ಆ್ಯಪ್ನಗರ

ಇಡ್ಲೂರು ಅಂಗನವಾಡಿ ಮಕ್ಕಳಿಗಿಲ್ಲ ಅಕ್ಕರೆಯ ಆರೈಕೆ

ಗ್ರಾಮೀಣ ಭಾಗದ ಪುಟಾಣಿಗಳ ಕಲಿಕೆಗೆ ಪೂರಕವಾಗಬೇಕಿದ್ದ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದು, ಅಕ್ಕರೆಯ ಆರೈಕೆಯಿಲ್ಲದಂತಾಗಿದೆ ಎಂಬುದಕ್ಕೆ ಸಮೀಪದ ಇಡ್ಲೂರು ಗ್ರಾಮದ ಅಂಗನವಾಡಿ ಕೇಂದ್ರ-2 ತಾಜಾ ಉದಾಹರಣೆ.

Vijaya Karnataka 23 Nov 2018, 9:58 pm
ನರಸಪ್ಪ ನಾರಾಯಣೋರ ಯಾದಗಿರಿ: ಗ್ರಾಮೀಣ ಭಾಗದ ಪುಟಾಣಿಗಳ ಕಲಿಕೆಗೆ ಪೂರಕವಾಗಬೇಕಿದ್ದ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದು, ಅಕ್ಕರೆಯ ಆರೈಕೆಯಿಲ್ಲದಂತಾಗಿದೆ ಎಂಬುದಕ್ಕೆ ಸಮೀಪದ ಇಡ್ಲೂರು ಗ್ರಾಮದ ಅಂಗನವಾಡಿ ಕೇಂದ್ರ-2 ತಾಜಾ ಉದಾಹರಣೆ.
Vijaya Karnataka Web delicious care for children of idlu anganwadi
ಇಡ್ಲೂರು ಅಂಗನವಾಡಿ ಮಕ್ಕಳಿಗಿಲ್ಲ ಅಕ್ಕರೆಯ ಆರೈಕೆ


ಗುರುಮಠಕಲ್‌ ಮತಕ್ಷೇತ್ರದ ವ್ಯಾಪ್ತಿಯ ಇಡ್ಲೂರು ಗ್ರಾಮದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಎಚ್‌ಕೆಆರ್‌ಡಿಬಿ 2014-15ರಲ್ಲಿ ಸುಮಾರು 10ಲಕ್ಷ ರೂ.ಅನುದಾನ ಮಂಜೂರು ಮಾಡಿ, ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿತ್ತು. ಕಾಮಗಾರಿ ಕೈಗೆತ್ತಿಕೊಂಡ ಅಧಿಕಾರಿಗಳು ನಂತರ ಅವ್ಯವಹಾರದ ಆರೋಪದ ಹಿನ್ನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಿದ್ದಾರೆ.

ಹೀಗಾಗಿ ಇಡ್ಲೂರು ಗ್ರಾಮದ ಅಂಗನವಾಡಿ ಕೇಂದ್ರ-2ರ ಮಕ್ಕಳು ಬಾಡಿಗೆ ಮನೆಯಲ್ಲಿ ಕಲಿಯುತ್ತಿದ್ದಾರೆ. ಇದಕ್ಕಾಗಿ ಮಾಸಿಕ 750 ರೂ.ಬಾಡಿಗೆ ನೀಡಲಾಗುತ್ತಿದೆ. ಆಹಾರ ಧಾನ್ಯ ಸಂಗ್ರಹ, ಅಕ್ಷರ ಕಲಿಕೆ, ಮಕ್ಕಳ ಊಟ ಹೀಗೆ ಇಕ್ಕಟ್ಟಿನಲ್ಲಿ ಕಾಲ ಕಳೆಯುತ್ತಿದ್ದಾರೆ.

ನಿರ್ಮಿತಿ ಕೇಂದ್ರದ ಅಧಿಕಾರಿಗಳ ಅವ್ಯವಹಾರಕ್ಕೆ ಪುಟಾಣಿ ಮಕ್ಕಳು ಸೇರಿದಂತೆ ಅಂಗನವಾಡಿ ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಕಾರ್ಯ ಶ್ಲಾಘನೀಯ. ಜತೆಗೆ ನೆನಗುದಿಗೆ ಬಿದ್ದಿರುವ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಬಾಡಿಗೆ ಮನೆಯಲ್ಲಿ ಕಲಿಯುವ ಕಂದಮ್ಮಗಳಿಗೆ ಮುಕ್ತಿ ನೀಡಬೇಕಿದೆ ಎನ್ನುವುದು ಪ್ರಜ್ಞಾವಂತರ ಒತ್ತಾಯ.

ಅಧಿಕಾರಿಗಳು ಮಾಡಿದ ತಪ್ಪಿಗೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಸ್ಥಗಿತಗೊಂಡ ಪರಿಣಾಮ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ತೆರೆಯಲಾಗಿದ್ದು ಮಕ್ಕಳು ಮೂಲಸೌಲಭ್ಯಗಳ ತೊಂದರೆ ಎದುರಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

- ಶಿವುಕುಮಾರ ಆವಂಟಿ, ಸ್ಥಳೀಯ.

ಇಡ್ಲೂರು ಗ್ರಾಮದದಲ್ಲಿ ನನೆಗುದಿಗೆ ಬಿದ್ದ ಅಂಗನವಾಡಿ ಕೇಂದ್ರ ಕುರಿತು ತಾಪಂ ಸಾಮಾನ್ಯ ಸಭೆಯಲ್ಲಿ ಎರಡ್ಮೂರು ಸಲ ಪ್ರಸ್ತಾಪಿಸಿದ್ದೇನೆ. ಕಟ್ಟಡ ನಿರ್ಮಾಣ ಕೈಗೆತ್ತಿಕೊಂಡ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಗೈರಾಗುವ ಮೂಲಕ ಜಾರಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್‌ ಭವನವು ಸಹ ಅರ್ಧಕ್ಕೆ ನಿಂತಿದ್ದು , ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ.

- ಭಾಸ್ಕರ್‌ರೆಡ್ಡಿ ತಾಪಂ ಸದಸ್ಯ.


ಸುಮಾರು ಇಪ್ಪತ್ತು ಕಡೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ನ.27ಕ್ಕೆ ಸಾಮಾನ್ಯ ಸಭೆಯಿದ್ದು, ತದ ನಂತರ ಕಾಮಗಾರಿ ನಿರ್ಮಾಣಕ್ಕೆ ಮುಂದಾಗುತ್ತೇವೆ. ಇಡ್ಲೂರು ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿದ್ದು ಜನವರಿ ತಿಂಗಳ ಅಂತ್ಯದವರೆಗೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ.

- ಎಚ್‌.ಎಂ. ವಿಶ್ವನಾಥ ಪ್ರಾಜೆಕ್ಟ್ ಮ್ಯಾನೇಜರ್‌, ನಿರ್ಮಿತಿ ಕೇಂದ್ರ ಯಾದಗಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ