ಆ್ಯಪ್ನಗರ

ಹೈ-ಕ ಗಾಂಧಿ ಸ್ಮಾರಕ ನಿರ್ಮಾಣ ವಿಳಂಬಕ್ಕೆ ದೂರು

ಹೈದ್ರಾಬಾದ್‌ ಕರ್ನಾಟಕ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರ, ದಿ. ಕೊಯಿಲೂರು ಮಲ್ಲಪ್ಪ ರವರ ಸ್ಮಾರಕ ನಿರ್ಮಾಣ ಕಾರ್ಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವಿಳಂಬವಾಗುತ್ತಿದ್ದು, ಕೂಡಲೇ ಆದೇಶ ಹೊರಡಿಸಿ ಸ್ಮಾರಕ ನಿರ್ಮಿಸಲು ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಕೊಯಿಲೂರು ಮಲ್ಲಪ್ಪ ನವರ ಅಭಿಮಾನಿಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

Vijaya Karnataka 2 Oct 2019, 10:03 pm
ಯಾದಗಿರಿ:ಹೈದ್ರಾಬಾದ್‌ ಕರ್ನಾಟಕ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರ, ದಿ. ಕೊಯಿಲೂರು ಮಲ್ಲಪ್ಪ ರವರ ಸ್ಮಾರಕ ನಿರ್ಮಾಣ ಕಾರ್ಯ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವಿಳಂಬವಾಗುತ್ತಿದ್ದು, ಕೂಡಲೇ ಆದೇಶ ಹೊರಡಿಸಿ ಸ್ಮಾರಕ ನಿರ್ಮಿಸಲು ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಕೊಯಿಲೂರು ಮಲ್ಲಪ್ಪ ನವರ ಅಭಿಮಾನಿಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
Vijaya Karnataka Web delay in construction of hk gandhi mallapp memorial
ಹೈ-ಕ ಗಾಂಧಿ ಸ್ಮಾರಕ ನಿರ್ಮಾಣ ವಿಳಂಬಕ್ಕೆ ದೂರು


ಭಾನುವಾರ ಯಾದಗಿರಿಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಭಿಮಾನಿಗಳ ಸಂಘದ ಅಧ್ಯಕ್ಷ ಹಣಮಂತ್ರಾಯಗೌಡ ಮಾಲಿ ಪಾಟೀಲ್‌ ನೇತೃತ್ವದಲ್ಲಿಭೇಟಿ ಮಾಡಿದ ಅಭಿಮಾನಿಗಳ ನಿಯೋಗ ತಮ್ಮ ಅವಧಿಯಲ್ಲಿಎರಡು ಕೋಟಿ ಬಿಡುಗಡೆಯಾಗಿದ್ದರೂ ಕೆಲಸ ಆಗುತ್ತಿಲ್ಲಎಂದು ದೂರು ಸಲ್ಲಿಸಿದರು.

ಹೈದ್ರಾಬಾದ್‌ ಕರ್ನಾಟಕದ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರ, ದಿವಂಗತ ಕೊಯಿಲೂರು ಮಲ್ಲಪ್ಪಾಜೀ ಯವರ ಸ್ಮಾರಕ ನಿರ್ಮಾಣಕ್ಕಾಗಿ ತಾವು ಮುಖ್ಯಮಂತ್ರಿ ಆಗಿದ್ದ ವೇಳೆ ಸ್ಮಾರಕ ನಿರ್ಮಾಣಕ್ಕಾಗಿ ಎರಡು ಕೋಟಿ ರೂಗಳನ್ನು ಅನುದಾನವನ್ನು ನೀಡಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಕಾಮಗಾರಿ ಆರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೆಲಸ ಪ್ರಾರಂಭವಾಗದೇ ಹಾಗೇಯೇ ಉಳಿದಿದೆ. ಸಮಾಧಿಯು ಅನಾಥವಾಗಿ ಉಳಿದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಿ ಆದಷ್ಟು ಬೇಗನೆ ಸ್ಮಾರಕ ನಿರ್ಮಾಣ ಹಾಗೂ ಅವರ ಕನಸಿನ ಕೂಸಾದ ಕುಷ್ಠ ರೋಗಿಗಳ ಕೇಂದ್ರವು ಪಾಳು ಬಿದ್ದಿದ್ದು, ಅಲ್ಲಿವಾಸ ಮಾಡಲು ಕೂಡ ಆಗುತ್ತಿಲ್ಲ. ಆದ್ದರಿಂದ ಕುಷ್ಠರೋಗಿಗಳ ಕೇಂದ್ರವನ್ನು ಮರುನಿರ್ಮಾಣ ಮಾಡಿ ಕುಷ್ಠರೋಗಿಗಳಿಗೆ ಮೂಲ ಸೌಕರ್ಯ ಒದಗಿಸಿಕೊಡಬೇಕೆಂದು ದಿವಂಗತ ಕೊಯಿಲೂರು ಮಲ್ಲಪ ಅವರ ಅಭಿಮಾನಿ ಬಳಗದಿಂದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ವಿಳಂಬವಾದರೆ ಕೊಯಿಲೂರು ಮಲ್ಲಪ್ಪಾಜೀಯ ಸಮಾಧಿ ಹತ್ತಿರ ನಾವು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಮಲ್ಲಪ್ಪಾಜಿಯ ಅಭಿಮಾನಿಗಳ ಅಧ್ಯಕ್ಷ ಹಣಮಂತರಾಯಗೌಡ ಮಾಲೀಪಾಟೀಲ್‌, ನಿಂಗಣ್ಣ ಜಡಿ ವಡಿಗೇರಾ. ಮಲ್ಲಯ್ಯ ಕಸಿಬಿ ಯಾದಗಿರಿ, ಜಟ್ಟೆಪ್ಪ ಪೂಜಾರಿ ಕೆಂಭಾವಿ, ಭೀಮು ಪೂಜಾರಿ ಯಾದಗಿರಿ, ಹರೀಶ ಪೂಜಾರಿ ಯಾದಗಿರಿ, ಬೀರಲಿಂಗಪ್ಪ ಕಿಲ್ಲನಕೇರಾ ಸೇರಿದಂತೆ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ