ಆ್ಯಪ್ನಗರ

ಸಿಎಂ ಸಂಪುಟದ ನಾಲ್ವರು ಮಂತ್ರಿಗಳಿಂದ ಹೈಕಮಾಂಡ್‌ಗೆ ಹಣ: ಕುಮಾರಸ್ವಾಮಿ ಬಾಂಬ್

ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಮಂತ್ರಿಮಂಡದಲ್ಲಿರುವ ನಾಲ್ವರು ಮಂತ್ರಿ ಗಳು ಹೈಕಮಾಂಡ್ ಗೆ ಹಣ ನೀಡುತ್ತಿದ್ದು ದಾಖಲೆ ಸಮೇತ ಅವರ ಹೆಸರುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.

Vijaya Karnataka Web 20 Jan 2018, 2:25 pm
ಯಾದಗಿರಿ: ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಮಂತ್ರಿಮಂಡದಲ್ಲಿರುವ ನಾಲ್ವರು ಮಂತ್ರಿ ಗಳು ಹೈಕಮಾಂಡ್ ಗೆ ಹಣ ನೀಡುತ್ತಿದ್ದು ದಾಖಲೆ ಸಮೇತ ಅವರ ಹೆಸರುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.
Vijaya Karnataka Web cm cabinet ministers given money for high command kumarswamy
ಸಿಎಂ ಸಂಪುಟದ ನಾಲ್ವರು ಮಂತ್ರಿಗಳಿಂದ ಹೈಕಮಾಂಡ್‌ಗೆ ಹಣ: ಕುಮಾರಸ್ವಾಮಿ ಬಾಂಬ್


ಶಹಾಪುರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ವರು ಮಂತ್ರಿ ಗಳು ಸಿಎಂಗೆ ಆಪ್ತ ಆಗಿದ್ದಾರೆ. ಹೊಸದಿಲ್ಲಿಗೆ ತೆರಳಲು ಇವರಿಗೆ ವಿಶೇಷ ವಿಮಾನವೇ ಏಕೇ ಬೇಕು ಅದರಲ್ಲಿ ಯೇ ಹಣ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಎಂಎಂಸಿಎಲ್ ನಲ್ಲಿ ನಡೆದ ಐದು ಸಾವಿರ ಕೋಟಿ ರೂ. ಗಣಿ ಹಗರಣವನ್ನು ಗಣಿ ಸಚಿವರು ಲೆಕ್ಕ ಮಾಡುವುದರಲ್ಲಿ ತಪ್ಪಾಗಿದೆ ಎಂದಿರುವುದು ಬಾಲಿಷತನ ಹೇಳಿಕೆ ಆಗಿದೆ ಎಂದು ಹೇಳಿದರು.

ಹೈಕಮಾಂಡ್ ಗೆ ಕಪ್ಪ ಹಣ ಸಲ್ಲಿಕೆ ಆಗುತ್ತದೆ. ಇದನ್ನು ಕೆಲ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಗಣಿ ಹಗರಣದ ಬಗ್ಗೆ ಸಿಎಂ ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲವೇಕೇ ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ವರ್ಷ ಸುಮ್ಮನೇ ಕುಳಿತು ಇದೀಗ ಜನರ ಮುಂದೆ ಸಾಧನಾ ಸಮಾವೇಶ ಹೆಸರಿನಲ್ಲಿ ಡ್ರಾಮಾ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಸಾವಿರಾರು ಕೋಟಿ ರೂ. ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಇದು ಹಣಕಾಸಿನ ಇಲಾಖೆ ಬಗ್ಗೆ ಒಪ್ಪಿಗೆ ಪಡೆದಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿರುವ ಯೋಜನೆ ಗಳಲ್ಲಿ ಕೆಲವು ಅನವಶ್ಯಕ ಇದ್ದರೇ ರದ್ದುಗೊಳಿಸಲಾಗುವುದು ಎಂದರು.

ಇದಲ್ಲದೇ ಕೆಲವೊಂದು ಯೋಜನೆಗಳಲ್ಲಿ ಹಣ ಲೂಟಿ ಮಾಡಲು ಘೋಷಣೆ ಮಾಡಲಾಗಿದೆ. ಇದನ್ನು ರದ್ದು ಮಾಡಿ ಆ ಹಣವನ್ನು ಸಮರ್ಪಕ ವಿನಿಯೋಗಿಸಲು ಪ್ರತ್ಯೇಕವಾಗಿ ವಿಭಾಗ ಮಾಡುತ್ತೇನೆ ಎಂದರು.

ಗೋವಿಂದರಾಜು ಮನೆ ಮೇಲೆ ಐಟಿ ದಾಳಿ ಮಾಡಿದ ವೇಳೆ ಸಿಕ್ಕ ಡೈರಿ ಸೋರಿಕೆ ಮಾಡಿ ಬಿಜೆಪಿ ನಾಯಕರು ಲಾಭ ಮಾಡಿಕೊಂಡರು. ಆ ತನಿಖೆ ಎಲ್ಲಿಗೆ ಬಂತು ಎಂಬುದು ತಿಳಿಯದಂತಾಗಿದೆ ಎಂದರು.

ಲೇಖಾನುದಾನ ಬಜೆಟ್ ಮಂಡನೆ ಮಾಡಲು ಸಿಎಂ ಅವರು ಎಲ್ಲ ಸಂಘ ಸಂಸ್ಥೆಗಳು ಕರಿದು ಅಭಿಪ್ರಾಯ ಪಡೆಯುತ್ತಾರೆ. ಈ ಮುಂಚೆ ಮಂಡಿಸಿದಾಗ ಯಾವುದೇ ಕರೆದಿಲ್ಲ. ಜನರನ್ನು ಮೆಚ್ಚಿಸಲು ನಾಟಕೀಯ ವಾತಾವರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಜೆಡಿಎಸ್ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ನಾಯಕರು ತಿಳಿಯಲಿ. ಜೆಡಿಎಸ್ ನಲ್ಲಿ ಸೂಟ್ ಕೇಸ್ ರಾಜಕೀಯವಿಲ್ಲ. ನಮ್ಮ ಕುಟುಂಬದಿಂದ ಎಷ್ಟು ಜನ ನಿಲ್ಲಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ