ಆ್ಯಪ್ನಗರ

ಡಿ 30ರವರೆಗೆ ನೀರು ಹರಿಸಲು ಆಗ್ರಹ

ತಾಲೂಕಿನ ಕೊನೆಯ ಭಾಗದ ಐಕೂರು,ಕುರಿಹಾಳ, ಗೊಂದೆನೂರು, ತುಮಕೂರು, ಹೈಯಾಳ ಸೇರಿದಂತೆ ಇನ್ನಿತರ ಗ್ರಾಮಗಳ ಕಾಲುವೆಗೆ ನೀರು ಸಮರ್ಪಕವಾಗಿ ತಲುಪದ ಕಾರಣ ಡಿ.30ರವರೆಗೆ ಕಾಲುವೆಗೆ ನೀರು ಹರಿಸುವಂತೆ ಬಿಜೆಪಿ ರೈತ ಮೋರ್ಚಾ ಮುಖಂಡರು ಆಗ್ರಹಿಸಿದ್ದಾರೆ.

Vijaya Karnataka 12 Dec 2018, 11:33 pm
ಶಹಾಪುರ: ತಾಲೂಕಿನ ಕೊನೆಯ ಭಾಗದ ಐಕೂರು,ಕುರಿಹಾಳ, ಗೊಂದೆನೂರು, ತುಮಕೂರು, ಹೈಯಾಳ ಸೇರಿದಂತೆ ಇನ್ನಿತರ ಗ್ರಾಮಗಳ ಕಾಲುವೆಗೆ ನೀರು ಸಮರ್ಪಕವಾಗಿ ತಲುಪದ ಕಾರಣ ಡಿ.30ರವರೆಗೆ ಕಾಲುವೆಗೆ ನೀರು ಹರಿಸುವಂತೆ ಬಿಜೆಪಿ ರೈತ ಮೋರ್ಚಾ ಮುಖಂಡರು ಆಗ್ರಹಿಸಿದ್ದಾರೆ.
Vijaya Karnataka Web demand for water until december30
ಡಿ 30ರವರೆಗೆ ನೀರು ಹರಿಸಲು ಆಗ್ರಹ


ಈ ಕುರಿತು ಹತ್ತಿರದ ಭೀಮರಾಯನಗುಡಿ ಕೆಬಿಜೆಎನ್‌ಎಲ್‌ ಅಧೀಕ್ಷ ಕ ಅಭಿಯಂತರರಿಗೆ ಮನವಿ ಸಲ್ಲಿಸಿದರು. ಈ ಭಾಗದ ರೈತರು ಈಗಾಗಲೇ ಶೇಂಗಾ, ಹತ್ತಿ, ಜೋಳ, ಮೆಣಸಿನಕಾಯಿ ಬಿತ್ತನೆ ಮಾಡಿದ್ದು, ನೀರು ಹರಿಸದಿದ್ದಲ್ಲಿ ಬೆಳೆ ಸಂಪೂರ್ಣ ನಷ್ಟವಾಗುತ್ತವೆ.ಇದರಿಂದ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ ಕಾರಣ ಡಿ.30ರವರೆಗೆ ಕಾಲುವೆಗೆ ನೀರು ಹರಿಸಬೇಕೆಂದು ಮನವಿ ಸಲ್ಲಿಸಿದರು.

ರೈತ ಮುಖಂಡ ಯಲ್ಲಯ್ಯ ನಾಯಕ, ಹಣಮಂತರಾವ ಐಕೂರ,ಶರಣಗೌಡ ಹುಲಕಲ್‌, ಲಿಂಗಣ್ಣಗೌಡ ಹೆರುಂಡಿ, ದೇವಪ್ಪ ಉಪ್ಪಾರ, ಶಾಂತವೀರ ಸಜ್ಜನ, ನಾರಾಯಣ ಕಾಡಮಗೇರಿ, ಮಲ್ಲಪ್ಪ, ಯಂಕಪ್ಪ, ನಿಂಗಯ್ಯ ದೊರಿ, ಮೌನೇಶ ನಾಟೇಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ