ಆ್ಯಪ್ನಗರ

ಕೊಚ್ಚಿ ಹೋದ ರೈತನಿಗಾಗಿ ಮುಂದುವರಿದ ಶೋಧ

ತಾಲೂಕಿನ ಕೌಳೂರು ಗ್ರಾಮದ ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ರೈತನ ಪತ್ತೆ ಕಾರ್ಯಾಚರಣೆ ಎರಡನೆ ದಿನಕ್ಕೆ ಕಾಲಿರಿಸಿದರೂ ಯಾವುದೇ ಸುಳಿವು ಸಿಗದಿರುವುದು ಕುಟುಂಬಸ್ಥರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.

Vijaya Karnataka 17 Aug 2019, 4:08 pm
ಯಾದಗಿರಿ:ತಾಲೂಕಿನ ಕೌಳೂರು ಗ್ರಾಮದ ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ರೈತನ ಪತ್ತೆ ಕಾರ್ಯಾಚರಣೆ ಎರಡನೆ ದಿನಕ್ಕೆ ಕಾಲಿರಿಸಿದರೂ ಯಾವುದೇ ಸುಳಿವು ಸಿಗದಿರುವುದು ಕುಟುಂಬಸ್ಥರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
Vijaya Karnataka Web continued search for a farmer in kochi
ಕೊಚ್ಚಿ ಹೋದ ರೈತನಿಗಾಗಿ ಮುಂದುವರಿದ ಶೋಧ


ಸಾಬರಡ್ಡಿ ಡೊಂಗೇರ್‌ (34) ಎಂಬ ರೈತನು ನದಿಯಲ್ಲಿ ಪಂಪ್‌ಸೆಟ್‌ ತೆಗೆಯುವ ವೇಳೆ ಕೊಚ್ಚಿಕೊಂಡು ಹೋಗಿದ್ದರು. ಗುರುವಾರ ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ನಡೆದ ದಿನ ಮತ್ತು ಶುಕ್ರವಾರ ಪೂರ್ತಿ ಶೋಧನೆ ಮಾಡಿದರೂ ಸಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಕೇಂದ್ರದ ಆಂತರಿಕ ರಕ್ಷ ಣಾ ತಂಡ (ಎಚ್‌ಎಡಿಆರ್‌) ರೈತನ ಪತ್ತೆಗಾಗಿ ಸಾಕಷ್ಟು ಶ್ರಮವಹಿಸುತ್ತಿದೆ. ಇದೀಗ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಭಾರಿ ಹೆಚ್ಚಳವಾಗಿದ್ದು, ನದಿಯಲ್ಲಿ ಸಾಕಷ್ಟು ಸೆಳೆತ ಇದೆ. ಹೀಗಾಗಿ ಘಟನೆ ನಡೆದ ಸ್ಥಳದಲ್ಲಿ ಹುಡಕಾಟ ನಡೆಸುವುದು ಸಹ ಸವಾಲಾಗಿ ಪರಿಣಮಿಸಿದೆ.

ನೀರಿನ ಪ್ರಮಾಣ ಕಡಿಮೆ ಆದರೆ ಕೊಚ್ಚಿಕೊಂಡು ಹೋದ ಸ್ಥಳದಿಂದ ಸುಮಾರು ನಾಲ್ಕೈದು ಕೀಲೋಮೀಟರ್‌ ದೂರದವರೆಗೂ ಶನಿವಾರ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.

ನೀರಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳದಲ್ಲಿ ಶೋಧನಾ ಕಾರ್ಯ ಮಾಡಲು ಆಗುತ್ತಿಲ್ಲ ಎಂದು ಎಸ್ಪಿ ರಿಷಿಕೇಶ ಭಗವಾನ ಸೋನಾವಣೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ