವೈ ಮುಂದೆ ಮಹಿಳೆ ಆಕ್ರೋಶ

ಕೆಳಭಾಗದ ಕಾಲುವೆಗೆ ನೀರು ಬರುತ್ತಿಲ್ಲ. ಅನ್ನದಾತರು ವಿಷ ಕುಡಿಯುವಂತಹ ಪರಿಸ್ಥಿತಿ ಒದಗಿ ಬಂದಿದೆ ಎಂದು ಯಡಿಯೂರಪ್ಪ ಮುಂದೆ ಅಲವತ್ತುಕೊಂಡರು

Vijaya Karnataka Web 9 Jun 2019, 12:02 pm
ಯಾದಗಿರಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅನವಾರ ಗ್ರಾಮದಲ್ಲಿ ಬರ ಪರಿಶೀಲನೆ ನಡೆಸಿದ ಬಳಿಕ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ನಮ್ಮೂರಿಗಡ ಸಾಲ ಮನ್ನಾ ಆಗಿಲ್ಲ. ಕುಡಿಯಲು ನೀರಿಲ್ಲ. ನೀರು ಶುದ್ಧೀಕರಣ ಘಟಕ ಬಂದಾಗಿ ಆರು ತಿಂಗಳಾದರೂ ಆರಂಭವಾಗಿಲ್ಲ ಕೆಲವರು ಎಂದು ದೂರಿದರು.

ಮಹಿಳೆಯೊಬ್ಬರೂ ಮಾತನಾಡಿ ಈ ಸರಕಾರ ಬೀಳಲಿ ಅಂತಾ ನಾವು ನಿತ್ಯ ಬೆರಳು ಮುರಿಯುತ್ತಿದ್ದೇವೆ. ಈ ಸರಕಾರ ಏನು ಮಾಡಲಿಲ್ಲ. ಇದು ಬಿದ್ದು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ರೈತರೊಬ್ಬರು ಮಾತನಾಡಿ, ಕೆಳಭಾಗದ ಕಾಲುವೆಗೆ ನೀರು ಬರುತ್ತಿಲ್ಲ. ಅನ್ನದಾತರು ವಿಷ ಕುಡಿಯುವಂತಹ ಪರಿಸ್ಥಿತಿ ಒದಗಿ ಬಂದಿದೆ ಎಂದು ಯಡಿಯೂರಪ್ಪ ಮುಂದೆ ಅಲವತ್ತುಕೊಂಡರು.

ಬಳಿಕ ಮಾತನಾಡಿದ ಯಡಿಯೂರಪ್ಪ, ಸಾಲ ಮನ್ನಾ ಘೋಷಣೆ ಆಗಿ ವರ್ಷ ಆಗಿದೆ. ಇನ್ನೂ ಯಾರ ಖಾತೆಗೂ ಹಣ ಜಮಾವಣೆ ಆಗಿಲ್ಲ ಎಂದರು.

ನೀರು ಶುದ್ದೀಕರಣ ಘಟಕಗಳು ಎಲ್ಲ ಹಳ್ಳಿಗಳಲ್ಲಿ ಬಂದಾಗಿವೆ. ಈ ಸರಕಾರಸ ಅಸಮರ್ಪಕ ಆಡಳಿತವೇ ಆಗಿದೆ. ವಿಧಾನ ಸೌಧದ ಮುಂದೆ ಸತ್ಯಾಗ್ರಹ ನಡೆಸಲಾಗುವುದು. ಸಾಲ ಮನ್ನಾ ಆಗುವರೆಗೂ ಬಿಡುವುದು ಇಲ್ಲ. ಹೋರಾಟ ಮುಂದು ವರೆಯಲಿದೆ. ಇದಲ್ಲದೇ ಪ್ರತಿಯೊಂದು ಊರಿನಲ್ಲಿ ಧರಿಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಾಲ್ಕು ದಿನದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ತಕ್ಷಣವೇ ಸಾಲ ಮನ್ನಾ ಮಾಡಬೇಕು. ಸರಕಾರ ಬರ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸಬೇಕು ಎಂದರು.

ಶಾಲೆಯಲ್ಲಿ ಮಲಗುವುದರಿಂದ ಏನು ಲಾಭ ವಿದೆ. ಒಂದು ವರ್ಷ ಐಷರಾಮಿ ಹೋಟೆಲ್‌ನಲ್ಲಿ ಇದ್ದು ಸಿಎಂ ಅವರು ಈಗ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ