ಆ್ಯಪ್ನಗರ

‘ಬಾಲ ಕಾರ್ಮಿಕ ಮುಕ್ತ ಸಮಾಜಕ್ಕೆ ಕೈಜೋಡಿಸಿ’

ಶಾಲೆಗೆ ಹೋಗಬೇಕಾದ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಬಾಲ ಕಾರ್ಮಿಕ ಪದ್ಧತಿ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳ ಬಾಲ್ಯ ರಕ್ಷಿಸಲು ಬಾಲ ಕಾರ್ಮಿಕ ದುಡಿತದಿಂದ ಬಿಡಿಸಬೇಕು ಎಂದು ಜೆಎಂಎಫ್‌ ಕೋರ್ಟ್‌ನ ಹಿರಿಯ ಶ್ರೇಣಿ ನ್ಯಾಯಾಧೀಶೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧಕ್ಷೆ ತಯ್ಯಬಾ ಸುಲ್ತಾನ್‌ ಹೇಳಿದರು.

Vijaya Karnataka 13 Jul 2019, 9:59 pm
ಸುರಪುರ:ಶಾಲೆಗೆ ಹೋಗಬೇಕಾದ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಬಾಲ ಕಾರ್ಮಿಕ ಪದ್ಧತಿ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ. ಮಕ್ಕಳ ಬಾಲ್ಯ ರಕ್ಷಿಸಲು ಬಾಲ ಕಾರ್ಮಿಕ ದುಡಿತದಿಂದ ಬಿಡಿಸಬೇಕು ಎಂದು ಜೆಎಂಎಫ್‌ ಕೋರ್ಟ್‌ನ ಹಿರಿಯ ಶ್ರೇಣಿ ನ್ಯಾಯಾಧೀಶೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧಕ್ಷೆ ತಯ್ಯಬಾ ಸುಲ್ತಾನ್‌ ಹೇಳಿದರು.
Vijaya Karnataka Web child labor day
‘ಬಾಲ ಕಾರ್ಮಿಕ ಮುಕ್ತ ಸಮಾಜಕ್ಕೆ ಕೈಜೋಡಿಸಿ’


ಇಲ್ಲಿಯ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಪಂ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ, ಪೊಲೀಸ್‌ ಇಲಾಖೆ, ತಾಲೂಕು ವಕೀಲರ ಸಂಘ ಹಾಗೂ ನಾನಾ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನ, ಪೋಷಕರ ಆರ್ಥಿಕ ದುಸ್ಥಿತಿ ಮತ್ತಿತರ ಅನಿವಾರ್ಯ ಕಾರಣಗಳಿಂದಾಗಿ ಶಿಕ್ಷ ಣದಿಂದ ವಂಚಿತರಾದ ಅನೇಕ ಮಕ್ಕಳು ಒತ್ತಾಯ ಪೂರ್ವಕವಾಗಿ ಕೈಗಾರಿಕೆ, ವರ್ಕ್‌ಶಾಪ್‌ ಮತ್ತಿತರ ಕಡೆಗಳಲ್ಲಿ ಬಾಲಕಾರ್ಮಿಕರಾಗುತ್ತಿದ್ದಾರೆ. ಇದು ದೊಡ್ಡ ಅಪರಾಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. 14 ವರ್ಷದೊಳಗಿನ ಬಾಲ್ಯಾವಸ್ಥೆಯ ಕಾರ್ಮಿಕರುಗಳನ್ನು ಯಾವುದೇ ಅಂಗಡಿ ಮತ್ತು ವಾಣಿಜ್ಯ, ಸಂಸ್ಥೆ, ಗ್ಯಾರೇಜ್‌, ಕಾರಖಾನೆ, ಹೋಟೆಲ್‌, ರೆಸ್ಟೋರೆಂಟ್‌, ಡಾಬಾ, ಮನೆಗೆಲಸ ಇತರೆ ಉದ್ಯೋಗದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಣಿಕೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಿಸಿದವರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ತಪ್ಪಿತಸ್ಥ ಮಾಲೀಕರುಗಳಿಗೆ 6 ತಿಂಗಳಿಂದ 2 ವರ್ಷ ಜೈಲು ಅಥವಾ 20 ಸಾವಿರ ದಿಂದ 50 ಸಾವಿರ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ಸಹ ನ್ಯಾಯಾಲಯ ವಿಧಿಸಿಬಹುದಾಗಿರುತ್ತದೆ. ಈ ವಿಷಯಲ್ಲಿ ನೆರವು ನೀಡಿದ ಪಾಲಕರ ಮೇಲೆಯೂ ಸಹ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ ಅವರು ಬಾಲ ಕಾರ್ಮಿಕ ಪದ್ಧತಿ ಅಳಸಿ-ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಸಲಹೆ ನೀಡಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ಚಿದಾನಂದ ಬಡಿಗೇರ್‌ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು ಎಂದರು. ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ ಠಾಕೂರ್‌ ಪ್ರಾಸ್ತಾವಿಕ ಮಾತನಾಡಿ, ವಿಶ್ವದ 80ಕ್ಕೂ ಹೆಚ್ಚು ದೇಶಗಳು ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮಾಡುತ್ತಿವೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ನಮ್ಮ ಇಲಾಖೆಯು ಕೆಲ ಇಲಾಖೆಗಳ ಸಂಘಟಿತ ಪ್ರಯತ್ನದಿಂದ 2011 ರಿಂದ ಇಲ್ಲಿಯವರೆಗೆ 5 ಸಾವಿರ ಬಾಲ್ಯವಿವಾಹಗಳನ್ನು ತಡೆದಿದೆ. ಅಲ್ಲದೆ, ಬಾಲ ಕಾರ್ಮಿಕ, ದೇವದಾಸಿ ಪದ್ಧತಿಗೂ ಕಡಿವಾಣ ಹಾಕುವಲ್ಲಿ ಶ್ರಮಿಸಿದೆ ಎಂದರು.

ಸಂಪನ್ಮೂಲ ವ್ಯಕ್ತಿ ವಕೀಲೆ ಜಯಲಲಿತಾ ಪಾಟೀಲ್‌ ಉಪನ್ಯಾಸ ನೀಡಿದರು. ಹೆಚ್ಚುವರಿ ನ್ಯಾಯಾಧೀಶ ಅಮರನಾಥ್‌ ಬಿಎನ್‌, ತಾಲೂಕು ಕಾರ್ಮಿಕ ನಿರೀಕ್ಷ ಕ ಶಿವಶಂಕರ ತಳವಾರ, ವಕೀಲರ ಸಂಘದ ಅಧ್ಯಕ್ಷ ಮೊಹ್ಮದ್‌ ಹುಸೇನ್‌, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಡಾ.ಹಣಮಂತ್ರಾಯ ಕರಡಿ, ಸದಸ್ಯ ಮಾಳಪ್ಪ ಒಂಟೂರು, ಟಿಹೆಚ್‌ಒ ಡಾ.ಆರ್‌.ವಿ.ನಾಯಕ, ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ, ಸಿಡಿಪಿಒ ಲಾಲಸಾಬ್‌ ಪೀರಾಪುರ, ಬಿಆರ್‌ಸಿ ಅಮರೇಶ ಕುಂಬಾರ, ಬಿಸಿಎಂ ಅಧಿಕಾರಿ ಬಾಬು ಹಣಮಂತ.

ಕಾಲೇಜು ಪ್ರಾಂಶುಪಾಲ ಸುವರ್ಣ ಕಟ್ಟಿಮನಿ, ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರು, ಪ್ರಮುಖರಾದ ಫಾದರ್‌.ಜಿ, ಪ್ರಕಾಶ ಚವ್ಹಾಣ, ಅಹ್ಮದ್‌ ಹುಸೇನ್‌ ವೇದಿಕೆಯಲ್ಲಿದ್ದರು. ಬಾಲ ಕಾರ್ಮಿಕ ವಿರೋಧ ಪದ್ಧತಿಯ ಪ್ರಮಾಣ ವಚನ ಬೋಧಿಸಲಾಯಿತು. ಹಿರಿಯ-ಕಿರಿಯ ವಕೀಲರು, ಅಧಿಕಾರಿಗಳು, ನಾನಾ ಶಾಲೆಗಳ ಮಕ್ಕಳು ಶಿಕ್ಷ ಕರು ಇದ್ದರು. ಲಕ್ಷ ್ಮಣ ಬಿರಾದಾರ್‌ ಸ್ವಾಗತಿಸಿದರು. ನಂದನಗೌಡ ಪಾಟೀಲ್‌ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ