ಆ್ಯಪ್ನಗರ

ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೂ ಕುಡಿಯುವ ನೀರು

​​ನನ್ನ ತಾಯಿ ರಾಜಕೀಯ ಜೀವನದಲ್ಲಿ ಒಳ್ಳೆಯ ಕೆಲಸ ಮಾಡು ಎಂದು ಉಪದೇಶಿಸಿದ್ದರು. ಅವರ ನಡೆಯಂತೆ ಕ್ಷೇತ್ರದಲ್ಲಿ ಇದುವರೆಗೂ ಸಾವಿರಾರೂ ಕೋಟಿ ರೂ.ಅನುದಾನ ತಂದು ಜನರಿಗೆ ಒಳ್ಳೆಯದನ್ನು ಮಾಡುತ್ತಿರುವೆ.

Vijaya Karnataka Web 28 Dec 2021, 11:46 pm
ಸುರಪುರ: ಸುರಪುರ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾ ತಲೆಬಾಗುವೆ. ಅವರ ಆಶೀರ್ವಾದ ಇರುವವರೆಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಗೆ ಹಗಲಿರುಳು ಶ್ರಮಿಸುವೆ. ನಾನು ಈ ಕ್ಷೇತ್ರದ ಜನ ಸೇವಕ. ವಿರೋಧಿಗಳಿಗೆ ಅಭಿವೃದ್ ಕೆಲಸ ಮಾಡಿ ಉತ್ತರ ಕೊಡುವುದೇ ನನ್ನ ಗುರಿ ಎಂದು ಶಾಸಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ರಾಜೂಗೌಡ ಹೇಳಿದರು.
Vijaya Karnataka Web ನಲ್ಲಿ
ನಲ್ಲಿ


ನಗರದಲ್ಲಿಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿತ್ತು. 15-20 ದಿವಸಕ್ಕೆ ನೀರು ಬರುತ್ತಿತ್ತು. ನೀರಿಗಾಗಿ ಜನ ಪರಿತಪ್ಪಿಸುತ್ತಿದ್ದು. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಂಡು ಸರಕಾರದಿಂದ 198 ಕೋಟಿ ರೂ. ಅನುದಾನ ಮಂಜೂರು ಮಾಡಿಸಿರುವೆ ಎಂದರು.

ಯಾದಗಿರಿಯಲ್ಲಿ ಹಣ ವಸೂಲಿ ಮಾಡಿ ಸಸ್ಪೆಂಡ್‌ ಆಗಿದ್ದ ಪೇದೆ 5 ದಿನದಲ್ಲೇ ಕೆಲಸಕ್ಕೆ ವಾಪಸ್..!

ಮುಂದಿನ ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ನಗರದ ಜನರ ದಶಕಗಳ ಬೇಡಿಕೆ ಈಡೇರಲಿದೆ ಎಂದರು.

ರಾಜಕೀಯದಲ್ಲಿ ಎಲ್ಲರೂ ನಮ್ಮವರಲ್ಲ. ರಾಜಕಾರಣಿಗೆ ಅವಮಾನವನ್ನು ಸಹಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ರಾಜಕೀಯಕ್ಕೆ ಬರಬೇಕು. ಎದುರಾಳಿ ಇದ್ದರೆ ಮಾತ್ರ ಜಾಗೃತರಾಗುತ್ತೇವೆ. ರಾಜಕಾರಣಿಗಳು ಮತದಾರರಿಗೆ ಹೆದರಬೇಕು. ನಾವು ಅವರಿಗೆ ಹೆದರಿಸಬಾರದು. ಅವರ ಆಶೀರ್ವಾದ ಮಾಡಿದರೆ ಮಾತ್ರ ನಾವು ಅಧಿಕಾರ ಸ್ಥಾನದಲ್ಲಿ ಕುಳಿತಿರಲು ಸಾಧ್ಯ. ಕಾನೂನು ಮುಂದೆ ಯಾರು ದೊಡ್ಡವರಲ್ಲ. ಕಾನೂನು ಮೀರಿ ನಡೆಯುವವರಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದು ಹೇಳಿದರು.

ನನ್ನ ತಾಯಿ ರಾಜಕೀಯ ಜೀವನದಲ್ಲಿ ಒಳ್ಳೆಯ ಕೆಲಸ ಮಾಡು ಎಂದು ಉಪದೇಶಿಸಿದ್ದರು. ಅವರ ನಡೆಯಂತೆ ಕ್ಷೇತ್ರದಲ್ಲಿ ಇದುವರೆಗೂ ಸಾವಿರಾರೂ ಕೋಟಿ ರೂ.ಅನುದಾನ ತಂದು ಜನರಿಗೆ ಒಳ್ಳೆಯದನ್ನು ಮಾಡುತ್ತಿರುವೆ. ಅಮ್ಮನನ್ನು ಕಳೆದುಕೊಂಡು ಎರಡು ವರ್ಷವಾಯಿತು. ಕ್ಷೇತ್ರದ ಪ್ರತಿಯೊಬ್ಬ ಮಹಿಳೆ ಇಂದು ನನಗೆ ತಾಯಿ ರೂಪದಲ್ಲಿ ಹಿಂದೆ ನಿಂತು ಆಶೀರ್ವಾದ ಮಾಡುತ್ತಿದ್ದಾರೆ ಎಂದು ಭಾವುಕರಾಗಿ ನುಡಿದರು.

ಕ್ಷೇತ್ರದ ಜನತೆಯೇ ನನ್ನ ಮಾಲೀಕರು. ಅವರ ಮನಸ್ಸಿನ ಪ್ರೀತಿ, ವಿಶ್ವಾಸವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನನಗೆ ಆಶೀರ್ವಾದ ಮಾಡಿ ಈ ಸ್ಥಾನ ಮಾನವನ್ನು ಕಲ್ಪಿಸಿಕೊಟ್ಟ ಈ ಕ್ಷೇತ್ರದ ಜನತೆಯ ಋುಣವನ್ನು ನಾನೆಂದು ಮರೆಯಲಾರೆ ಎಂದರು.

ಯಾದಗಿರಿಯಲ್ಲಿ ಶಾಲಾ ಮಕ್ಕಳ ಕ್ಷೀರ ಭಾಗ್ಯಕ್ಕೆ ಕನ್ನ..! ಸರ್ಕಾರಿ ಅಧಿಕಾರಿಯೇ ಸೂತ್ರಧಾರ..?

ಸಿಎಂ ಬಸವರಾಜ ಬೊಮ್ಮಾಯಿ ಜ.12ರಂದು ಕ್ಷೇತ್ರಕ್ಕೆ ಬಂದು ರೂ. 765 ಕೋಟಿಯ ಯೋಜನೆಗೆ ಅಡಿಗಲ್ಲು ನೆರವೇರಿಸಲಿದ್ದಾರೆ. ಕಕ್ಕೇರಾದಲ್ಲಿ ಸೈನಿಕ ಶಾಲೆಯಲ್ಲಿ ಪ್ರಾರಂಭಿಸಲಾಗುವುದು. ಕ್ಷೇತ್ರದ ಅಭಿವೃದ್ಯೇ ನನ್ನ ಉಸಿರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನನ್ನ ಮಹಾನ್‌ ನಾಯಕ ಕ್ಷೇತ್ರಕ್ಕೆ ಅವರ ಕೊಡುಗೆ ಮರೆಯಲಾರೆನು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ