ಯಾದಗಿರಿ:ಶೇಂಗಾ ಬೀಜ ವಿತರಣೆಯಲ್ಲಿಸಾಕಷ್ಟು ವಿಳಂಬವಾಗುತ್ತಿರುವ ಪರಿಣಾಮ ಅನ್ನದಾತರು ಕೃಷಿ ಇಲಾಖೆ ವಿರುದ್ಧ ಆಕ್ರೋಶಗೊಂಡಿದ್ದಾರೆ. ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದೀಗ ಪೊಲೀಸ್ ಭದ್ರತೆಯಲ್ಲಿಯೇ ಶೇಂಗಾ ಬೀಜ ಪೂರೈಸಲಾಗುತ್ತಿದ್ದು, ರೈತರ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಲು ಕೃಷಿ ಇಲಾಖೆ ಹೊಸ ಉಪಾಯ ಹುಡುಕಿಕೊಂಡಿದೆ.
ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿಪೊಲೀಸ್ ಭದ್ರತೆ ಮೂಲಕವೇ ಅನ್ನದಾತರಿಗೆ ಶೇಂಗಾ ಬೀಜ ವಿತರಿಸಲಾಗುತ್ತಿದೆ. ಖಾಕಿ ಪಡೆ ಕಂಡು ರೈತರು ದಂಗಾಗಿದ್ದಾರೆ. ಬಂದಳ್ಳಿ, ಮೋಟ್ನಳ್ಳಿ, ಹೊನಗೇರಾ ಸೇರಿ ಇತರ ಗ್ರಾಮದ ರೈತರು ಬೆಳ್ಳಂ ಬೆಳಗ್ಗೆ ಆಗಮಿಸುವ ಮೂಲಕ ಸರದಿಯಲ್ಲಿನಿಂತುಕೊಂಡಿದ್ದಾರೆ. ಸಾಕಷ್ಟು ನೂಕು ನುಗ್ಗಲು ಉಂಟಾಗಿದೆ. ಬೀಜಕ್ಕಾಗಿ ಪರಿತಪಿಸುವಂತಾಗಿದೆ. ಶೇಂಗಾ ಬೀಜ ಪೂರೈಕೆಯಲ್ಲಿಯೇ ತುಂಬಾ ನಿಧಾನವಾಗುತ್ತಿರುವುದು ಅನ್ನದಾತರಿಗೆ ಸಂಕಷ್ಟಕ್ಕೆ ಕಾರಣವಾಗಿತ್ತು.
ಅಧಿಕಾರಿಗಳು ಮೊದಲೇ ಬುಧವಾರದಂದು ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿಶೇಂಗಾ ಬೀಜ ವಿತರಿಸಲಾಗುವುದು ಎಂದು ತಿಳಿಸಿದ ಪರಿಣಾಮ ಹತ್ತಿಕುಣಿಗೆ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿದ್ದಾರೆ. ರೈತರ ಬೇಡಿಕೆ ಗಮನಿಸಿದ ಅಧಿಕಾರಿಗಳು ಬುಧವಾರ ಬೆಳಗ್ಗೆ ಕೇಂದ್ರ ಆವರಣದಲ್ಲಿಪೊಲೀಸರ ಸಹಕಾರದಿಂದ ಬಿದುರು ಕಟ್ಟಿಗೆಗಳ ಸಾಲು ನಿಮಾರ್ಣಮಾಡಿ ರೈತರು ಸರದಿಯಲ್ಲಿನಿಂತು ಬೀಜ ಪಡೆದುಕೊಳ್ಳಲು ಎರಡು ಕೌಂಟರ್ಗಳನ್ನು ತೆರೆದರು.
ಯಾದಗಿರಿ ಗ್ರಾಮೀಣ ಠಾಣೆ ಪಿಎಸ್ಐ ವೀರಣ್ಣ ಮಗ್ಗಿ ಪೊಲೀಸ್ ವ್ಯಾನ್ನೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿಪೊಲೀಸರನ್ನು ಕರೆದುಕೊಂಡು ಬಂದು ಬ್ಯಾರಿಕೇಡ್ ಹಾಕಿ ವ್ಯವಸ್ಥಿತವಾಗಿ ರೈತರು ಬೀಜ ಪಡೆದುಕೊಳ್ಳಲು ವಾತಾವರಣ ನಿರ್ಮಾಣ ಮಾಡಿದರು.
ಸರದಿಯಲ್ಲಿನಿಂತಿದ್ದ ರೈತರಿಗೆ ಈ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ಬೆಳಗೇರಿ ರೈತರೊಂದಿಗೆ ಮಾತನಾಡಿ ಈಗಾಗಲೇ ಕೇಂದ್ರಕ್ಕೆ 650 ಕ್ವಿಂಟಾಲ್ ಶೇಂಗಾ ಬೀಜ ಬಂದಿದೆ. ಇನ್ನೂ ಎರಡು ದಿನಗಳಲ್ಲಿಮತ್ತೆ ಶೇಂಗಾ ಬೀಜ ಪೂರೈಕೆಯಾಗುತ್ತವೆ ಎಂದರು.
ಸಾಮಾನ್ಯ ರೈತರಿಗೆ ಪ್ರತಿ ಕ್ವಿಂಟಾಲ್ ಶೇಂಗಾ ಬೀಜಕ್ಕೆ 9,600 ರೂ. ಜತೆಗೆ ಜಮೀನು ಪಹಣಿ ಮತ್ತು ಆಧಾರ್ ಕಾರ್ಡ್ ಪಡೆದು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರಿಗೆ 8,650 ರೂ. ಪಡೆದು 1 ಕ್ವಿಂಟಾಲ್ ಬೀಜ ನೀಡಲಾಗುತ್ತದೆ.
ಹತ್ತಿಕುಣಿ ವಲಯದಲ್ಲಿರೈತರು ಸ್ವಂತ ಕೃಷಿ ಪಂಪ್ಸೆಟ್ ಹೊಂದುವ ಮೂಲಕ ತಮ್ಮ ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ, ಬೀಜಕ್ಕಾಗಿ ಹಗಲು ರಾತ್ರಿ ರೈತರು ಹೋರಾಟ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ ಕೃಷಿ ಇಲಾಖೆ ಬೇಡಿಕೆಗೆ ಅನುಗುಣವಾಗಿ ಬೀಜ ಪೂರೈಸಬೇಕು ಎಂಬುದು ರೈತರ ಆಗ್ರಹವಾಗಿದೆ.
ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿಪೊಲೀಸ್ ಭದ್ರತೆ ಮೂಲಕವೇ ಅನ್ನದಾತರಿಗೆ ಶೇಂಗಾ ಬೀಜ ವಿತರಿಸಲಾಗುತ್ತಿದೆ. ಖಾಕಿ ಪಡೆ ಕಂಡು ರೈತರು ದಂಗಾಗಿದ್ದಾರೆ. ಬಂದಳ್ಳಿ, ಮೋಟ್ನಳ್ಳಿ, ಹೊನಗೇರಾ ಸೇರಿ ಇತರ ಗ್ರಾಮದ ರೈತರು ಬೆಳ್ಳಂ ಬೆಳಗ್ಗೆ ಆಗಮಿಸುವ ಮೂಲಕ ಸರದಿಯಲ್ಲಿನಿಂತುಕೊಂಡಿದ್ದಾರೆ. ಸಾಕಷ್ಟು ನೂಕು ನುಗ್ಗಲು ಉಂಟಾಗಿದೆ. ಬೀಜಕ್ಕಾಗಿ ಪರಿತಪಿಸುವಂತಾಗಿದೆ. ಶೇಂಗಾ ಬೀಜ ಪೂರೈಕೆಯಲ್ಲಿಯೇ ತುಂಬಾ ನಿಧಾನವಾಗುತ್ತಿರುವುದು ಅನ್ನದಾತರಿಗೆ ಸಂಕಷ್ಟಕ್ಕೆ ಕಾರಣವಾಗಿತ್ತು.
ಅಧಿಕಾರಿಗಳು ಮೊದಲೇ ಬುಧವಾರದಂದು ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿಶೇಂಗಾ ಬೀಜ ವಿತರಿಸಲಾಗುವುದು ಎಂದು ತಿಳಿಸಿದ ಪರಿಣಾಮ ಹತ್ತಿಕುಣಿಗೆ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿದ್ದಾರೆ. ರೈತರ ಬೇಡಿಕೆ ಗಮನಿಸಿದ ಅಧಿಕಾರಿಗಳು ಬುಧವಾರ ಬೆಳಗ್ಗೆ ಕೇಂದ್ರ ಆವರಣದಲ್ಲಿಪೊಲೀಸರ ಸಹಕಾರದಿಂದ ಬಿದುರು ಕಟ್ಟಿಗೆಗಳ ಸಾಲು ನಿಮಾರ್ಣಮಾಡಿ ರೈತರು ಸರದಿಯಲ್ಲಿನಿಂತು ಬೀಜ ಪಡೆದುಕೊಳ್ಳಲು ಎರಡು ಕೌಂಟರ್ಗಳನ್ನು ತೆರೆದರು.
ಯಾದಗಿರಿ ಗ್ರಾಮೀಣ ಠಾಣೆ ಪಿಎಸ್ಐ ವೀರಣ್ಣ ಮಗ್ಗಿ ಪೊಲೀಸ್ ವ್ಯಾನ್ನೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿಪೊಲೀಸರನ್ನು ಕರೆದುಕೊಂಡು ಬಂದು ಬ್ಯಾರಿಕೇಡ್ ಹಾಕಿ ವ್ಯವಸ್ಥಿತವಾಗಿ ರೈತರು ಬೀಜ ಪಡೆದುಕೊಳ್ಳಲು ವಾತಾವರಣ ನಿರ್ಮಾಣ ಮಾಡಿದರು.
ಸರದಿಯಲ್ಲಿನಿಂತಿದ್ದ ರೈತರಿಗೆ ಈ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ಬೆಳಗೇರಿ ರೈತರೊಂದಿಗೆ ಮಾತನಾಡಿ ಈಗಾಗಲೇ ಕೇಂದ್ರಕ್ಕೆ 650 ಕ್ವಿಂಟಾಲ್ ಶೇಂಗಾ ಬೀಜ ಬಂದಿದೆ. ಇನ್ನೂ ಎರಡು ದಿನಗಳಲ್ಲಿಮತ್ತೆ ಶೇಂಗಾ ಬೀಜ ಪೂರೈಕೆಯಾಗುತ್ತವೆ ಎಂದರು.
ಸಾಮಾನ್ಯ ರೈತರಿಗೆ ಪ್ರತಿ ಕ್ವಿಂಟಾಲ್ ಶೇಂಗಾ ಬೀಜಕ್ಕೆ 9,600 ರೂ. ಜತೆಗೆ ಜಮೀನು ಪಹಣಿ ಮತ್ತು ಆಧಾರ್ ಕಾರ್ಡ್ ಪಡೆದು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರಿಗೆ 8,650 ರೂ. ಪಡೆದು 1 ಕ್ವಿಂಟಾಲ್ ಬೀಜ ನೀಡಲಾಗುತ್ತದೆ.
ಹತ್ತಿಕುಣಿ ವಲಯದಲ್ಲಿರೈತರು ಸ್ವಂತ ಕೃಷಿ ಪಂಪ್ಸೆಟ್ ಹೊಂದುವ ಮೂಲಕ ತಮ್ಮ ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ, ಬೀಜಕ್ಕಾಗಿ ಹಗಲು ರಾತ್ರಿ ರೈತರು ಹೋರಾಟ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ ಕೃಷಿ ಇಲಾಖೆ ಬೇಡಿಕೆಗೆ ಅನುಗುಣವಾಗಿ ಬೀಜ ಪೂರೈಸಬೇಕು ಎಂಬುದು ರೈತರ ಆಗ್ರಹವಾಗಿದೆ.